ಆ್ಯಪ್ನಗರ

ಭತ್ತ ಕೀಟ ಬಾಧೆ ಪರಿಶೀಲನೆ

ಶಿರಸಿ: ಇಲ್ಲಿಯ ಕೃಷಿ ವಿಜ್ಞಾನ ಕೇಂದ್ರದ ಕೀಟ ವಿಜ್ಞಾನಿಗಳು ಅಂಕೋಲಾ ತಾಲೂಕು ಹಿಲ್ಲೂರಬೈಲ್‌, ಅಡಿಗೋಣ, ಬೊಗ್ರಿಬೈಲ್‌ ಮತ್ತು ಹಳಕೇರಿ ಗ್ರಾಮಗಳಿಗೆ ಭೇಟಿ ನೀಡಿ ಭತ್ತದಲ್ಲಿಕೀಟ ರೋಗ ಬಾಧೆ ಕುರಿತು ಪರಿಶೀಲನೆ ನಡೆಸಿದರು.

Vijaya Karnataka 17 Sep 2019, 5:00 am
ಶಿರಸಿ: ಇಲ್ಲಿಯ ಕೃಷಿ ವಿಜ್ಞಾನ ಕೇಂದ್ರದ ಕೀಟ ವಿಜ್ಞಾನಿಗಳು ಅಂಕೋಲಾ ತಾಲೂಕು ಹಿಲ್ಲೂರಬೈಲ್‌, ಅಡಿಗೋಣ, ಬೊಗ್ರಿಬೈಲ್‌ ಮತ್ತು ಹಳಕೇರಿ ಗ್ರಾಮಗಳಿಗೆ ಭೇಟಿ ನೀಡಿ ಭತ್ತದಲ್ಲಿಕೀಟ ರೋಗ ಬಾಧೆ ಕುರಿತು ಪರಿಶೀಲನೆ ನಡೆಸಿದರು.
Vijaya Karnataka Web paddy pest infestation
ಭತ್ತ ಕೀಟ ಬಾಧೆ ಪರಿಶೀಲನೆ


ವಿಜ್ಞಾನಿ ರೂಪಾ ಎಸ್‌. ಪಾಟೀಲ್‌ ನೇತೃತ್ವದಲ್ಲಿಈ ಪರಿಶೀಲನೆ ನಡೆಯಿತು. ಭತ್ತದ ಗದ್ದೆಯಲ್ಲಿಅಲ್ಲಲ್ಲಿಎಲೆ ಸುರಳಿ ಕೀಟ(ಬಿಳಿಎರೆ) ಹಾಗೂ ಕೊಳವೆ ಹುಳು (ಕೊಟ್ಟೆ ಕೀಟ) ಬಾಧೆ ಕಾಣಿಸಿಕೊಂಡಿದ್ದು ನಿರ್ವಹಣಣೆಗೆ ಸಲಹೆ ನೀಡಲಾಗಿದೆ.

ಎಲೆ ಸುರಳಿ ಕೀಟದ ಮರಿ ಹುಳು ಎಲೆಯನ್ನು ಸುರಳಿ ಮಾಡಿ ಅದರ ಒಳಗಡೆಯಿದ್ದು ಹಸಿರು ಭಾಗವನ್ನು ಕೆರೆದು ತಿನ್ನುವುದರಿಂದ ಎಲೆ ಮೇಲೆ ಬಿಳಿ ಪಟ್ಟಿಗಳು ಕಾಣುತ್ತವೆ. ಕೊಳವೆ ಹುಳು ಮರಿಹುಳು ಎಲೆಯನ್ನು ತುಂಡು ತುಂಡಾಗಿ ಕತ್ತರಿಸಿ ಕೊಳವೆಯನ್ನು ಮಾಡಿ ಅದರೊಳಗಿನ ಎಲೆಯ ಹಸಿರು ಭಾಗವನ್ನು ಕೆರೆದು ತಿನ್ನುವುದರಿಂದ ಎಲೆಯ ಮೇಲೆ ಬಿಳಿಯ ಪಟ್ಟಿಗಳನ್ನು ಕಾಣಬಹುದು. ಈ ಎರಡು ಕೀಟಗಳ ಬಾಧೆ ಹೆಚ್ಚಾದಾಗ ಬೆಳವಣಿಗೆ ಕುಂಠಿತವಾಗುವುದಲ್ಲದೆ ಇಳುವರಿ ಮೇಲೆ ಪರಿಣಾಮ ಬೀರುತ್ತದೆ ಎಂದು ವಿವರಿಸಿದರು.

ಹತೋಟಿಗೆ ಜೈವಿಕ ಕೀಟನಾಶಕವಾದ ಮೆಟರೈಜಿಯಂ (ನೋಮೊರಿಯಾ) ರಿಲೈ ಶಿಲೀಂದ್ರದ ಪುಡಿಯನ್ನು 1.0 ಗ್ರಾಂ ಪ್ರತಿ ಲೀಟರ್‌ ನೀರಿಗೆ ಬೆರೆಸಿ ಸಿಂಪಡಿಸಬೇಕು ಅಥವಾ ರಾಸಾಯನಿಕ ಕೀಟನಾಶಕಗಳಾದ ಪ್ರೊಫೆನೋಫಾಸ್‌ 50 ಇಸಿ ಅಥವಾ ಕ್ಲೋರ್‌ಪೈರಿಫಾಸ್‌ 20 ಇಸಿಯನ್ನು 2 ಮಿ.ಲೀ ಪ್ರತಿ ಲೀಟರ್‌ ನೀರಿಗೆ ಬೆರೆಸಿ ಸಿಂಪಡಿಸಬೇಕು. ಸಿಂಪರಣೆಗೆ ಮುನ್ನ ಮುಳ್ಳಿನ ರೆಂಬೆಗಳಿಂದ ಭತ್ತದ ಬೆಳೆಯ ಮೇಲೆ ಹೊಡೆಯುವುದು ಹುಳುಗಳ ಹತೋಟಿಗೆ ಪರಿಣಾಮಕಾರಿಯಾಗುತ್ತದೆ. ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕ ಶ್ರೀಧರ ನಾಯ್ಕ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ