ಆ್ಯಪ್ನಗರ

ಪಟ್ಟ ವಿನಾಯಕ ಗೆಳೆಯರ ಬಳಗ, ಜನರ ಕಾರಾರ‍ಯಚರಣೆ

ಗೋಕರ್ಣ : ಸರಕಾರ ಕೆರೆಗಳ ಹೂಳೆತ್ತಲು, ಸ್ವಚ್ಛಗೊಳಿಸಲು ಲಕ್ಷಾಂತರ ರೂ.ಗಳ ಅನೇಕ ಯೋಜನೆಗಳನ್ನು ಘೋಷಿಸುತ್ತದೆ. ಆದರೆ ಬಹುತೇಕ ಯೋಜನೆಗಳು ಕಾರ್ಯರೂಪಕ್ಕೆ ಬರದೇ ಹಾಗೇ ಉಳಿಯುತ್ತವೆ.

Vijaya Karnataka 10 Jun 2019, 5:00 am
ಗೋಕರ್ಣ : ಸರಕಾರ ಕೆರೆಗಳ ಹೂಳೆತ್ತಲು, ಸ್ವಚ್ಛಗೊಳಿಸಲು ಲಕ್ಷಾಂತರ ರೂ.ಗಳ ಅನೇಕ ಯೋಜನೆಗಳನ್ನು ಘೋಷಿಸುತ್ತದೆ. ಆದರೆ ಬಹುತೇಕ ಯೋಜನೆಗಳು ಕಾರ್ಯರೂಪಕ್ಕೆ ಬರದೇ ಹಾಗೇ ಉಳಿಯುತ್ತವೆ.
Vijaya Karnataka Web KWR-9 GKN 3 C


ಹೀಗಾಗಿಯೇ ಪವಿತ್ರ ಕ್ಷೇತ್ರದಲ್ಲಿರುವ ಅನೇಕ ಕೆರೆಗಳು ಸ್ವಚ್ಛತೆ ಕಾಣದೇ ಜನಪ್ರತಿನಿಧಿಗಳ, ಅಧಿಕಾರಿಗಳ ಕಾರ್ಯವೈಖರಿಯನ್ನು ಬಿಂಬಿಸುತ್ತಿವೆ. ಗೋಕರ್ಣ ಕ್ಷೇತ್ರದ ಪವಿತ್ರ ಸ್ಥಳವಾದ ಕೋಟಿತೀರ್ಥ ಇದೇ ಮೊದಲ ಬಾರಿಗೆ ಬತ್ತಿದೆ. ಇದರ ಹೂಳನ್ನು ತೆರವು ಮಾಡಲು ಇದು ಸಕಾಲವಾಗಿತ್ತು. ಆದರೆ ಈ ಬಗ್ಗೆ ಸ್ಥಳೀಯ ಪಂಚಾಯಿತಿ ಅಥವಾ ಸಂಬಂಧಿಸಿದ ಇಲಾಖೆ ಲಕ್ಷ್ಯವನ್ನೇ ವಹಿಸಲಿಲ್ಲ.

ಇದರಿಂದ ಬೇಸತ್ತ ಸ್ಥಳೀಯರು ಮತ್ತು ಪಟ್ಟ ವಿನಾಯಕ ಗೆಳೆಯರ ಬಳಗ ಸೇರಿ ಸ್ವಚ್ಛತೆ ಕಾರ್ಯಕ್ಕೆ ಮುಂದಾಗಿದ್ದಾರೆ. ಇಲ್ಲಿ ಬೆಳೆದು ನಿಂತಿರುವ ಕಮಲದ ಬಳ್ಳಿ, ಪಾಚಿ, ಪ್ಲಾಸ್ಟಿಕ್‌ ತ್ಯಾಜ್ಯಗಳನ್ನು ತೆಗೆದು ಸ್ವಚ್ಛಗೊಳಿಸುತ್ತಿದ್ದಾರೆ. ಇದಕ್ಕೆ ತಗಲುವ ಖರ್ಚನ್ನು ಸಹ ಸ್ಥಳೀಯರು ಮತ್ತು ಸಂಘದವರೇ ಭರಿಸುತ್ತಿದ್ದಾರೆ. ಹಲವು ದಿನಗಳಿಂದ ನಿರಂತರವಾಗಿ ಸ್ವಚ್ಛತಾ ಕಾರ್ಯ ನಡೆದಿದೆ.

ಸರಕಾರ ನಿರ್ಲಕ್ಷಿಸಿದರೂ ತಮ್ಮ ಊರಿನ ಕಾರ್ಯವನ್ನು ನಾವು ಬಿಡುವುದಿಲ್ಲ ಎಂದು ತೋರಿಸುವಲ್ಲಿ ಮಾದರಿಯಾಗಿದ್ದಾರೆ.

ಟೆಂಡರ್‌ ವಿವಾದ : ಇಲ್ಲಿನ ಕೋಟಿತೀರ್ಥ ಹೊಲಸು ತುಂಬಿ ದುರ್ವಾಸನೆ ಬೀರುತ್ತಿತ್ತು. ಇದರ ಸ್ವಚ್ಛತೆಗೆ, ಇದರ ನಿರ್ವಹಣೆಗೆ ಗ್ರಾಮ ಪಂಚಾಯಿತಿ ಈ ಹಿಂದೆ ಟೆಂಡರ್‌ ನೀಡಿತ್ತು. ಇಲ್ಲಿ ನಿತ್ಯ ಧಾರ್ಮಿಕ ವಿಧಿಗಳನ್ನು ನಡೆಸುವವರಿಂದ ಹಣವನ್ನು ಪಡೆಯುತ್ತಾರೆ, ಆದರೆ ಸ್ವಚ್ಛತೆ ಕಾಯ್ದುಕೊಳ್ಳುತ್ತಿಲ್ಲ ಎಂಬ ಮಾತು ಕೇಳಿ ಬಂದಿತ್ತು. ಟೆಂಡರ್‌ ಅವಧಿಗೂ ಮುನ್ನವೇ ಸ್ವಚ್ಛತಾ ಕಾರ್ಯವನ್ನು ಟೆಂಡರ್‌ ಪಡೆದ ಸಂಸ್ಥೆ ನಿಲ್ಲಿಸಿದ್ದು, ಪುನಃ ಗ್ರಾ.ಪಂ. ಟೆಂಡರ್‌ ಕರೆಯಿತು. ನಂತರ ನೀಡಿದ ಟೆಂಡರ್‌ ಪ್ರಕ್ರಿಯೆ ಕುರಿತು ದೊಡ್ಡ ಮಟ್ಟದ ವಿವಾದ ನಡೆಯಿತು.

ಈ ಅವಧಿಯಲ್ಲಿ ಕೋಟಿತೀರ್ಥ ಸಂಪೂರ್ಣ ಕಮಲದ ಬಳ್ಳಿ, ಪ್ಲಾಸ್ಟಿಕ್‌ ತ್ಯಾಜ್ಯ, ಪಾಚಿ ತುಂಬಿ ದುರ್ಗಂಧ ಸೂಸುತ್ತಿತ್ತು. ಆಗ ಸ್ವಯಂ ಪ್ರೇರಿತರಾಗಿ ಸ್ಥಳೀಯರು ಹಾಗೂ ಪಟ್ಟ ವಿನಾಯಕ ಗೆಳೆಯರ ಬಳಗದವರು ಸಂಪೂರ್ಣ ಕೋಟಿತೀರ್ಥವನ್ನು ಸ್ವಚ್ಛಗೊಳಿಸಿದರು. ನಂತರ ನಿರಂತರವಾಗಿ ನಿರ್ವಹಿಸುತ್ತಾ ಬಂದಿದ್ದಾರೆ. ಈ ಮಧ್ಯೆ ಪಂಚಾಯಿತಿ ಅಧಿಕಾರಿಗಳು ಬಂದು ಟೆಂಡರ್‌ ಪ್ರಕ್ರಿಯೆ ಮುಗಿದಿದ್ದು, ಟೆಂಡರ್‌ ಪಡೆದವರು ನಿರ್ವಹಿಸುತ್ತೇವೆ ಎಂದಾಗ ಇಷ್ಟು ದಿನ ಎಲ್ಲಿ ಹೋಗಿದ್ದಿರಿ ? ಈಗ ನೆನಪಾಯಿತೇ ? ಎಂದು ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ನಾವೇ ನಿರ್ವಹಿಸುತ್ತೇವೆ ಎಂದಿದ್ದಾರೆ. ಅಂದಿನಿಂದ ಇಂದಿನ ವರೆಗೂ ಪಟ್ಟ ವಿನಾಯಕ ಗೆಳೆಯರ ಬಳಗದವರೇ ನಿರ್ವಹಿಸುತ್ತಿದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ