ಆ್ಯಪ್ನಗರ

ಕುಸಿದ ಪುಟ್ಟಪ್ಪನ ಕೆರೆ ಪಿಚ್ಚಿಂಗ್‌

ಸಿದ್ದಾಪುರ : ಪಟ್ಟಣದ ಹೊಸೂರಿನ ಪುಟ್ಟಪ್ಪನ ಕೆರೆಗೆ ಕಟ್ಟಿದ್ದ ಪಿಚ್ಚಿಂಗ್‌ ಕುಸಿದು ಹೋಗಿದ್ದು, ಕೋಟ್ಯಂತರ ರೂ. ಹಣ ನೀರು ಪಾಲಾಗಿದೆ. ಕೆರೆಯ ಹೂಳೆತ್ತುವ, ಮೆಟ್ಟಿಲು ದುರಸ್ತಿ ಹಾಗೂ ಪಿಚ್ಚಿಂಗ್‌ ಕಾಮಗಾರಿ 3-4 ತಿಂಗಳಿನಿಂದ ನಡೆಯುತ್ತಿದೆ. 1.10 ಕೋಟಿ ರೂ. ವೆಚ್ಚದಲ್ಲಿ ನಡೆದಿರುವ ಈ ಕಾಮಗಾರಿ ಪಟ್ಟಣ ಪಂಚಾಯಿತಿ ಅಧೀನದಲ್ಲಿದ್ದರೂ, ಸಣ್ಣ ನೀರಾವರಿ ಇಲಾಖೆಯ ಕೆರೆ ಅಭಿವೃದ್ಧಿ ಯೋಜನೆಯಡಿ ಕಾಮಗಾರಿ ಆರಂಭವಾಗಿತ್ತು.

Vijaya Karnataka 18 Jul 2019, 5:00 am
ಸಿದ್ದಾಪುರ : ಪಟ್ಟಣದ ಹೊಸೂರಿನ ಪುಟ್ಟಪ್ಪನ ಕೆರೆಗೆ ಕಟ್ಟಿದ್ದ ಪಿಚ್ಚಿಂಗ್‌ ಕುಸಿದು ಹೋಗಿದ್ದು, ಕೋಟ್ಯಂತರ ರೂ. ಹಣ ನೀರು ಪಾಲಾಗಿದೆ. ಕೆರೆಯ ಹೂಳೆತ್ತುವ, ಮೆಟ್ಟಿಲು ದುರಸ್ತಿ ಹಾಗೂ ಪಿಚ್ಚಿಂಗ್‌ ಕಾಮಗಾರಿ 3-4 ತಿಂಗಳಿನಿಂದ ನಡೆಯುತ್ತಿದೆ. 1.10 ಕೋಟಿ ರೂ. ವೆಚ್ಚದಲ್ಲಿ ನಡೆದಿರುವ ಈ ಕಾಮಗಾರಿ ಪಟ್ಟಣ ಪಂಚಾಯಿತಿ ಅಧೀನದಲ್ಲಿದ್ದರೂ, ಸಣ್ಣ ನೀರಾವರಿ ಇಲಾಖೆಯ ಕೆರೆ ಅಭಿವೃದ್ಧಿ ಯೋಜನೆಯಡಿ ಕಾಮಗಾರಿ ಆರಂಭವಾಗಿತ್ತು.
Vijaya Karnataka Web pitchedappas lake pitching collapsed
ಕುಸಿದ ಪುಟ್ಟಪ್ಪನ ಕೆರೆ ಪಿಚ್ಚಿಂಗ್‌


ಕಾಮಗಾರಿ ವಿಳಂಬವಾಗುತ್ತಿದೆ ಹಾಗೂ ಕಳಪೆಯಿಂದ ಕೂಡಿದೆ ಎಂದು 'ವಿಜಯ ಕರ್ನಾಟಕ' ಪತ್ರಿಕೆಯಲ್ಲಿ 23-5-2019ರಂದು ಪ್ರಕಟವಾಗಿತ್ತು. ಆದರೂ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ ಎಂದು ಜನರು ಆರೋಪಿಸುತ್ತಾರೆ. ಹೂಳು ತೆರವು, ಮೆಟ್ಟಿಲು ಕಾಮಗಾರಿ ಕಳಪೆ ಮಟ್ಟದ್ದಾಗಿದೆ. ಮಳೆ ಬಂದರೆ ಪಿಚ್ಚಿಂಗ್‌ ನಿಲ್ಲುವುದಿಲ್ಲ ಎನ್ನುವುದು ಸಾರ್ವಜನಿಕರ ದೂರ.

ಕಳೆದ ತಿಂಗಳು ಅಂತ್ಯದಲ್ಲಿ ಕಾಮಗಾರಿ ಪರಿಶೀಲನೆಗೆ ಬಂದಿದ್ದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಕೆಲವು ಸೂಚನೆಗಳನ್ನು ನೀಡಿ ಕಾಮಗಾರಿ ಚೆನ್ನಾಗಿ ನಡೆಯುತ್ತಿದೆ ಎಂದು ಹೇಳಿಹೋಗಿದ್ದರು. ಆದರೆ ಅವರ ಶಹಬ್ಬಾಸಗಿರಿ ದೊರೆತ ಕೆಲವೇ ದಿನಗಳಲ್ಲಿ ಪಿಚ್ಚಿಂಗ್‌ ಕುಸಿದು ಹೋಗಿದೆ, ಈ ಬಾರಿ ಮಳೆಗಾಲ ಕಡಿಮೆ ಇದೆ. ಆದರೂ ಈ ಪಿಚ್ಚಿಂಗ್‌ ಕುಸಿದಿದೆ ಎಂದರೆ ಇದು ಎಷ್ಟು ಕಳಪೆಯಾಗಿರಬಹುದು ಎಂದು ಜನರು ಮಾತನಾಡುತ್ತಿದ್ದಾರೆ. ಈಗ ಒಂದು ಭಾಗ ಕುಸಿದಿರುವ ಕೆರೆ ಮಳೆ ಹೆಚ್ಚಾದಂತೆ ಉಳಿದ ಭಾಗವೂ ಕುಸಿಯುವ ಸಾಧ್ಯತೆ ಇದೆ. ಉತ್ತಮ ಪ್ರವಾಸಿ ತಾಣವಾಗಬೇಕಿದ್ದ ಪುಟ್ಟಪ್ಪನ ಕೆರೆ ಕಳಪೆ ಕಾಮಗಾರಿಯಿಂದಾಗಿ ಅಪಾಯದ ಕೆರೆಯಾಗುವ ಎಲ್ಲ ಲಕ್ಷ ಣಗಳು ಕಂಡು ಬರುತ್ತಿವೆ.

ಈ ಬಗ್ಗೆ ಸಣ್ಣ ನೀರಾವರಿ ಇಲಾಖೆಯ ಎಂಜನೀಯರ ಠಾಕು ಶುಕ್ರ ಗೌಡರನ್ನು ಸಂಪರ್ಕಿಸಿದಾಗ, ಕೆರೆಯ ಪಿಚ್ಚಿಂಗ್‌ ಕುಸಿದಿರುವುದು ನಮ್ಮ ಗಮನಕ್ಕೆ ಬಂದಿದೆ. ಗುತ್ತಿಗೆದಾರರಿಗೆ ಯಾವುದೇ ಬಿಲ್‌ ನೀಡಿಲ್ಲ. ಕಾಮಗಾರಿ ಪೂರ್ಣಗೊಳ್ಳುವವರೆಗೂ ಬಿಲ್‌ ನೀಡುವುದಿಲ್ಲ ಎಂದು ಹೇಳುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ