ಆ್ಯಪ್ನಗರ

ಪಾಕ್‌ ಕೃತ್ಯಕ್ಕೆ ಆಕ್ರೋಶ

ಶಿರಸಿ : ಕೇಂದ್ರ ಸರಕಾರವು ಜನರ ಭಾವನೆಯನ್ನು ಗಮನದಲ್ಲಿಟ್ಟುಕೊಂಡು ಭಯೋತ್ಪಾದಕರಿಗೆ ಕುಮ್ಮಕ್ಕು ನೀಡುವ ಪಾಕ್‌ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ಹಾಗೂ ರಾಷ್ಟ್ರೀಯ ಹಿಂದೂ ಆಂದೋಲನದ ಕಾರ್ಯಕರ್ತರು ಸಹಾಯಕ ಆಯುಕ್ತರ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

Vijaya Karnataka 16 Feb 2019, 5:00 am
ಶಿರಸಿ : ಕೇಂದ್ರ ಸರಕಾರವು ಜನರ ಭಾವನೆಯನ್ನು ಗಮನದಲ್ಲಿಟ್ಟುಕೊಂಡು ಭಯೋತ್ಪಾದಕರಿಗೆ ಕುಮ್ಮಕ್ಕು ನೀಡುವ ಪಾಕ್‌ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ಹಾಗೂ ರಾಷ್ಟ್ರೀಯ ಹಿಂದೂ ಆಂದೋಲನದ ಕಾರ್ಯಕರ್ತರು ಸಹಾಯಕ ಆಯುಕ್ತರ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
Vijaya Karnataka Web outrage over pakistan
ಪಾಕ್‌ ಕೃತ್ಯಕ್ಕೆ ಆಕ್ರೋಶ


ಕಾಶ್ಮೀರದಲ್ಲಿನ ಪ್ರತ್ಯೇಕತಾವಾದಿಗಳ ಭದ್ರತೆ ಸಹಿತ ಎಲ್ಲ ಸೌಲಭ್ಯಗಳನ್ನು ಹಿಂಪಡೆದು ಅವರನ್ನು ಸೆರೆಮನೆಗೆ ತಳ್ಳುವದರೊಂದಿಗೆ ಭಯೋತ್ಪಾದನೆಯ ಮೂಲ ಕೇಂದ್ರಕ್ಕೆ ಕಡಿವಾಣ ಹಾಕಬೇಕು. ಭಾರತದ ಉರಿಯಲ್ಲಿ ಉಗ್ರರು ನಡೆಸಿದ ದಾಳಿಗೆ ಪ್ರತಿಯಾಗಿ ಭಾರತೀಯ ಯೋಧರ ಸರ್ಜಿಕಲ್‌ ಸ್ಟ್ರೈಕ್‌ನಿಂದಲೂ ಪಾಠ ಕಲಿಯದ ಪಾಕಿಸ್ತಾನವು ಜೈಶ-ಎ-ಮೊಹಮ್ಮದ ಉಗ್ರ ಸಂಘಟನೆಯ ಮೂಲಕ ಕಾಶ್ಮೀರದ ಪುಲವಾಮಾ ಜಿಲ್ಲೆಯಲ್ಲಿ ಕೇಂದ್ರೀಯ ಮೀಸಲು ಪೊಲೀಸ್‌ ಪಡೆಯ ಸೈನಿಕರ ಮೇಲೆ ಹೇಡಿಯಂತೆ ದಾಳಿ ನಡೆಸಿರುವುದು ಹೇಯ ಕೃತ್ಯವಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ಶರತ್‌ಕುಮಾರ ಖಂಡಿಸಿದರು.

ಉಗ್ರರು ಭಾರತೀಯ ಸೈನಿಕರ ಹತ್ಯೆ ಮಾಡುವ ಪ್ರಕ್ರಿಯೆ ಪಾಕಿಸ್ತಾನದ ಅಘೋಷಿತ ಯುದ್ಧದ ಭಾಗವಾಗಿದೆ. ಈ ರೀತಿ ದೇಶದ ಸಾರ್ವಭೌಮತೆಗೆ ಸವಾಲೆಸಗುವ ಮತ್ತು ಜಗತ್ತಿನಾದ್ಯಂತ ಹಿಂದುಸ್ಥಾನವನ್ನು ಅಪಹಾಸ್ಯ ಮಾಡುವ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಬೇಕು. ಕಾಶ್ಮೀರದಲ್ಲಿನ ಪ್ರತ್ಯೇಕವಾದಿಗಳಿಗೆ ನೀಡಿದ ರಕ್ಷ ಣೆಯನ್ನು ಹಿಂಪಡೆದು ಇತರ ರಾಜ್ಯಗಳ ಸೆರೆಮನೆಯಲ್ಲಿ ಬಂಧಿಸಬೇಕೆಂದು ಒತ್ತಾಯಿಸಿದರು.

ಭಾರತೀಯ ಸೈನಿಕರ ಬಲಿಯನ್ನು ಪಡೆಯುವ ಪಾಕಿಸ್ತಾನದೊಂದಿಗೆ ಭಾರತವು ಈಗ ಯಾವುದೇ ರೀತಿಯ ಚರ್ಚೆಯನ್ನು ಮಾಡದೆ ನೇರ ಸೇನಾ ಕಾರ್ಯಾಚರಣೆಯನ್ನು ಮಾಡಿ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಪ್ರಮುಖರಾದ ನಂದನ ಸಾಗರ್‌, ವೀಣಾ ಶೆಟ್ಟಿ, ಶ್ರೀನಿವಾಸ್‌, ಚಂದ್ರಕಲಾ ಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ