ಆ್ಯಪ್ನಗರ

ಕಾರವಾರದಲ್ಲಿ ಬಸ್ಸಿಲ್ಲದೆ ಸಂಕಷ್ಟಕ್ಕೀಡಾದ ಕೊಡಗಿನ ತಾಯಿ, ಮಗಳಿಗೆ ನೆರವಾದ ​ಪೊಲೀಸ್

ಕೊಡಗು ಜಿಲ್ಲೆಯ ವಿರಾಜಪೇಟೆಯಿಂದ ಮಹಾರಾಷ್ಟ್ರದ ರತ್ನಗಿರಿಗೆ ತೆರಳುತ್ತಿದ್ದ ತಾಯಿ ಮತ್ತು ಮಗಳು ಬಸ್ ಸಂಚಾರ ವ್ಯತ್ಯಯದ ಕಾರಣ ಕಾರವಾರ ಬಸ್ ನಿಲ್ದಾಣದಲ್ಲಿ ಪರದಾಡುತ್ತಿದ್ದರು. ವಿಷಯ ತಿಳಿದ ಕಾರವಾರ ಸಂಚಾರಿ ಠಾಣೆಯ ಪಿಎಸ್ಐ ನಿಂಗಣ್ಣ ಜಕ್ಕಣ್ಣನವರ್ ಇವರಿಗೆ ನೆರವಾಗಿದ್ದಾರೆ.

Vijaya Karnataka Web 24 May 2020, 3:06 pm
ಕಾರವಾರ: ಕೊಡಗು ಜಿಲ್ಲೆಯ ವಿರಾಜಪೇಟೆಯಿಂದ ಮಹಾರಾಷ್ಟ್ರದ ರತ್ನಗಿರಿಗೆ ತೆರಳುತ್ತಿದ್ದ ತಾಯಿ, ಮಗಳು ಬಸ್ ಸಂಚಾರ ವ್ಯತ್ಯಯದ ಕಾರಣ ಕಾರವಾರ ಬಸ್ ನಿಲ್ದಾಣದಲ್ಲಿ ಸಿಕ್ಕಿ ಹಾಕಿಕೊಂಡು ಸಂಕಷ್ಟಕ್ಕೀಡಾದ ಘಟನೆ ನಡೆದಿದೆ.
Vijaya Karnataka Web police help to distressed mother and daughter in karwar
ಕಾರವಾರದಲ್ಲಿ ಬಸ್ಸಿಲ್ಲದೆ ಸಂಕಷ್ಟಕ್ಕೀಡಾದ ಕೊಡಗಿನ ತಾಯಿ, ಮಗಳಿಗೆ ನೆರವಾದ ​ಪೊಲೀಸ್


ಕೊಡಗು ಮೂಲದ ಈ ತಾಯಿ ಹಾಗೂ ಮಗಳು ಮಹಾರಾಷ್ಟ್ರದಲ್ಲಿ ಹೋಮ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಈ ಹಿಂದೆ ಲಾಕ್ ಡೌನ್ ಆಗುವ ಮೊದಲು ಇಬ್ಬರೂ ಮಹಾರಾಷ್ಟ್ರದಿಂದ ಕೊಡಗಿನ ವಿರಾಜಪೇಟೆಗೆ ವಾಪಸಾಗಿದ್ದರು. ಈಗ ಲಾಕ್ ಡೌನ್ ಸಡಿಲಿಕೆಯಾಗಿರುವುದರಿಂದ ಇವರು ಮಹಾರಾಷ್ಟ್ರಕ್ಕೆ ತಮ್ಮ ಉದ್ಯೋಗಕ್ಕಾಗಿ ತೆರಳುತ್ತಿದ್ದರು. ಆದರೆ ಶನಿವಾರ ನಡು ರಾತ್ರಿ ಕಾರವಾರಕ್ಕೆ ಬಂದ ಬಳಿಕ ಮಹಾರಾಷ್ಟ್ರಕ್ಕೆ ಬಸ್ ಸಿಕ್ಕಿಲ್ಲ , ಇಡೀ ರಾತ್ರಿ ಬಸ್ ನಿಲ್ದಾಣದಲ್ಲೇ ಕಳೆಯುವಂತಾಗಿದೆ. ಭಾನುವಾರ ಸಂಪೂರ್ಣ ನಿಷೇಧಾಜ್ಞೆ ಇರುವುದರಿಂದ ಬಸ್ ಸಂಚಾರ ಸ್ಥಗಿತಗೊಂಡಿದೆ.

ಪೊಲೀಸ್ ನೆರವು

ಶನಿವಾರದಿಂದ ಊಟ, ತಿಂಡಿ ಇಲ್ಲದೆ ಹಸಿವಿನಲ್ಲಿ ಬಳಲುತ್ತಿದ್ದ ತಾಯಿ-ಮಗಳಿಗೆ ಕಾರವಾರ ಸಂಚಾರಿ ಠಾಣೆಯ ಪಿಎಸ್ಐ ನಿಂಗಣ್ಣ ಜಕ್ಕಣ್ಣನವರ್ ಅವರು ನೆರವಾಗಿದ್ದಾರೆ. ಊಟ, ತಿಂಡಿಯ ವ್ಯವಸ್ಥೆ ಮಾಡಿ ಹೊಟೇಲ್ ನಲ್ಲಿ ಉಳಿಯಲು ವ್ಯವಸ್ಥೆ ಮಾಡಿದ್ದಾರೆ. ಸೋಮವಾರ ಬಸ್ ಸಂಚಾರ ಆರಂಭವಾದ ಬಳಿಕ ಅವರನ್ನ ಗೋವಾ ಮೂಲಕ ಮಹಾರಾಷ್ಟ್ರಕ್ಕೆ ಕಳುಹಿಸಲು ವ್ಯವಸ್ಥೆ ಕಲ್ಪಿಸುವುದಾಗಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ