ಆ್ಯಪ್ನಗರ

ಶಿರಸಿ: ಲಾಕ್‌ಡೌನ್‌ ಉಲ್ಲಂಘನೆ ಮಾಡಿದ ಸವಾರರ ಕೈಗೆ 'ನನ್ನನ್ನು ಕ್ಷಮಿಸಿ' ಫಲಕ, ವಿನೂತನ ಜಾಗೃತಿ ಮೂಡಿಸಿದ ಪೊಲೀಸರು

ಕೊರೊನಾ ಕೊವಿಡ್ - 19 ಸಾಂಕ್ರಾಮಿಕ ರೋಗ ಹರಡಂತೆ ಜಾಗೃತಿ ವಹಿಸುವಂತೆ ಕಳಕಳಿಯಿಂದ ಮನವಿ ಮಾಡುತ್ತಿದ್ದರೂ ಸಹ ಕೆಲ ಸಾರ್ವಜನಿಕರು ಅನಾವಶ್ಯಕವಾಗಿ ರಸ್ತೆ ಮೇಲೆ ಸಂಚರಿಸುತ್ತಿದ್ದಾರೆ, ಅವರಿಗೆ ವಿನೂತನ ಶಿಕ್ಷೆ ನೀಡಲಾಗುತ್ತಿದೆ.

Vijaya Karnataka Web 30 Mar 2020, 6:16 pm
ಶಿರಸಿ: ಲಾಕ್ ಡೌನ್ ಆದೇಶ ಉಲ್ಲಂಘನೆ ಮಾಡಿ ರಸ್ತೆಗೆ ಹರಿಯುವ ವಾಹನ ಸವಾರರ ಕೈಗೆ ನನ್ನನ್ನು ಕ್ಷಮಿಸಿ ಎಂಬ ನಾಮಫಲಕ ನೀಡುವ ಮೂಲಕ ಶಿರಸಿಯ ಮಾರುಕಟ್ಟೆ ಠಾಣೆ ಪೊಲೀಸರು ವಿನೂತನ ರೀತಿಯಲ್ಲಿ ಜಾಗೃತಿ ಪ್ರಾರಂಭಿಸಿದ್ದಾರೆ.
Vijaya Karnataka Web ಶಿರಸಿ
ಶಿರಸಿ


ಪೊಲೀಸರು ಎಷ್ಟೇ ಶಾಂತಿ ಸಂಯಮದಿಂದ ವರ್ತಿಸಿದರೂ ಸಾರ್ವಜನಿಕರು ಅನವಶ್ಯಕವಾಗಿ ರಸ್ತೆಗೆ ಬರುತ್ತಿದ್ದಾರೆ.

ಕೊರೊನಾ ಕೊವಿಡ್ - 19 ಸಾಂಕ್ರಾಮಿಕ ರೋಗ ಹರಡಂತೆ ಜಾಗೃತಿ ವಹಿಸುವಂತೆ ಕಳಕಳಿಯಿಂದ ಮನವಿ ಮಾಡುತ್ತಿದ್ದರೂ ಸಹ ಕೆಲ ಸಾರ್ವಜನಿಕರು ಅನಾವಶ್ಯಕವಾಗಿ ರಸ್ತೆ ಮೇಲೆ ಸಂಚರಿಸುತ್ತಿದ್ದಾರೆ, ಇಂಥ ಸಾರ್ವಜನಿಕರನ್ನು ನಿಯಂತ್ರಿಸಲು ಸಿಪಿಐ ಪ್ರದೀಪ್ ಹಾಗೂ ಪಿಎಸ್ ಐ ನಾಗಪ್ಪ ನೇತೃತ್ವದಲ್ಲಿ ಸೋಮವಾರ ವಿನೂತನ ಕಾರ್ಯಾಚರಣೆ ಹಮ್ಮಿಕೊಂಡು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಪ್ರಯತ್ನಿಸಲಾಯಿತು.

ಸವಾರರಿಗೆ ಕೊರೊನಾ ಲಾಕ್ ಡೌನ್ ಆದೇಶವನ್ನು ಉಲ್ಲಂಘಿಸಿದ್ದೇನೆ. ನನ್ನನ್ನು ಕ್ಷಮಿಸಿ" ಎಂಬ ನಾಮಪಲಕವನ್ನು ಕೈಯಲ್ಲಿ ಕೊಡಲಾಗುತ್ತಿದೆ. ಈ ಮೂಲಕ ಕೊರೊನಾ ಕಾಯಿಲೆ ವಿರುದ್ಧದ ಆದೇಶವನ್ನು ಉಲ್ಲಂಘಿಸಿ ಸ್ವಯಂಕೃತ ತಪ್ಪು ಮಾಡಿದ್ದೇನೆ ಎಂಬುದಾಗಿ ಸಾರ್ವಜನಿಕರಿಗೆ ಮನವರಿಕೆ ಮಾಡಿ ಅನವಶ್ಯಕವಾಗಿ ರಸ್ತೆಗೆ ಇಳಿಯುವ ಸಾರ್ವಜನಿಕರನ್ನು ನಿಯಂತ್ರಿಸಲು ಕೈಗೊಂಡ ವಿನೂತನ ಕಾರ್ಯಾಚರಣೆಯಾಗಿದೆ.

ಸಾರ್ವಜನಿಕರಿಗೆ ತಮ್ಮ ತಪ್ಪಿನ ಅರಿವು ಆಗಿ ರಸ್ತೆಗೆ ಇಳಿಯುವವರ ಸಂಖ್ಯೆ ಕಡಿಮೆಯಾದರೆ ಸಾಕು ಎನ್ನುವುದು ಶಿರಸಿ ನಗರ ಪೊಲೀಸರ ಉದ್ದೇಶವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ