ಆ್ಯಪ್ನಗರ

ಶಿಕ್ಷಕಿ ಕರ್ತವ್ಯ ಲೋಪಕ್ಕೆ ಆಕ್ರೋಶ

ಜೊಯಿಡಾ : ತಾಲೂಕಿನ ಇಳವಾ ಕಿರಿಯ ಪ್ರಾಥಮಿಕ ಶಾಲೆಯಲ್ಲಿಶಿಕ್ಷಕಿ ಪಾಠ ಮಾಡುತ್ತಿಲ್ಲ, ಶಾಲಾ ಸಮಯವನ್ನು ಸರಿಯಾಗಿ ಪಾಲಿಸುತ್ತಿಲ್ಲ. ಕರ್ತವ್ಯ ಲೋಪ ಎಸಗುತ್ತಿರುವ ಈ ಶಿಕ್ಷಕಿಯ ಮೇಲೆ ಕ್ರಮ ಕೈಗೊಂಡು, ವರ್ಗಾವಣೆ ಮಾಡಬೇಕೆಂದು ಇಳವಾದ ಎಸ್‌ಡಿಎಂಸಿ ಅಧ್ಯಕ್ಷರು ಮತ್ತು ಸ್ಥಳೀಯ ಗ್ರಾಮಸ್ಥರು ಶಿಕ್ಷಣ ಇಲಾಖೆಯನ್ನು ಆಗ್ರಹಿಸಿದ್ದಾರೆ.

Vijaya Karnataka 20 Nov 2019, 5:00 am
ಜೊಯಿಡಾ : ತಾಲೂಕಿನ ಇಳವಾ ಕಿರಿಯ ಪ್ರಾಥಮಿಕ ಶಾಲೆಯಲ್ಲಿಶಿಕ್ಷಕಿ ಪಾಠ ಮಾಡುತ್ತಿಲ್ಲ, ಶಾಲಾ ಸಮಯವನ್ನು ಸರಿಯಾಗಿ ಪಾಲಿಸುತ್ತಿಲ್ಲ. ಕರ್ತವ್ಯ ಲೋಪ ಎಸಗುತ್ತಿರುವ ಈ ಶಿಕ್ಷಕಿಯ ಮೇಲೆ ಕ್ರಮ ಕೈಗೊಂಡು, ವರ್ಗಾವಣೆ ಮಾಡಬೇಕೆಂದು ಇಳವಾದ ಎಸ್‌ಡಿಎಂಸಿ ಅಧ್ಯಕ್ಷರು ಮತ್ತು ಸ್ಥಳೀಯ ಗ್ರಾಮಸ್ಥರು ಶಿಕ್ಷಣ ಇಲಾಖೆಯನ್ನು ಆಗ್ರಹಿಸಿದ್ದಾರೆ.
Vijaya Karnataka Web outrage for teacher misconduct
ಶಿಕ್ಷಕಿ ಕರ್ತವ್ಯ ಲೋಪಕ್ಕೆ ಆಕ್ರೋಶ


ಶಾಲೆಯ ಬೀಗ ತರದ ಶಿಕ್ಷಕಿ : ಪಾಲಕರ ಆಗ್ರಹದ ಮೇರೆಗೆ ಮಂಗಳವಾರ ಸಿಆರ್‌ಪಿ ಗಣಪತಿ ಬಂಡಾರಿ ಮಂಗಳವಾರ ಶಾಲೆಗೆ ಭೇಟಿ ನೀಡಿದರು. ಮುಂಜಾನೆ 11 ಗಂಟೆಗೆ ಶಾಲೆಗೆ ಬಂದ ಮುಖ್ಯ ಶಿಕ್ಷಕಿ ವೆಲ್ಲಿಮಾಧವನ್‌ ಬೀಗದ ಕೈ ತಂದಿರಲಿಲ್ಲ. ಬೀಗ ಒಡೆದು ಬಾಗಿಲು ತೆರೆಯಲಾಯಿತು. ಸಿಆರ್‌ಪಿ ಬಂಡಾರಿಯವರು ಶಿಕ್ಷಕಿಗೆ ಹಾಜರಿ ಪುಸ್ತಕ ತೋರಿಸಿ ಎಂದಾಗ ಕಪಾಟಿನಲ್ಲಿಎಲ್ಲದಾಖಲೆ ಇಟ್ಟಿದ್ದೇನೆ. ಬೀಗ ಮನೆಯಲ್ಲಿದೆ ಎಂದರು. ಮುಖ್ಯಶಿಕ್ಷಕಿಯ ಎಲ್ಲಕರ್ತವ್ಯ ಲೋಪಗಳ ಬಗ್ಗೆ ಎಸ್‌ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರ ಹೇಳಿಕೆ ಪಡೆದು ಮರಳಿದರು.

ಶಾಲೆಯಲ್ಲಿಒಟ್ಟು 3 ಮಕ್ಕಳಿದ್ದಾರೆ. 2-3 ತಿಂಗಳಿಂದ ಶಾಲೆಯಲ್ಲಿಬಿಸಿಯೂಟವನ್ನು ತಯಾರಿಸುತ್ತಿಲ್ಲ. ಅಡುಗೆಯವರು ಇದ್ದರೂ ಗ್ಯಾಸ್‌ ಪೈಪ್‌ನಲ್ಲಿಗ್ಯಾಸ್‌ ಸೋರುತ್ತಿರುವ ಕಾರಣ ಅಡುಗೆ ತಯಾರಿಸುತ್ತಿಲ್ಲಎನ್ನಲಾಗಿದೆ. ಶಾಲೆಯ ಅಡುಗೆ ಕೋಣೆ ಇದ್ದರೂ, ಬಿರುಕು ಬಿಟ್ಟಿರುವ ಕಾರಣ ಬೋಧನಾ ಕೊಠಡಿಯಲ್ಲಿಯೇ ಗ್ಯಾಸ್‌ ಇಟ್ಟು ಅಡುಗೆ ತಯಾರಿಸಲಾಗುತ್ತಿದೆ. ದಸರಾ ನಂತರದಿಂದ ಗ್ಯಾಸ್‌ ಪೈಪ್‌ ಹಾಳಾಗಿರುವ ಕಾರಣ ಶಾಲೆಯಲ್ಲಿಬಿಸಿಯೂಟ ತಯಾರಿಸುತ್ತಿಲ್ಲಎಂದು ಶಿಕ್ಷಕಿ ಮತ್ತು ಅಡುಗೆಯವರು ಹೇಳುತ್ತಾರೆ.

ಒಂದು ಮಗುವಿಗೆ ಆರೋಗ್ಯದಲ್ಲಿತೊಂದರೆ ಇರುವ ಕಾರಣ ಶಾಲೆಗೆ ಬರುತ್ತಿಲ್ಲ. ಎರಡು ಮಕ್ಕಳು ಮಾತ್ರ ಇಲ್ಲಿಓದುತ್ತಿದ್ದು, ಜೂನ್‌ನಿಂದ ಇಲ್ಲಿಯ ವರೆಗೆ ಇಂಗ್ಲಿಷ್‌ ಪಠ್ಯದ ಒಂದು ಪಾಠ ಮಾತ್ರ ಮಾಡಲಾಗಿದೆ ಎನ್ನುವುದು ಪಾಲಕರ ದೂರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ