ಆ್ಯಪ್ನಗರ

ಪಹರೆ ವೇದಿಕೆ 300ನೇ ಸ್ವಚ್ಛತಾ ಕಾರ‍್ಯ

ಕಾರವಾರ : ನಗರದ ವ್ಯಾಪ್ತಿಯಲ್ಲಿನಿರಂತರವಾಗಿ ಸ್ವಚ್ಛತಾ ಕಾರ್ಯ ನಡೆಸುತ್ತ ಮಾದರಿಯಾಗಿರುವ ಸಮಾನ ಮನಸ್ಕರ ಸಂಘಟನೆಯಾದ ಪಹರೆ ವೇದಿಕೆ ಕಾರ್ಯಕ್ರಮ ಶನಿವಾರ 300ನೇ ವಾರಕ್ಕೆ ಕಾಲಿಟ್ಟಿತು. ಈ ಪ್ರಯುಕ್ತ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

Vijaya Karnataka 27 Sep 2020, 5:00 am
ಕಾರವಾರ : ನಗರದ ವ್ಯಾಪ್ತಿಯಲ್ಲಿನಿರಂತರವಾಗಿ ಸ್ವಚ್ಛತಾ ಕಾರ್ಯ ನಡೆಸುತ್ತ ಮಾದರಿಯಾಗಿರುವ ಸಮಾನ ಮನಸ್ಕರ ಸಂಘಟನೆಯಾದ ಪಹರೆ ವೇದಿಕೆ ಕಾರ್ಯಕ್ರಮ ಶನಿವಾರ 300ನೇ ವಾರಕ್ಕೆ ಕಾಲಿಟ್ಟಿತು. ಈ ಪ್ರಯುಕ್ತ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
Vijaya Karnataka Web pahare forum 300th cleaning room
ಪಹರೆ ವೇದಿಕೆ 300ನೇ ಸ್ವಚ್ಛತಾ ಕಾರ‍್ಯ


ಶನಿವಾರ ಬೆಳಗಿನ ಜಾವ ನಗರದ ಸೇಂಟ್‌ ಜೋಸೆಫ್‌ ಶಾಲೆಯ ಆವಾರದಿಂದ ಕಾಜುಭಾಗದವರೆಗೆ ಸ್ವಚ್ಛತೆ ನಡೆಸಲಾಯಿತು. 300ನೇ ವಾರದ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದ ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಚೈತ್ರಾ ಕೋಠಾರಕರ್‌ ಮಾತನಾಡಿ, ಪಹರೆ ನಮ್ಮ ರಾಜ್ಯದ ಹೆಮ್ಮೆಯ ಮತ್ತು ಮಾದರಿ ಸಂಸ್ಥೆಯಾಗಿದೆ. ಸ್ವತಃ ಸ್ವಚ್ಛತಾ ಕಾರ್ಯಗಳನ್ನು ಮಾಡುವ ಮೂಲಕ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುತ್ತಿರುವ ಪಹರೆ ವೇದಿಕೆಯ ಸೇವೆ ಶ್ಲಾಘನೀಯ ಎಂದರು.

ಸಂಘಟನೆಯ ಸಂಸ್ಥಾಪಕ ನಾಗರಾಜ ನಾಯಕ ಮಾತನಾಡಿ, ನಗರವಾಸಿಗಳು ತಮ್ಮ ತಮ್ಮ ಟೆರೇಸಿನಲ್ಲಿತರಕಾರಿಗಳನ್ನು ಕುಂಡಗಳಲ್ಲಿಬೆಳೆಸಿ ಈ ದೇಶದ ಆಹಾರ ಕಣಜಕ್ಕೆ ನೆರವಾಗಬಹುದು. ಒಂದು ಚದರ ಮೀಟರ್‌ ಜಾಗದಲ್ಲಿಕನಿಷ್ಟ 25 ಕೇಜಿ ತರಕಾರಿ ಪ್ರತಿ ವರ್ಷ ಬೆಳೆಯಬಹುದು. ಪಹರೆ ವೇದಿಕೆ ಈ ಅಭಿಯಾನವನ್ನು ಮುಂದಿನ ದಿನಗಳಲ್ಲಿಕೈಗೆತ್ತಿಕೊಳ್ಳಲಿದೆ ಎಂದರು.

ಆಕಾಶವಾಣಿ ಅಧಿಕಾರಿ ಪ್ಲೋರಿನ್‌ ರೋಚ್‌ ಮಾತನಾಡಿದರು. ಮನೋಜ ಭಟ್‌, ಸದಾನಂದ ಮಾಂಜ್ರೇಕರ್‌, ಎಲಿಷಾ ಎಲಕಪಾಟಿ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ