ಆ್ಯಪ್ನಗರ

ಕೆಎಟಿ ತೀರ್ಪಿನಂತೆ ವೇತನ ನೀಡಿ

ಶಿರಸಿ : ಫಾರ್ಮಸಿಸ್ಟ್‌ಗಳ ಬೇಡಿಕೆಗಳ ಕುರಿತು ಸರಕಾರದ ಗಮನ ಸೆಳೆಯಲು ರಾಜ್ಯ ಸರಕಾರಿ ಫಾರ್ಮಾಸಿಸ್ಟ್‌ ಸಂಘ ಜಿಲ್ಲಾಶಾಖೆಯ ನೇತೃತ್ವದಲ್ಲಿಗುರುವಾರ ನಗರದ ಜಿಲ್ಲಾಔಷಧ ಉಗ್ರಾಣದಿಂದ ಕಾಲ್ನಡಿಗೆಯಲ್ಲಿತೆರಳಿ ಸಹಾಯಕ ಆಯುಕ್ತರ ಕಚೇರಿ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

Vijaya Karnataka 3 Jan 2020, 5:00 am
ಶಿರಸಿ : ಫಾರ್ಮಸಿಸ್ಟ್‌ಗಳ ಬೇಡಿಕೆಗಳ ಕುರಿತು ಸರಕಾರದ ಗಮನ ಸೆಳೆಯಲು ರಾಜ್ಯ ಸರಕಾರಿ ಫಾರ್ಮಾಸಿಸ್ಟ್‌ ಸಂಘ ಜಿಲ್ಲಾಶಾಖೆಯ ನೇತೃತ್ವದಲ್ಲಿಗುರುವಾರ ನಗರದ ಜಿಲ್ಲಾಔಷಧ ಉಗ್ರಾಣದಿಂದ ಕಾಲ್ನಡಿಗೆಯಲ್ಲಿತೆರಳಿ ಸಹಾಯಕ ಆಯುಕ್ತರ ಕಚೇರಿ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
Vijaya Karnataka Web pay as per kat judgment
ಕೆಎಟಿ ತೀರ್ಪಿನಂತೆ ವೇತನ ನೀಡಿ


ಸಹಾಯಕ ಆಯುಕ್ತ ಈಶ್ವರ ಉಳ್ಳಾಗಡ್ಡಿ ಮನವಿ ಸ್ವೀಕರಿಸಿದರು. ಅಖಿಲ ಭಾರತೀಯ ತಾಂತ್ರಿಕ ಪರಿಷತ್ತಿನಿಂದ 1987ರಲ್ಲಿಫಾರ್ಮಸಿಯನ್ನು ತಾಂತ್ರಿಕ ವಿದ್ಯಾರ್ಹತೆಯೆಂದು ಪರಿಗಣಿಸಿ ಆದೇಶಿಸಿರುವುದರಿಂದ ಡಿಪೊ್ಲೕಮಾ ವೇತನ ಭತ್ಯೆ ನೀಡುವುದು, ಕೇಂದ್ರ ಹಾಗೂ ನೆರೆ ರಾಜ್ಯಗಳಲ್ಲಿಕಾರ್ಯ ನಿರ್ವಹಿಸುತ್ತಿರುವ ಫಾರ್ಮಾಸಿಸ್ಟ್‌ಗಳಿಗಿಂತ ಕಡಿಮೆ ವೇತನ ಹಾಗೂ ಭತ್ಯೆಯನ್ನು 1982ರಿಂದ ಪಡೆಯುತ್ತಲಿದ್ದು, ಈ ಅನ್ಯಾಯವನ್ನು ಸರಿಪಡಿಸಬೇಕು ಎಂದು ಮನವಿಯಲ್ಲಿಆಗ್ರಹಿಸಲಾಗಿದೆ.

ಸೇವಾ ಅವಧಿಯಲ್ಲಿಒಮ್ಮೆ ಮಾತ್ರ 10 ವರ್ಷಗಳ ಕಾಲಮಿತಿ ವೇತನ ಮುಂಬಡ್ತಿ ಪಡೆದ ನಂತರ ಯಾವುದೇ ವೇತನ ಶ್ರೇಣಿ ಬದಲಾವಣೆಯಾಗಿಲ್ಲ. ಆದ್ದರಿಂದ ಕರ್ನಾಟಕ ಆಡಳಿತ ನ್ಯಾಯಮಂಡಳಿ(ಕೆಎಟಿ)ಯ ತೀರ್ಪಿನಂತೆ ವೇತನ ಜಾರಿ ಮಾಡಬೇಕು. ಜನಸಂಖ್ಯೆಯ ಆಧಾರದ ಮೇಲೆ ಹಾಗೂ ಆಸ್ಪತ್ರೆಗಳ ಹಾಸಿಗೆಗಳ ಸಾಮರ್ಥ್ಯದ ಮೇರೆಗೆ ಹೆಚ್ಚಿನ ಹುದ್ದೆಯನ್ನು ಸೃಜಿಸಬೇಕು ಎಂದು ಒತ್ತಾಯಿಸಲಾಗಿದೆ.

ಸೇವಾ ನಿರತ ಫಾರ್ಮಾಸಿಸ್ಟ್‌ಗಳಿಗೆ ಉನ್ನತ ವ್ಯಾಸಂಗಕ್ಕೆ ಸೀಟು ಕಾಯ್ದಿರಿಸಲು ಸರಕಾರಕ್ಕೆ ಶಿಫಾರಸು ಮಾಡಬೇಕು. ಕಾಲಕಾಲಕ್ಕೆ ಮಾರುಕಟ್ಟೆಗೆ ಬಿಡುಗಡೆಯಾಗುವ ಹೊಸ ಔಷಧಿಗಳ ಕುರಿತು ತಿಳಿದುಕೊಳ್ಳಲು ಪುನರ್‌ ಮನನ ಕಾರ್ಯಕ್ರಮ ಪ್ರಾರಂಭಿಸಬೇಕು. ಔಷಧಿಗಳ ಸಾಮರ್ಥ್ಯ ಕಾಪಾಡಿಕೊಳ್ಳಲು ಎಲ್ಲಆಸ್ಪತ್ರೆಗಳಲ್ಲಿಯೂ ವೈಜ್ಞಾನಿಕವಾಗಿ ಔಷಧಿ ಉಗ್ರಾಣ ಅಭಿವೃದ್ಧಿಪಡಿಸಬೇಕು ಎಂದು ಒತ್ತಾಯಿಸಲಾಗಿದೆ.

ಎಲ್ಲಹಂತದ ಆಸ್ಪತ್ರೆಗಳಲ್ಲಿಔಷಧಿಗಳ ಮಾಹಿತಿ ಕೇಂದ್ರ ಮತ್ತು ಸಮಾಲೋಚನಾ ಕೇಂದ್ರ ಆರಂಭಿಸಬೇಕು. ಪದವೀಧರ ಫಾರ್ಮಾಸಿಸ್ಟ್‌ ಹುದ್ದೆಗೆ ಔಷಧ ನಿಯಂತ್ರಣ ಇಲಾಖೆಯಿಂದ ಅನ್ಯ ಸೇವೆಯ ಮೇರೆಗೆ ನಿಯೋಜಿಸುತ್ತಿರುವ ಕಿರಿಯ ವೈಜ್ಞಾನಿಕ ಅಧಿಕಾರಿಗಳ ನೇಮಕ ನಿಲ್ಲಿಸಬೇಕು. ಇಲಾಖೆಯಲ್ಲಿಪದವಿ ಪಡೆದ ಹಿರಿಯ ಫಾರ್ಮಾಸಿಸ್ಟ್‌ರಿಗೆ ಪದೋನ್ನತಿ ನೀಡಬೇಕು. ಫಾರ್ಮಸಿ ಕಾಯ್ದೆಯಂತೆ ಫಾರ್ಮಾಸಿಸ್ಟ್‌ರಲ್ಲದವರು ಔಷಧಿಗಳನ್ನು ವಿತರಿಸಲು ಅವಕಾಶ ಇಲ್ಲದ ಕಾರಣ ಇಲಾಖೆಯಲ್ಲಿಖಾಲಿ ಇರುವ ಹುದ್ದೆ ಭರ್ತಿಮಾಡಬೇಕು ಎಂದು ಮನವಿಯಲ್ಲಿಆಗ್ರಹಿಸಲಾಗಿದೆ.

ಕೇಂದ್ರ ಸರಕಾರದ ನಿರ್ದೇಶನದಂತೆ ಎಲ್ಲಜಿಲ್ಲಾಆಸ್ಪತ್ರೆಗಳಲ್ಲಿಫಾರ್ಮಕೋ ವಿಜಿಲೆನ್ಸ್‌ ಆರಂಭಿಸಬೇಕು. ಇಲಾಖೆಯಲ್ಲಿಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಫಾರ್ಮಾಸಿಸ್ಟ್‌ರಿಗೆ ಕನಿಷ್ಠ ಮೂಲ ವೇತನ ನೀಡಬೇಕು, ಕಾಯಂ ಮಾಡಬೇಕು. ಆಹಾರ ಸುರಕ್ಷತಾ ಇಲಾಖೆಯಲ್ಲಿಬೇರೆ ರಾಜ್ಯಗಳಲ್ಲಿರುವಂತೆ ಫಾರ್ಮಾಸಿಸ್ಟ್‌ಗಳನ್ನು ನೇಮಕ ಮಾಡಬೇಕು ಮುಂತಾದ ಬೇಡಿಕೆಗಳನ್ನು ಸರಕಾರದ ಮುಂದಿಡಲಾಗಿದೆ.

ಈ ವೇಳೆ ರಾಜ್ಯ ಸರಕಾರಿ ಫಾರ್ಮಾಸಿಸ್ಟ್‌ ಸಂಘ ಜಿಲ್ಲಾಧ್ಯಕ್ಷ ಎಸ್‌.ವಿ.ಭಟ್‌, ಪ್ರಧಾನ ಕಾರ್ಯದರ್ಶಿ ಅಮಿತ ಆಮಠೆ, ಕೋಶಾಧ್ಯಕ್ಷ ಶೈಲೇಶ ಹೆಗಡೆ, ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ