ಆ್ಯಪ್ನಗರ

ದುಬಾರಿ ಬೆಲೆಯ ಪಾರಿವಾಳ ಕಳವು; ಬೆಂಗಳೂರಿನಲ್ಲಿ ತಮಿಳುನಾಡು ಚೋರ ಬಂಧನ

ಪಾರಿವಾಳ ಸಾಕಾಣಿಕಾ ಕೇಂದ್ರದಿಂದ ದುಬಾರಿ ಬೆಲೆಯ ಲಾಹೋರಿ ಜಾತಿಗೆ ಸೇರಿದ 25 ಪಾರಿವಾಳಗಳನ್ನು ಕದ್ದು ಪರಾರಿಯಾಗಿದ್ದು, ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಬಂಧಿತನಿಂದ 18 ಪಾರಿವಾಳಗಳನ್ನು ಜಪ್ತಿ ಪಡಿಸಿಕೊಳ್ಳಲಾಗಿದೆ.

Vijaya Karnataka Web 9 Oct 2020, 10:28 pm
ಭಟ್ಕಳ: ತಾಲೂಕಿನ ಪುರಸಭಾ ವ್ಯಾಪ್ತಿಯ ಆಝಾದ್‌ನಗರ ಪಾರಿವಾಳ ಸಾಕಣೆ ಕೇಂದ್ರದಿಂದ ಪಾರಿವಾಳವನ್ನು ಕದ್ದು ಪರಾರಿಯಾಗಿದ್ದ ವ್ಯಕ್ತಿಯನ್ನು ಭಟ್ಕಳ ಪೊಲೀಸರು ಬೆಂಗಳೂರಿನಿಂದ ಬಂಧಿಸಿ ಕರೆ ತಂದಿರುವ ಘಟನೆ ನಡೆದಿದೆ.
Vijaya Karnataka Web ಸಂಗ್ರಹ ಚಿತ್ರ
ಸಂಗ್ರಹ ಚಿತ್ರ


ಆರೋಪಿಯನ್ನು ತಮಿಳುನಾಡು ಮೂಲದ ಪನ್ನೀರ್‌ ಸೆಲ್ವಂ (40) ಎಂದು ಗುರುತಿಸಲಾಗಿದೆ. ಈತ ಕಳೆದ ಅ.5ರಂದು ಪಾರಿವಾಳ ಸಾಕಾಣಿಕಾ ಕೇಂದ್ರದಿಂದ ದುಬಾರಿ ಬೆಲೆಯ ಲಾಹೋರಿ ಜಾತಿಗೆ ಸೇರಿದ 25 ಪಾರಿವಾಳಗಳನ್ನು ಕದ್ದು ಪರಾರಿಯಾಗಿದ್ದು, ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಬಂಧಿತನಿಂದ 18 ಪಾರಿವಾಳಗಳನ್ನು ಜಪ್ತಿ ಪಡಿಸಿಕೊಳ್ಳಲಾಗಿದೆ.

ಈ ಸಂಬಂಧ ಪಾರಿವಾಳ ಸಾಕಣೆ ಕೇಂದ್ರದ ಮಾಲೀಕ ಅಫ್ಜಲ್‌ ಕಾಶೀಮ್‌ಜಿ ಪೊಲೀಸರಿಗೆ ದೂರು ನೀಡಿದ್ದರು. ಆರೋಪಿ ಕಳೆದ ಒಂದು ವರ್ಷದ ಹಿಂದೆಯೇ ಭಟ್ಕಳಕ್ಕೆ ಬಂದು ಅಫ್ಜಲ್‌ರಿಂದ ಪಾರಿವಾಳಗಳನ್ನು ಖರೀದಿಸಿ ಹೋಗಿರುವ ಮಾಹಿತಿ ಲಭಿಸಿದೆ. ಕದ್ದ ಪಾರಿವಾಳ ಪೈಕಿ 7 ಪಾರಿವಾಳಗಳನ್ನು ಈತ ಬೇರೆಡೆಗೆ ಮಾರಾಟ ಮಾಡಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ. ಭಟ್ಕಳ ಶಹರ ಪೊಲೀಸ್‌ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ