ಆ್ಯಪ್ನಗರ

ಸುರಿಯುವ ಮಳೆಯಲ್ಲೇ ವಿದ್ಯುತ್‌ ಲೈನ್‌ ದುರಸ್ತಿ

ಗೋಕರ್ಣ: ಕುಮಟಾ- ಗೋಕರ್ಣ ನಡುವಿನ ವಿದ್ಯುತ್‌ ಲೈನ್‌ನಲ್ಲಿಭಾನುವಾರ ಸಂಜೆ ದೋಷ ಕಾಣಿಸಿಕೊಂಡಿತ್ತು. ಅದನ್ನು ಸರಿಪಡಿಸಲು ಗೋಕರ್ಣದ 5 ಜನರ ತಂಡವೊಂದು ಅಂದೇ ರಾತ್ರಿ 4 ಗಂಟೆಗೆ ತೆರಳಿತ್ತು. ಪವರ್‌ ಮ್ಯಾನ್‌ ಮತ್ತು 24*7 ಸಿಬ್ಬಂದಿ ಈ ತಂಡದಲ್ಲಿತ್ತು.

Vijaya Karnataka 4 Sep 2019, 5:00 am
ಗೋಕರ್ಣ: ಕುಮಟಾ- ಗೋಕರ್ಣ ನಡುವಿನ ವಿದ್ಯುತ್‌ ಲೈನ್‌ನಲ್ಲಿಭಾನುವಾರ ಸಂಜೆ ದೋಷ ಕಾಣಿಸಿಕೊಂಡಿತ್ತು. ಅದನ್ನು ಸರಿಪಡಿಸಲು ಗೋಕರ್ಣದ 5 ಜನರ ತಂಡವೊಂದು ಅಂದೇ ರಾತ್ರಿ 4 ಗಂಟೆಗೆ ತೆರಳಿತ್ತು. ಪವರ್‌ ಮ್ಯಾನ್‌ ಮತ್ತು 24*7 ಸಿಬ್ಬಂದಿ ಈ ತಂಡದಲ್ಲಿತ್ತು.
Vijaya Karnataka Web power line repair in pouring rain
ಸುರಿಯುವ ಮಳೆಯಲ್ಲೇ ವಿದ್ಯುತ್‌ ಲೈನ್‌ ದುರಸ್ತಿ


ಬರ್ಗಿಯ ಘಟಬೀರ ದೇವಸ್ಥಾನದ ಹಿಂದುಗಡೆ ಇರುವ ಗುಡ್ಡದ ಕೆಳಗಿನ ಕಾಡಿನಲ್ಲಿಗುಡ್ಡ ಕುಸಿದು ದೊಡ್ಡ ಗಾತ್ರದ ಮರ 15 ಮೀಟರ್‌ ಎತ್ತರ ಇರುವ ವಿದ್ಯುತ್‌ ಲೈನ್‌ ಮೇಲೆ ಬಿದ್ದು ವಿದ್ಯುತ್‌ ಲೈನ್‌ ತುಂಡಾಗಿ ಕೆಳಗಡೆ ಬಿದ್ದಿತ್ತು. ನಂತರ ಗೋಕರ್ಣದ ಎಲ್ಲಪವರ್‌ ಮ್ಯಾನ್‌ಗಳು ಮತ್ತು 24*7 ಸಿಬ್ಬಂದಿ ರಾತ್ರಿ ವೇಳೆಯೇ ಕೇವಲ ಮೊಬೈಲ್‌ ಮತ್ತು ಒಂದು ಬ್ಯಾಟರಿ ಸಹಾಯದಿಂದ ಆ ಸುರಿಯುವ ಮಳೆಯನ್ನು ಲೆಕ್ಕಿಸದೇ ಬೆಟ್ಟದ ಒಳಗೆ ಹರಸಾಹಸ ಪಟ್ಟು ಲೈನ್‌ ಮೇಲೆ ಬಿದ್ದ ಮರವನ್ನು ತುಂಡರಿಸಿ ಲೈನ್‌ ಸರಿಪಡಿಸಿದರು.

ಆದರೆ ಲೈನ್‌ ಚಾಜ್‌ರ್‍ ಮಾಡಿದಾಗ ಕೇವಲ 2 ನಿಮಿಷ ವಿದ್ಯುತ್‌ ಬಂದು ಹೋಯಿತು. ಸುರಿಯುವ ಮಳೆಯಲ್ಲೇ ಮತ್ತೆ ಲೈನ್‌ ದೋಷವನ್ನು ಕಂಡು ಹಿಡಿಯಲು ಪ್ರಯತ್ನಿಸಿದರು. ಮಾದನಗೇರಿಯಿಂದ ಗೋಕರ್ಣಕ್ಕೆ ಬಂದ ವಿದ್ಯುತ್‌ ಲೈನ್‌ ಗುಡ್ಡದ ಮೇಲೆ ಇರುವ ಕಂಬವನ್ನೇರಿ ಲೈನ್‌ ಚಾಜ್‌ರ್‍ ಮಾಡಿದಾಗ ಉಳವರೆ ಗುಡ್ಡದಮೇಲೆ ಇದ್ದ ಕಂಬದಲ್ಲಿದೋಷ ಕಂಡು ಬಂದಿತು. ಆ ಕಂಬವನ್ನೇರಿ ಸರಿಪಡಿಸಿದಾಗ ಸಮಯ ಬೆಳಗಿನ ಜಾವ ಸುಮಾರು 5 ಗಂಟೆಯಾಗಿತ್ತು.

ಗಣೇಶ ಚತುರ್ಥಿಯ ಸಮಯದಲ್ಲಿಗೋಕರ್ಣಕ್ಕೆ ವಿದ್ಯುತ್‌ ವ್ಯವಸ್ಥೆ ಮಾಡಲೇ ಬೇಕು ಎಂಬ ಛಲದಿಂದ ಊಟ ತಿಂಡಿಯನ್ನು ಸಹ ಮಾಡದೇ ಪ್ರಯತ್ನಿಸಿದ್ದು ಯಶಸ್ವಿ ಆಯಿತು.

ಪಟಾನ, ವಿಜಯ ತೊಡುರು, ಸತೀಶ ಗೌಡ, ಶಾಖಾಧಿಕಾರಿಗಳಾದ ನಾಗರಾಜ ಗೌಡ, ಪವರ್‌ ಮ್ಯಾನ್‌ ವೆಂಕಟೇಶ ಗೌಡ, ಪವರ್‌ ಮ್ಯಾನ್‌ ಬೀರಾ ಬಿ. ಗೌಡ, ಆಧಿನಾಥ, ಅನೀಲ, ವಿನಾಯಕ ದೊಡಮನಿ, ಸೋಮಪ್ಪ, ದೇವಿದಾಸ ಗೌಡ ಮಂಜುನಾಥ ಉಪ್ಪಾರ ಮತ್ತು ಗೋಕರ್ಣದ 24*7 ಸಿಬ್ಬಂದಿಗಳಾದ ರವಿ ನಾಯ್ಕ, ಗಜು ನಾಯ್ಕ, ವಿನಾಯಕ ನಾಯ್ಕ ಶ್ರಮಿಸಿದರು. ಗೋಕರ್ಣ ಹೆಸ್ಕಾಂ ಕಚೇರಿಯಲ್ಲಿಸಿಬ್ಬಂದಿಗಳ ಕೊರತೆ ಇರುವುದರಿಂದ ಇಷ್ಟು ಸಮಯ ಬೇಕಾಯಿತು. ಎಲ್ಲಸಿಬ್ಬಂದಿ ವ್ಯವಸ್ಥೆ ಇದ್ದರೆ ಇನ್ನೂ ಬೇಗ ಕೆಲಸ ಮಾಡಬಹುದಿತ್ತು ಎಂಬುದು ಅವರ ಆಶಯವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ