ಆ್ಯಪ್ನಗರ

ಎಲ್ಲೆಡೆ ಸಂಕ್ರಾಂತಿ ಸಂಭ್ರಮ

ಯಲ್ಲಾಪುರ : ಸೂರ್ಯನು ತನ್ನ ಚಲನಾ ಪಥವನ್ನು ಬದಲಾಯಿಸುವ ಪುಣ್ಯ ಪರ್ವ ಕಾಲವಾದ ಸಂಕ್ರಾಂತಿ ಹಬ್ಬವನ್ನು ಬುಧವಾರ ತಾಲೂಕಿನಲ್ಲಿಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು.

Vijaya Karnataka 16 Jan 2020, 5:00 am
ಯಲ್ಲಾಪುರ : ಸೂರ್ಯನು ತನ್ನ ಚಲನಾ ಪಥವನ್ನು ಬದಲಾಯಿಸುವ ಪುಣ್ಯ ಪರ್ವ ಕಾಲವಾದ ಸಂಕ್ರಾಂತಿ ಹಬ್ಬವನ್ನು ಬುಧವಾರ ತಾಲೂಕಿನಲ್ಲಿಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು.
Vijaya Karnataka Web pilgrimage is everywhere
ಎಲ್ಲೆಡೆ ಸಂಕ್ರಾಂತಿ ಸಂಭ್ರಮ


ಸಂಕ್ರಾಂತಿ ಹಬ್ಬದ ಪ್ರಯುಕ್ತ ಮಕ್ಕಳು ಹೊಸ ಧಿರಿಸನ್ನು ಧರಿಸಿ ಮನೆ, ಮನೆಗೆ ತೆರಳಿ ಎಳ್ಳು-ಬೆಲ್ಲ, ಸಂಕ್ರಾಂತಿ ಕಾಳನ್ನು ಹಂಚಿ ಸಂಭ್ರಮಿಸಿದರು. ''ಎಳ್ಳು-ಬೆಲ್ಲತಿನ್ನಿ, ಒಳ್ಳೊಳ್ಳೆ ಮಾತಾಡಿ'' ಎಂಬ ಘೋಷವಾಕ್ಯವನ್ನು ಹೇಳುತ್ತ ಎಳ್ಳುಬೆಲ್ಲಹಂಚಿ ಖುಷಿಪಟ್ಟರು.

ಸಂಕ್ರಮಣ ಹಬ್ಬದ ಪ್ರಯುಕ್ತ ಭಕ್ತಾದಿಗಳು ವಿವಿಧ ದೇವಾಲಯಗಳಿಗೆ ಹೋಗಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಪಟ್ಟಣದ ನಾಯಕನಕೆರೆಯಲ್ಲಿರುವ ಶ್ರೀ ಸ್ವರ್ಣವಲ್ಲೀ ಸಂಸ್ಥಾನದ ಶಾಖಾ ಮಠವಾದ ಶ್ರೀಶಾರದಾಂಬಾ ದೇವಾಲಯ, ಪಟ್ಟಣದ ಗ್ರಾಮದೇವಿ ದೇವಾಲಯ, ಚಂದಗುಳಿಯ ಗಂಟೆಗಣಪತಿ ದೇವಾಲಯ, ಅಣಲಗಾರ ಶ್ರೀ ಗೋಪಾಲಕೃಷ್ಣ ದೇವಾಲಯ ಮುಂತಾದ ದೇವಾಲಯಗಳಲ್ಲಿಭಕ್ತರು ಸಾಲುಗಟ್ಟಿ ನಿಂತು ಶ್ರೀದೇವರ ದರ್ಶನ ಪಡೆದು ವಿವಿಧ ಸೇವೆಗಳನ್ನು ಸಲ್ಲಿಸಿದರು. ತಾಲೂಕಿನ ಹಲವು ದೇವಾಲಯಗಳಲ್ಲಿಸಂಕ್ರಮಣದ ಪ್ರಯುಕ್ತ ಬುಧವಾರ ಸಂಜೆ ಸಂಗೀತ, ತಾಳಮದ್ದಳೆ, ಯಕ್ಷಗಾನ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಹಬ್ಬದ ಪ್ರಯುಕ್ತ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಮಧ್ಯಾಹ್ನ ಹೋಳಿಗೆ, ಕಡುಬು ಮುಂತಾದ ಖಾದ್ಯಗಳೊಡನೆ ಸಿಹಿ ಉಂಡು ಜನರು ಸಂತಸಪಟ್ಟರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ