ಆ್ಯಪ್ನಗರ

ಜೀವನದ ಉನ್ನತಿಗೆ ಸಸ್ಯಗಳೂ ಕಾರಣ

ಶಿರಸಿ : ಜೀವನದ ಉನ್ನತಿಗೆ ಸಸ್ಯಗಳೂ ಕಾರಣ. ಆದ್ದರಿಂದ ಒಂದು ಗಿಡವನ್ನು ತೆಗೆದರೆ ಹತ್ತು ಗಿಡವನ್ನು ನೆಡಬೇಕು ಎಂದು ಉತ್ತರ ಕನ್ನಡ

Vijaya Karnataka 1 Jul 2020, 5:00 am
ಶಿರಸಿ : ಜೀವನದ ಉನ್ನತಿಗೆ ಸಸ್ಯಗಳೂ ಕಾರಣ. ಆದ್ದರಿಂದ ಒಂದು ಗಿಡವನ್ನು ತೆಗೆದರೆ ಹತ್ತು ಗಿಡವನ್ನು ನೆಡಬೇಕು ಎಂದು ಉತ್ತರ ಕನ್ನಡ
Vijaya Karnataka Web plants are responsible for the uplift of life
ಜೀವನದ ಉನ್ನತಿಗೆ ಸಸ್ಯಗಳೂ ಕಾರಣ


ಜನಪದ ಹಾಗೂ ಪಾರಂಪರಿಕ ವೈದ್ಯ ಸಂಘದ ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಭಟ್ಟ ದೇವಗೊಡ್ಲುಹೇಳಿದರು.

ತಾಲೂಕಿನ ಹೆಗಡೆಕಟ್ಟಾದಲ್ಲಿಜನಪದ ಹಾಗೂ ಪಾರಂಪರಿಕ ವೈದ್ಯ ಸಂಘ ಮತ್ತು ಅರಣ್ಯ ಇಲಾಖೆ ಸಹಯೋಗದಲ್ಲಿಆಯ್ದ ಗಿಡಮೂಲಿಕೆಗಳನ್ನು ನೆಡುವ ವನಮಹೋತ್ಸವ ಕಾರ್ಯಕ್ರಮದಲ್ಲಿಪಾಲ್ಗೊಂಡು ಅವರು ಮಾತನಾಡಿದರು.

ಪ್ರತಿಯೊಬ್ಬ ಪಾರಂಪರಿಕ ವೈದ್ಯರೂ ವನ ನಿರ್ಮಾಣದಲ್ಲಿತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದರು.

ವಲಯ ಅರಣ್ಯಾಧಿಕಾರಿ ಬಸವರಾಜ ಬೋಚಳ್ಳಿ ಮಾತನಾಡಿ, ಪಾರಂಪರಿಕ ವೈದ್ಯರ ವನಮಹೋತ್ಸವ ಕಾರ್ಯಕ್ರಮ ಸ್ತುತ್ಯಾರ್ಹವಾದುದು. ಅರಣ್ಯ ರಕ್ಷಣೆಯಲ್ಲಿಇಲಾಖೆ ಜತೆಯಲ್ಲಿಜನರ ಸಹಭಾಗೀತ್ವವೂ ಅಷ್ಟೇ ಮುಖ್ಯ ಎಂದರು. ತಾಲೂಕ ಪಂಚಾಯಿತಿ ಸದಸ್ಯ ವಿನಾಯಕ ಭಟ್ಟ, ವೈದ್ಯ ಸಂಘದ ಅದ್ಯಕ್ಷ ಎಸ್‌.ಎಮ್‌.ಹೆಗಡೆ ಮಕ್ಕಳತಾಯಿಮನೆ, ವಿಶ್ವನಾಥ ಹೆಗಡೆ ಇದ್ದರು.

ಹಾಗೇ ಹೂಡ್ಲಮನೆಯ ಪಾರಂಪರಿಕ ವೈದ್ಯ ಮಂಜುನಾಥ ಹೆಗಡೆ ಅವರ ಮನೆಯ ಆವಾರದಲ್ಲಿಸಹ ಊರ ನಾಗರಿಕರು,ಜನಪದ ಹಾಗೂ ಪಾರಂಪರಿಕ ವೈದ್ಯ ಸಂಘ ಹಾಗೂ ಅರಣ್ಯ ಇಲಾಖೆ ಸೇರಿ ವನಮಹೋತ್ಸವ ನಡೆಸಲಾಯಿತು. ಗಿಡಮೂಲಿಕೆಗಳ ಮಹತ್ವ ತಿಳಿಸಿ ವಿವಿಧ ಔಷಧ ಗಿಡಗಳನ್ನು ನೆಡಲಾಯಿತು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ