ಆ್ಯಪ್ನಗರ

ಮಳೆಯ ರಭಸಕ್ಕೆ ಜನರು ಕಂಗಾಲು

ಶಿರಸಿ : ಇನ್ನೇನು ಮಳೆಗಾಲ ಮುಗಿಯಿತು ಎಂದುಕೊಂಡರೆ ಮತ್ತೆ ಆಗಾಗ ಧೋ ಎಂದು ಸುರಿಯುತ್ತಿರುವ ರಭಸದ ಮಳೆಗೆ ಜನ ಕಂಗಾಲಾಗಿದ್ದು ವಿವಿಧೆಡೆ ನಷ್ಟದ ಆತಂಕ ವ್ಯಕ್ತಪಡಿಸುತ್ತಿದ್ದಾರೆ.

Vijaya Karnataka 4 Sep 2019, 5:00 am
ಶಿರಸಿ : ಇನ್ನೇನು ಮಳೆಗಾಲ ಮುಗಿಯಿತು ಎಂದುಕೊಂಡರೆ ಮತ್ತೆ ಆಗಾಗ ಧೋ ಎಂದು ಸುರಿಯುತ್ತಿರುವ ರಭಸದ ಮಳೆಗೆ ಜನ ಕಂಗಾಲಾಗಿದ್ದು ವಿವಿಧೆಡೆ ನಷ್ಟದ ಆತಂಕ ವ್ಯಕ್ತಪಡಿಸುತ್ತಿದ್ದಾರೆ.
Vijaya Karnataka Web people are rainbows for rainfall
ಮಳೆಯ ರಭಸಕ್ಕೆ ಜನರು ಕಂಗಾಲು


ಮೂರು ದಿನಗಳ ಹಿಂದೆ ಆರಂಭವಾದ ಮಳೆಯ ಆರ್ಭಟ ಮಂಗಳವಾರವೂ ಮುಂದುವರಿದಿದ್ದು ಸಂಜೆಯ ಹೊತ್ತಿಗೆ ಸ್ವಲ್ಪ ಕಡಿಮೆ ಆಗಿದೆ.

ಜಿಲ್ಲೆಯ ಘಟ್ಟದ ಮೇಲಿನ ಪ್ರದೇಶದ ಶಿರಸಿ ಸಿದ್ದಾಪುರ ಯಲ್ಲಾಪುರ ಸೇರಿದಂತೆ ವಿವಿಧೆಡೆಗಳಲ್ಲಿಸಾಕಷ್ಟು ಮಳೆ ಸುರಿಯುತ್ತ ಜನರು ತತ್ತರಿಸುವಂತೆ ಮಾಡಿದೆ. ಆದರೆ ಅವಘಡ, ಅನಾಹುತಗಳು ನಡೆದ ಬಗ್ಗೆ ವರದಿಯಾಗಿಲ್ಲ.

ಈ ಮಧ್ಯೆ, ಈಗ ಸುರಿಯುತ್ತಿರುವ ಜೋರಾದ ಮಳೆಯು ಅಡಕೆ ಬೆಳೆಗಾರರನ್ನು ಹೆಚ್ಚು ಚಿಂತೆಗೆ ದೂಡುತ್ತಿದೆ. ಮೊದಲೇ ಅಡಕೆ ಕೊಳೆಯ ಆತಂಕದಲ್ಲಿರುವ ಬೆಳೆಗಾರರು ಈಗ ಮತ್ತಷ್ಟು ರಭಸದ ಮಳೆ ಸುರಿಯುತ್ತಿರುವುದರಿಂದ ಕೊಳೆ ರೋಗ ಇನ್ನಷ್ಟು ವ್ಯಾಪಿಸಬಹುದು ಎಂಬ ಆತಂಕದಲ್ಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ