ಆ್ಯಪ್ನಗರ

ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳಿ

ಯಲ್ಲಾಪುರ : ಕ್ರೀಡೆಯು ದೈಹಿಕವಾಗಿ, ಮಾನಸಿಕವಾಗಿ ಬೌದ್ಧಿಕವಾಗಿ ಶರೀರ ಬೆಳವಣಿಗೆಗೆ ಪೂರಕವಾಗಿದೆ. ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ದೈಹಿಕ ಶಿಕ್ಷ ಣ ಪರಿವೀಕ್ಷ ಕರಾದ ರವೀಂದ್ರ ಕಾಪ್ಸೆ ಅವರು ಹೇಳಿದರು.

Vijaya Karnataka 25 Aug 2019, 5:00 am
ಯಲ್ಲಾಪುರ : ಕ್ರೀಡೆಯು ದೈಹಿಕವಾಗಿ, ಮಾನಸಿಕವಾಗಿ ಬೌದ್ಧಿಕವಾಗಿ ಶರೀರ ಬೆಳವಣಿಗೆಗೆ ಪೂರಕವಾಗಿದೆ. ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ದೈಹಿಕ ಶಿಕ್ಷ ಣ ಪರಿವೀಕ್ಷ ಕರಾದ ರವೀಂದ್ರ ಕಾಪ್ಸೆ ಅವರು ಹೇಳಿದರು.
Vijaya Karnataka Web participate in sports activities
ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳಿ


ತಾಲೂಕಿನ ಇಡಗುಂದಿ ಸಮೀಪದ ಸ್ನೇಹ ಸಾಗರ ವಸತಿ ಶಾಲೆಯಲ್ಲಿ ತಾಲೂಕು ಮಟ್ಟದ ಟೇಬಲ್‌ ಟೆನ್ನಿಸ್‌, ಶಟಲ್‌ ಬೆಡ್ಮಿಟನ್‌ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿ ಮಕ್ಕಳು ಜೀವನದಲ್ಲಿ ಓದುವುದರ ಜತೆಗೆ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಸೋಲು, ಗೆಲುವು ಸಾಮಾನ್ಯವಾದದ್ದು ಅದನ್ನು ಸಮಚಿತ್ತದಿಂದ ಸ್ವಿಕರೀಸಬೇಕು ಎಂದರು. ಶಾಲಾ ವ್ಯವಸ್ಥಾಪಕ ನಿರ್ದೇಶಕ ಎಸ್‌.ಎಲ್‌ ಭಟ್‌ ಮಾತನಾಡಿ ಓದು ಮತ್ತು ಕ್ರೀಡೆಯನ್ನು ಸಮಾನವಾಗಿ ಸ್ವೀಕರಿಸಬೇಕು ಹಾಗೂ ಕ್ರೀಡಾ ಚಟುವಟಿಕೆಗಳು ದೈಹಿಕವಾಗಿ, ಮಾನಸಿಕವಾಗಿ, ಬೌದ್ಧಿಕವಾಗಿ ಶರೀರ ಬೇಳವಣಿಗೆಗೆ ಮಾರ್ಗವಾದರೆ, ಸಂಸ್ಕೃತಿಯು ಜೀವನದ ಒಂದು ಭಾಗವಾಗಿದೆ. ಕ್ರೀಡೆಯಲ್ಲಿ ಭಾಗವಹಿಸಿ ಕೀರ್ತಿಯನ್ನು ಶ್ರೇಯಸ್ಸನ್ನು ಪಡೆಯಬೇಕು ಎಂದರು. ಪ್ರಾಂಶುಪಾಲೆ ಕೆ. ಆರ್‌ ಸುಶೀಲಾ ಮಾತನಾಡಿ, ಪಂದ್ಯಾವಳಿಯ ಭಾಗವಾಗಿ ಶಿಕ್ಷ ಣ ಇಲಾಖೆಯ ಸುಯೋಗದಿಂದ ಸ್ನೇಹ ಸಾಗರ ವಸತಿ ಶಾಲೆಯ ಆವರಣದಲ್ಲಿ ಕ್ರೀಡಾ- ಪಂದ್ಯಾವಳಿ ನಡೆಯುತ್ತಿದ್ದು ಸಹಶಿಕ್ಷ ಕರ ಹಾಗೂ ದೈಹಿಕ ಶಿಕ್ಷ ಕರ ಸಹ ಮುತುವರ್ಜಿಯಿಂದ ಎಲ್ಲಾ ಕಾರ್ಯಗಳು ಸುಗುಮವಾಗಿ ನಡೆಯಲೆಂದು ಆಶಿಸಿದರು.

ಸ್ವಾತಿ ನಿರೂಪಿಸಿದಳು. ಪ್ರಥ್ವಿರಾಜ ಸ್ವಾಗತಿಸಿದನು. ಶ್ರೀದೇವಿ ವಂದಿಸಿದಳು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ