ಗೋಕರ್ಣ : ಇಲ್ಲಿನ ಅರಿವು ಬಳಗದ ವತಿಯಿಂದ 50ನೇ ಸ್ವಚ್ಛತಾ ವಾರದ ಪ್ರಯುಕ್ತ ಸ್ವಚ್ಛತಾ ಕಾರ್ಯ ಹಾಗೂ ಪ್ಲಾಸ್ಟಿಕ್ ನಿರ್ಮೂಲನಾ ಜಾಥಾ ಬಂಕಿಕೊಡ್ಲದ ಬಂಕನಾಥೇಶ್ವರ ದೇವಸ್ಥಾನದಿಂದ ಹೆಗ್ರೆವರೆಗೆ ಭಾನುವಾರ ನಡೆಯಿತು.
ಪ್ಲಾಸ್ಟಿಕ್ ಬಳಕೆ ನಿಷೇಧಿಸಬೇಕು ಮತ್ತು ಪ್ಲಾಸ್ಟಿಕ್ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆಯಬಾರದು ಎಂಬ ಫಲಕಗಳು ಜಾಥಾದಲ್ಲಿ ಗಮನಸೆಳೆದವು. ಶಾಸಕಿ ರೂಪಾಲಿ ನಾಯ್ಕ ಇವರಿಂದ ದೀಪಬೆಳಗಿಸುವುದರ ಮೂಲಕ ಕಾರ್ಯಕ್ರಮ ಪ್ರಾರಂಭಗೊಂಡಿತು. ಕಾರ್ಯಕ್ರಮದಲ್ಲಿ ನಾಗರಾಜ ನಾಯಕ ತೊರ್ಕೆ, ಗೋಕರ್ಣ ಪ್ರಾರ್ಥಮಿಕ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿ ಡಾ. ಜಗದೀಶ್ ನಾಯ್ಕ, ಅರುಣ್ ಕವರಿ, ಸುಜಾತಾ ನಾಯಕ, ಶಂಕರ ಪ್ರಸಾದ ಆಶ್ರಮ, ಹನೇಹಳ್ಳಿ ಮುಂತಾದವರು ಉಪಸ್ಥಿತರಿದ್ದರು.
ಪ್ಲಾಸ್ಟಿಕ್ ಬಳಕೆ ನಿಷೇಧಿಸಬೇಕು ಮತ್ತು ಪ್ಲಾಸ್ಟಿಕ್ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆಯಬಾರದು ಎಂಬ ಫಲಕಗಳು ಜಾಥಾದಲ್ಲಿ ಗಮನಸೆಳೆದವು. ಶಾಸಕಿ ರೂಪಾಲಿ ನಾಯ್ಕ ಇವರಿಂದ ದೀಪಬೆಳಗಿಸುವುದರ ಮೂಲಕ ಕಾರ್ಯಕ್ರಮ ಪ್ರಾರಂಭಗೊಂಡಿತು. ಕಾರ್ಯಕ್ರಮದಲ್ಲಿ ನಾಗರಾಜ ನಾಯಕ ತೊರ್ಕೆ, ಗೋಕರ್ಣ ಪ್ರಾರ್ಥಮಿಕ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿ ಡಾ. ಜಗದೀಶ್ ನಾಯ್ಕ, ಅರುಣ್ ಕವರಿ, ಸುಜಾತಾ ನಾಯಕ, ಶಂಕರ ಪ್ರಸಾದ ಆಶ್ರಮ, ಹನೇಹಳ್ಳಿ ಮುಂತಾದವರು ಉಪಸ್ಥಿತರಿದ್ದರು.