ಕಾರವಾರ: ಮಳೆಗೆ ಕೊಚ್ಚಿಹೋದ ಭತ್ತದ ಬೆಳೆ
ಕಳೆದ ಮಾರ್ಚ್ನಿಂದ ಲಾಕ್ ಡೌನ್ ಘೋಷಣೆಯಾದಾಗ ಹಲವರು ನಗರಗಳಲ್ಲಿನ ತಮ್ಮ ಸಣ್ಣ ಪುಟ್ಟ ಉದ್ಯೋಗ ತ್ಯಜಿಸಿ ಕೃಷಿಯಲ್ಲೇ ಬದುಕು ಕಂಡುಕೊಳ್ಳಲು ಹಳ್ಳಿಗಳಿಗೆ ಮರಳಿದ್ದರು.
Vijaya Karnataka 11 Jul 2020, 3:52 pm
ಕಾರವಾರ: ತಾಲೂಕಿನಲ್ಲಿ ಅಬ್ಬರಿಸಿದ ಮಳೆಯಿಂದ ನೂರಾರು ಎಕರೆ ಕೃಷಿ ಭೂಮಿಗೆ ಹಾನಿಯಾಗಿದ್ದು ರೈತರು ಸಂಕಷ್ಟ ಅನುಭವಿಸುವಂತಾಗಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ನಗರಗಳಲ್ಲಿನ ಉದ್ಯೋಗ ತ್ಯಜಿಸಿ ಹಳ್ಳಿಗಳಿಗೆ ಮರಳಿದವರಿಗೆ ವರುಣನ ಆರ್ಭಟ ಭ್ರಮನಿರಸನ ಉಂಟುಮಾಡಿದೆ.
ಕಳೆದ ರಾತ್ರಿಯಿಂದ ಮಳೆ ಕೊಂಚ ಇಳಿಮುಖವಾಗಿದೆ. ಆದರೆ ಗುರುವಾರದವರೆಗೂ ಮಳೆ ಧಾರಾಕಾರವಾಗಿ ಸುರಿದಿದೆ. ಹಳ್ಳಕೊಳ್ಳಗಳು ಉಕ್ಕಿ ಹರಿದಿದ್ದಲ್ಲದೇ ತಾಲೂಕಿನ ಹಣಕೋಣ, ಹೋಟೆಗಾಳಿ, ದೇವಳಮಕ್ಕಿ , ಬರ್ಗಲ್ ಸೇರಿದಂತೆ ಹತ್ತಾರು ಹಳ್ಳಿಗಳಲ್ಲಿ ಭತ್ತದ ಗದ್ದೆಗೆ ನೀರು ತುಂಬಿಕೊಂಡಿದೆ. ನಾಟಿ ಮಾಡಿದ್ದ ಭತ್ತ ಕೊಚ್ಚಿಹೋಗಿದೆ. ಕೆಲವೆಡೆ ಮಳೆ ನೀರು ಮಣ್ಣುಕಲ್ಲುಗಳನ್ನು ಸಹ ಕೊಚ್ಚಿ ತಂದು ಕೃಷಿ ಭೂಮಿಯಲ್ಲಿತುಂಬಿಸಿದೆ.
ರೈತರ ಗೋಳು : ಕಳೆದ ಮಾರ್ಚ್ನಿಂದ ಲಾಕ್ ಡೌನ್ ಘೋಷಣೆಯಾದಾಗ ಹಲವರು ನಗರಗಳಲ್ಲಿನ ತಮ್ಮ ಸಣ್ಣ ಪುಟ್ಟ ಉದ್ಯೋಗ ತ್ಯಜಿಸಿ ಕೃಷಿಯಲ್ಲೇ ಬದುಕು ಕಂಡುಕೊಳ್ಳಲು ಹಳ್ಳಿಗಳಿಗೆ ಮರಳಿದ್ದರು. ಉತ್ಸಾಹದಿಂದ ಕೃಷಿ ಪ್ರಾರಂಭಿಸಿದರೆ ಆರಂಭದಲ್ಲೇ ಮಳೆ ಮರ್ಮಾಘಾತ ನೀಡಿದೆ. ಮಳೆಯ ಪ್ರಮಾಣ ಹೆಚ್ಚಾದಲ್ಲಿ ಈ ವರ್ಷ ಕೃಷಿಕರ ಸಂಕಷ್ಟ ಹೆಚ್ಚಾಗಲಿದೆ. ಇನ್ನು ಮುಂದಾದರೂ ಹದವಾದ ಮಳೆ ಸುರಿದು ಕೃಷಿಗೆ ಪೂರಕವಾಗಲಿ ಎಂದು ರೈತ ಸದಾನಂದ ನಾಯ್ಕ ಆಶಯ ವ್ಯಕ್ತಪಡಿಸಿದರು.
ತಡೆಗೋಡೆ ನಿರ್ಮಿಸಿ: ದೇವಳಮಕ್ಕಿಯ ನಗೆಕೂವೆಯಲ್ಲಿ ಹತ್ತಾರು ಎಕರೆ ಭತ್ತದ ಗದ್ದೆ ಜಲಾವೃತವಾಗಿವೆ. ಕೊರೊನಾ ಸಂಕಷ್ಟದ ನಡುವೆಯೂ ಎದೆಗುಂದದೆ ರೈತರು ಕಷ್ಟಪಟ್ಟು ನಾಟಿ ಮಾಡಿದ್ದ ಭತ್ತದ ಸಸಿಗಳು ನೀರುಪಾಲಾಗಿವೆ. ನಮ್ಮ ಊರಿನ ಎಷ್ಟೋ ರೈತರು ಕೊರೊನಾ ಸಂಕಷ್ಟದ ನಡುವೆಯೂ ಸಾಲ ಮಾಡಿ ಭತ್ತದ ನಾಟಿ ಮಾಡಿದ್ದಾರೆ. ಆದರೆ ಹಳ್ಳಗಳಿಗೆ ತಡೆಗೋಡೆ ಇಲ್ಲದ ಕಾರಣ ಮಳೆ ನೀರು ಭತ್ತದ ಗದ್ದೆಗೆ ನುಗ್ಗಿ ಸಸಿಗಳು ನೀರುಪಾಲಾಗಿವೆ. ಸಂಬಂಧಪಟ್ಟ ಇಲಾಖೆಯವರು ಶೀಘ್ರದಲ್ಲಿ ತಡೆಗೋಡೆ ನಿರ್ಮಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸ್ಥಳೀಯ ಪ್ರಜ್ವಲ್ ಶೇಟ್ ಆಗ್ರಹಿಸಿದ್ದಾರೆ.
ಕಳೆದ ರಾತ್ರಿಯಿಂದ ಮಳೆ ಕೊಂಚ ಇಳಿಮುಖವಾಗಿದೆ. ಆದರೆ ಗುರುವಾರದವರೆಗೂ ಮಳೆ ಧಾರಾಕಾರವಾಗಿ ಸುರಿದಿದೆ. ಹಳ್ಳಕೊಳ್ಳಗಳು ಉಕ್ಕಿ ಹರಿದಿದ್ದಲ್ಲದೇ ತಾಲೂಕಿನ ಹಣಕೋಣ, ಹೋಟೆಗಾಳಿ, ದೇವಳಮಕ್ಕಿ , ಬರ್ಗಲ್ ಸೇರಿದಂತೆ ಹತ್ತಾರು ಹಳ್ಳಿಗಳಲ್ಲಿ ಭತ್ತದ ಗದ್ದೆಗೆ ನೀರು ತುಂಬಿಕೊಂಡಿದೆ. ನಾಟಿ ಮಾಡಿದ್ದ ಭತ್ತ ಕೊಚ್ಚಿಹೋಗಿದೆ. ಕೆಲವೆಡೆ ಮಳೆ ನೀರು ಮಣ್ಣುಕಲ್ಲುಗಳನ್ನು ಸಹ ಕೊಚ್ಚಿ ತಂದು ಕೃಷಿ ಭೂಮಿಯಲ್ಲಿತುಂಬಿಸಿದೆ.
ರೈತರ ಗೋಳು : ಕಳೆದ ಮಾರ್ಚ್ನಿಂದ ಲಾಕ್ ಡೌನ್ ಘೋಷಣೆಯಾದಾಗ ಹಲವರು ನಗರಗಳಲ್ಲಿನ ತಮ್ಮ ಸಣ್ಣ ಪುಟ್ಟ ಉದ್ಯೋಗ ತ್ಯಜಿಸಿ ಕೃಷಿಯಲ್ಲೇ ಬದುಕು ಕಂಡುಕೊಳ್ಳಲು ಹಳ್ಳಿಗಳಿಗೆ ಮರಳಿದ್ದರು. ಉತ್ಸಾಹದಿಂದ ಕೃಷಿ ಪ್ರಾರಂಭಿಸಿದರೆ ಆರಂಭದಲ್ಲೇ ಮಳೆ ಮರ್ಮಾಘಾತ ನೀಡಿದೆ. ಮಳೆಯ ಪ್ರಮಾಣ ಹೆಚ್ಚಾದಲ್ಲಿ ಈ ವರ್ಷ ಕೃಷಿಕರ ಸಂಕಷ್ಟ ಹೆಚ್ಚಾಗಲಿದೆ. ಇನ್ನು ಮುಂದಾದರೂ ಹದವಾದ ಮಳೆ ಸುರಿದು ಕೃಷಿಗೆ ಪೂರಕವಾಗಲಿ ಎಂದು ರೈತ ಸದಾನಂದ ನಾಯ್ಕ ಆಶಯ ವ್ಯಕ್ತಪಡಿಸಿದರು.
ತಡೆಗೋಡೆ ನಿರ್ಮಿಸಿ: ದೇವಳಮಕ್ಕಿಯ ನಗೆಕೂವೆಯಲ್ಲಿ ಹತ್ತಾರು ಎಕರೆ ಭತ್ತದ ಗದ್ದೆ ಜಲಾವೃತವಾಗಿವೆ. ಕೊರೊನಾ ಸಂಕಷ್ಟದ ನಡುವೆಯೂ ಎದೆಗುಂದದೆ ರೈತರು ಕಷ್ಟಪಟ್ಟು ನಾಟಿ ಮಾಡಿದ್ದ ಭತ್ತದ ಸಸಿಗಳು ನೀರುಪಾಲಾಗಿವೆ. ನಮ್ಮ ಊರಿನ ಎಷ್ಟೋ ರೈತರು ಕೊರೊನಾ ಸಂಕಷ್ಟದ ನಡುವೆಯೂ ಸಾಲ ಮಾಡಿ ಭತ್ತದ ನಾಟಿ ಮಾಡಿದ್ದಾರೆ. ಆದರೆ ಹಳ್ಳಗಳಿಗೆ ತಡೆಗೋಡೆ ಇಲ್ಲದ ಕಾರಣ ಮಳೆ ನೀರು ಭತ್ತದ ಗದ್ದೆಗೆ ನುಗ್ಗಿ ಸಸಿಗಳು ನೀರುಪಾಲಾಗಿವೆ. ಸಂಬಂಧಪಟ್ಟ ಇಲಾಖೆಯವರು ಶೀಘ್ರದಲ್ಲಿ ತಡೆಗೋಡೆ ನಿರ್ಮಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸ್ಥಳೀಯ ಪ್ರಜ್ವಲ್ ಶೇಟ್ ಆಗ್ರಹಿಸಿದ್ದಾರೆ.