ಆ್ಯಪ್ನಗರ

ವಿದ್ಯುತ್‌ ಸ್ಥಗಿತ ಪರದಾಡಿದ ಜನ

ಮುಂಡಗೋಡ : ಭಾನುವಾರ ಸಂಜೆ ಬಂದ ಮಳೆಗಾಳಿಯಿಂದ ಕಡಿತಗೊಂಡ ವಿದ್ಯುತ್‌ ಪೂರೈಕೆ ಸೋಮವಾರ ಮಧ್ಯಾಹ್ನದವರೆಗೂ ಕೈಕೊಟ್ಟ ಪರಿಣಾಮ ತಾಲೂಕಿನ ಜನರು ತೀವ್ರ ತೊಂದರೆ ಅನುಭವಿಸುವಂತಾಯಿತು.

Vijaya Karnataka 30 Apr 2019, 5:00 am
ಮುಂಡಗೋಡ : ಭಾನುವಾರ ಸಂಜೆ ಬಂದ ಮಳೆಗಾಳಿಯಿಂದ ಕಡಿತಗೊಂಡ ವಿದ್ಯುತ್‌ ಪೂರೈಕೆ ಸೋಮವಾರ ಮಧ್ಯಾಹ್ನದವರೆಗೂ ಕೈಕೊಟ್ಟ ಪರಿಣಾಮ ತಾಲೂಕಿನ ಜನರು ತೀವ್ರ ತೊಂದರೆ ಅನುಭವಿಸುವಂತಾಯಿತು.
Vijaya Karnataka Web people who were in power disrupted
ವಿದ್ಯುತ್‌ ಸ್ಥಗಿತ ಪರದಾಡಿದ ಜನ


ವಾರದಲ್ಲಿ ಒಂದೆರಡು ದಿನ ಬಾರಿ ಬಿರುಗಾಳಿಯೊಂದಿಗೆ ಮಳೆ ಸುರಿಯುತ್ತಿದೆ. ಮಳೆಗಾಳಿ ಆರಂಭವಾದರೆ ಹೆಸ್ಕಾಂನವರು ವಿದ್ಯುತ್‌ ಕಡಿತಗೊಳಿಸಿ ನಂತರ ವಿದ್ಯುತ್‌ ನೀಡುತ್ತಾರೆ. ಆದರೆ ಭಾನುವಾರ ಸಂಜೆ ತಾಲೂಕಿನಲ್ಲಿ ಅಲ್ಪ ಪ್ರಮಾಣದ ಮಳೆಯಾಗಿದ್ದು, ಸಂಜೆಯ ವೇಳೆಗೆ ಹೋದ ವಿದ್ಯುತ್‌ ಪೂರೈಕೆ ರಾತ್ರಿಯಾದರೂ ಬರಲಿಲ್ಲ. ಇದರಿಂದ ತಾಲೂಕಿನ ಜನರು ವಿದ್ಯುತ್‌ ಇಲ್ಲದೆ ತೀವ್ರ ಪರದಾಡುವಂತಾಯಿತು.

ಬೇಸಿಗೆ ದಿನಗಳಾಗಿರುವುದರಿಂದ ಮನೆಗಳಲ್ಲಿ ಫ್ಯಾನ್‌, ಏರ್‌ ಕೂಲರ್‌, ಎಸಿಗಳಿಲ್ಲದೆ ಪಟ್ಟಣದ ಬಹುತೇಕ ಜನರು ನಿದ್ರಿಸಲು ಸಾದ್ಯವಾಗದೆ ಪರದಾಡಿದ್ದಾರೆ. ಭಾನುವಾರ ಸಂಜೆಯೆ ವಿದ್ಯುತ್‌ ಕೈಕೊಟ್ಟ ಪರಿಣಾಮ ಚಟ್ನಿ ಹಾಗೂ ಸಾಂಬಾರು ಮಾಡಲು ಹೊಟೇಲ್‌ನವರು ಪರದಾಡಿದರು. ಸೋಮವಾರ ಝರಾಕ್ಸ ಹಾಗೂ ವಿವಿಧ ಕಚೇರಿಗಳಲ್ಲಿನ ಕೆಲಸ ಕಾರ್ಯಗಳು ಸ್ಥಗಿತವಾಗಿರುವುದು ಕಂಡು ಬಂದಿತು. ಮುಂದೆ ಈ ರೀತಿಯಾಗದಂತೆ ಹೆಸ್ಕಾಂನವರು ಜಾಗೃತಿ ವಹಿಸುವುದು ಅವಶ್ಯವಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ