ಹುಬ್ಬಳ್ಳಿ : ಉತ್ತರ ಪ್ರದೇಶದ ಗೋರಖಪುರ ಸರಕಾರಿ ಆಸ್ಪತ್ರೆಯಲ್ಲಿ ಸಕಾಲಕ್ಕೆ ಆಮ್ಲಜನಕ ಪೂರೈಕೆ ಮಾಡದ್ದರಿಂದ ಹಲವು ಕಂದಮ್ಮಗಳು ಜೀವ ಕಳೆದುಕೊಂಡವು. ಹಾಗೆಯೇ ಧಾರವಾಡ ಕಟ್ಟಡ ಕುಸಿತ ದುರಂತದ ರಕ್ಷಣಾ ಕಾರ್ಯಾಚರಣೆಯಲ್ಲಿ ಸಕಾಲಕ್ಕೆ ಆಮ್ಲಜನಕ ಸರಬರಾಜು ಮಾಡಿರದಿದ್ದರೆ ಏನಾಗುತ್ತಿತ್ತು...?
ಜೀವರಕ್ಷಕ ಆಮ್ಲಜನಕ ದೊರೆಯದಿದ್ದಲ್ಲಿ ಅವಶೇಷಗಳಡಿಯಲ್ಲಿ ಸಿಲುಕಿದವರಲ್ಲಿ ಬಹುತೇಕರು ಇಹಲೋಕ ತ್ಯಜಿಸಿರುತ್ತಿದ್ದರು. ಹೌದು, ಮನುಷ್ಯ ಅನ್ನ, ನೀರು, ಬೆಳಕು ಇಲ್ಲದೆ ಕೆಲದಿನ ಬದುಕಲು ಸಾಧ್ಯ. ಆದರೆ, ಆಮ್ಲಜನಕ ಇಲ್ಲದೆ ಬದುಕುವುದು ಕಷ್ಟ. ಧಾರವಾಡದ ಕಟ್ಟಡ ಕುಸಿತ ದುರಂತದಲ್ಲಿ ಸಿಲುಕಿದವರು ಪವಾಡ ಸದೃಶವಾಗಿ ಬದುಕಿ ಬರಲು ಸಕಾಲಕ್ಕೆ ದೊರೆತ ಆಮ್ಲಜನಕ ಪ್ರಮುಖ ಕಾರಣವಾಯಿತು.
ಕಟ್ಟಡ ಕುಸಿತ ದುರಂತದ ರಕ್ಷಣಾ ಕಾರ್ಯಾಚರಣೆಯಲ್ಲಿ ಹುಬ್ಬಳ್ಳಿ ಕಿಮ್ಸ್ನ ಪಾತ್ರ ಅತ್ಯಂತ ಮಹತ್ವದ್ದು ಎಂಬುವುದು ಬೆಳಕಿಗೆ ಬಂದಿದೆ. ಕಿಮ್ಸ್ನಿಂದ ನಿಯಮಿತವಾಗಿ ಪೂರೈಕೆಯಾದ ಆಮ್ಲಜನಕದಿಂದಾಗಿ 26 ಜನರ ಜೀವ ಬದುಕುಳಿಯಿತು.
ಮಾ.19 ರಂದು 60 ಅಂಗಡಿಗಳನ್ನೊಳಗೊಂಡ ಬಹುಮಹಡಿ ಕಟ್ಟಡ ಕುಸಿತದಿಂದ ಮೊದಲ ದಿನ ಇಬ್ಬರು ಸಾವು ಹೊಂದಿದ್ದು, 28 ಜನರನ್ನು ರಕ್ಷಿಸಲಾಗಿತ್ತು. ಕಟ್ಟಡ ಕುಸಿತದ ಮೊದಲ ದಿನ ಕಿಮ್ಸ್ನಿಂದ ಆಮ್ಲಜನಕ ಸರಬರಾಜು ಮಾಡಲಾಯಿತು. ರಕ್ಷಣಾ ತಂಡದ ಪಡೆ ಆಮ್ಲಜನಕವನ್ನು 1 ಗಂಟೆಗೆ 5 ಲೀಟರ್ನಂತೆ ಪೈಪ್ ಮೂಲಕ ಕಟ್ಟಡದ ಒಳಗೆ ಬಿಟ್ಟಿದ್ದರಿಂದ ಸಾವಿನ ಸಂಖ್ಯೆ ಕಡಿಮೆ ಆಗಿದೆ.
26 ಜನ ಬದುಕುಳಿದರೆ?: ಮಾ.19ರಿಂದ 24 ರ ವರೆಗೆ ಕಟ್ಟಡದಡಿ ಸಿಲುಕಿ ಮೃತಪ್ಪಟವರು 15 ಜನ. ಈವರೆಗೆ 54 ಜನರನ್ನು ರಕ್ಷಿಸಲಾಗಿದೆ. ಮೊದಲ ದಿನ ರಕ್ಷಣೆ ಮಾಡಿದವರನ್ನು ಹೊರತುಪಡಿಸಿದರೆ ಎರಡನೇ ದಿನದಿಂದ ಭಾನುವಾರದವರೆಗೆ 26 ಜನರನ್ನು ರಕ್ಷಿಸಲಾಗಿದೆ. ಇವರೆಲ್ಲರೂ ಬದುಕುಳಿಯಲು ಆಮ್ಲಜನಕವೂ ಕಾರಣವಾಯಿತು ಎಂಬುವುದನ್ನು ಮರೆಯುವಂತಿಲ್ಲ. ಇಕ್ಕಟ್ಟಿನಲ್ಲಿ ಸಿಲುಕಿದವರನ್ನು ಹೊರತೆಗೆಯಲು ತಡವಾಗುತ್ತಿರುವುದರಿಂದ ಅವರಿಗೆ ಪೈಪ್ ಮೂಲಕ ಆಮ್ಲಜನಕ ಪೂರೈಸಲಾಗಿತ್ತು. ಇದರಿಂದ ಅವರು ಬದುಕುಳಿಯಲು ಸಾಧ್ಯವಾಯಿತು ಎನ್ನುತ್ತಾರೆ ವೈದ್ಯರು.
8+14 ಆಮ್ಲಜನಕ ಸಿಲಿಂಡರ್: ಹುಬ್ಬಳ್ಳಿ ಕಿಮ್ಸ್ನಿಂದ 7 ಕ್ಯೂಬಿಕ್ ಮೀಟರ್ ಸಾಮರ್ಥ್ಯದ 8 ಜಂಬೋ ಆಮ್ಲಜನಕ ಸಿಲಿಂಡರ್ಗಳು ಹಾಗೂ 1.5 ಕ್ಯೂಬಿಕ್ ಮೀಟರ್ ಸಾಮರ್ಥ್ಯದ ಬಿ. ಟೈಫ್ ಸಣ್ಣ 14 ಸಿಲಿಂಡರ್ಗಳನ್ನು ಕಟ್ಟಡ ಕಾರ್ಯಾಚರಣೆ ಸ್ಥಳಕ್ಕೆ ಸರಬರಾಜು ಮಾಡಲಾಗಿತ್ತು. 8 ಜಂಬೋ ಸಿಲಿಂಡರ್ಗಳಲ್ಲಿ 5 ಸಿಲಿಂಡರ್ಗಳನ್ನು ಕಟ್ಟಡದಲ್ಲಿ ಸಿಲುಕಿದವರನ್ನು ಉಳಿಸಲು, 2 ಸಿಲಿಂಡರ್ಗಳನ್ನು ಕಬ್ಬಿಣ ಕತ್ತರಿಸಲು ಬಳಸಲಾಗಿದ್ದು, ಇನ್ನೊಂದು ಬಾಕಿ ಉಳಿದಿದೆ. ಬಿ.ಟೈಫ್ ಸಣ್ಣ ಸಿಲಿಂಡರ್ಗಳಲ್ಲಿ 6 ಬಳಕೆಯಾಗಿದ್ದು, 3 ಆ್ಯಂಬುಲೆನ್ಸ್ನಲ್ಲಿವೆ. ಉಳಿದ 5 ಸಿಲಿಂಡರ್ಗಳನ್ನು ಎನ್ಡಿಆರ್ಎಫ್ ಸಿಬ್ಬಂದಿಗೆ ನೀಡಲಾಗಿತ್ತು. ಇದರ ಜತೆ ಪ್ಲೋ ಮೀಟರ್-20, ಆಮ್ಲಜನಿಕ ಮಾಸ್ಕ್-50 ಕೂಡ ಕಳಿಸಲಾಗಿತ್ತು. ಇನ್ನು ಸಾವಿರಾರು ರೋಗಿಗಳು ಬರುವ ಕಿಮ್ಸ್ನಲ್ಲಿ ದಿನಕ್ಕೆ (24 ಗಂಟೆ ನಿರಂತರ) 1000 ಕ್ಯೂಬಿಕ್ ಮೀಟರ್ ಆಮ್ಲಜನಕ ಬಳಕೆ ಮಾಡಲಾಗುತ್ತದೆ ಎಂಬುವುದನ್ನು ಇಲ್ಲಿ ಸ್ಮರಿಸಬಹುದು.
ಜೀವರಕ್ಷಕ ಆಮ್ಲಜನಕ ದೊರೆಯದಿದ್ದಲ್ಲಿ ಅವಶೇಷಗಳಡಿಯಲ್ಲಿ ಸಿಲುಕಿದವರಲ್ಲಿ ಬಹುತೇಕರು ಇಹಲೋಕ ತ್ಯಜಿಸಿರುತ್ತಿದ್ದರು. ಹೌದು, ಮನುಷ್ಯ ಅನ್ನ, ನೀರು, ಬೆಳಕು ಇಲ್ಲದೆ ಕೆಲದಿನ ಬದುಕಲು ಸಾಧ್ಯ. ಆದರೆ, ಆಮ್ಲಜನಕ ಇಲ್ಲದೆ ಬದುಕುವುದು ಕಷ್ಟ. ಧಾರವಾಡದ ಕಟ್ಟಡ ಕುಸಿತ ದುರಂತದಲ್ಲಿ ಸಿಲುಕಿದವರು ಪವಾಡ ಸದೃಶವಾಗಿ ಬದುಕಿ ಬರಲು ಸಕಾಲಕ್ಕೆ ದೊರೆತ ಆಮ್ಲಜನಕ ಪ್ರಮುಖ ಕಾರಣವಾಯಿತು.
ಕಟ್ಟಡ ಕುಸಿತ ದುರಂತದ ರಕ್ಷಣಾ ಕಾರ್ಯಾಚರಣೆಯಲ್ಲಿ ಹುಬ್ಬಳ್ಳಿ ಕಿಮ್ಸ್ನ ಪಾತ್ರ ಅತ್ಯಂತ ಮಹತ್ವದ್ದು ಎಂಬುವುದು ಬೆಳಕಿಗೆ ಬಂದಿದೆ. ಕಿಮ್ಸ್ನಿಂದ ನಿಯಮಿತವಾಗಿ ಪೂರೈಕೆಯಾದ ಆಮ್ಲಜನಕದಿಂದಾಗಿ 26 ಜನರ ಜೀವ ಬದುಕುಳಿಯಿತು.
ಮಾ.19 ರಂದು 60 ಅಂಗಡಿಗಳನ್ನೊಳಗೊಂಡ ಬಹುಮಹಡಿ ಕಟ್ಟಡ ಕುಸಿತದಿಂದ ಮೊದಲ ದಿನ ಇಬ್ಬರು ಸಾವು ಹೊಂದಿದ್ದು, 28 ಜನರನ್ನು ರಕ್ಷಿಸಲಾಗಿತ್ತು. ಕಟ್ಟಡ ಕುಸಿತದ ಮೊದಲ ದಿನ ಕಿಮ್ಸ್ನಿಂದ ಆಮ್ಲಜನಕ ಸರಬರಾಜು ಮಾಡಲಾಯಿತು. ರಕ್ಷಣಾ ತಂಡದ ಪಡೆ ಆಮ್ಲಜನಕವನ್ನು 1 ಗಂಟೆಗೆ 5 ಲೀಟರ್ನಂತೆ ಪೈಪ್ ಮೂಲಕ ಕಟ್ಟಡದ ಒಳಗೆ ಬಿಟ್ಟಿದ್ದರಿಂದ ಸಾವಿನ ಸಂಖ್ಯೆ ಕಡಿಮೆ ಆಗಿದೆ.
26 ಜನ ಬದುಕುಳಿದರೆ?: ಮಾ.19ರಿಂದ 24 ರ ವರೆಗೆ ಕಟ್ಟಡದಡಿ ಸಿಲುಕಿ ಮೃತಪ್ಪಟವರು 15 ಜನ. ಈವರೆಗೆ 54 ಜನರನ್ನು ರಕ್ಷಿಸಲಾಗಿದೆ. ಮೊದಲ ದಿನ ರಕ್ಷಣೆ ಮಾಡಿದವರನ್ನು ಹೊರತುಪಡಿಸಿದರೆ ಎರಡನೇ ದಿನದಿಂದ ಭಾನುವಾರದವರೆಗೆ 26 ಜನರನ್ನು ರಕ್ಷಿಸಲಾಗಿದೆ. ಇವರೆಲ್ಲರೂ ಬದುಕುಳಿಯಲು ಆಮ್ಲಜನಕವೂ ಕಾರಣವಾಯಿತು ಎಂಬುವುದನ್ನು ಮರೆಯುವಂತಿಲ್ಲ. ಇಕ್ಕಟ್ಟಿನಲ್ಲಿ ಸಿಲುಕಿದವರನ್ನು ಹೊರತೆಗೆಯಲು ತಡವಾಗುತ್ತಿರುವುದರಿಂದ ಅವರಿಗೆ ಪೈಪ್ ಮೂಲಕ ಆಮ್ಲಜನಕ ಪೂರೈಸಲಾಗಿತ್ತು. ಇದರಿಂದ ಅವರು ಬದುಕುಳಿಯಲು ಸಾಧ್ಯವಾಯಿತು ಎನ್ನುತ್ತಾರೆ ವೈದ್ಯರು.
8+14 ಆಮ್ಲಜನಕ ಸಿಲಿಂಡರ್: ಹುಬ್ಬಳ್ಳಿ ಕಿಮ್ಸ್ನಿಂದ 7 ಕ್ಯೂಬಿಕ್ ಮೀಟರ್ ಸಾಮರ್ಥ್ಯದ 8 ಜಂಬೋ ಆಮ್ಲಜನಕ ಸಿಲಿಂಡರ್ಗಳು ಹಾಗೂ 1.5 ಕ್ಯೂಬಿಕ್ ಮೀಟರ್ ಸಾಮರ್ಥ್ಯದ ಬಿ. ಟೈಫ್ ಸಣ್ಣ 14 ಸಿಲಿಂಡರ್ಗಳನ್ನು ಕಟ್ಟಡ ಕಾರ್ಯಾಚರಣೆ ಸ್ಥಳಕ್ಕೆ ಸರಬರಾಜು ಮಾಡಲಾಗಿತ್ತು. 8 ಜಂಬೋ ಸಿಲಿಂಡರ್ಗಳಲ್ಲಿ 5 ಸಿಲಿಂಡರ್ಗಳನ್ನು ಕಟ್ಟಡದಲ್ಲಿ ಸಿಲುಕಿದವರನ್ನು ಉಳಿಸಲು, 2 ಸಿಲಿಂಡರ್ಗಳನ್ನು ಕಬ್ಬಿಣ ಕತ್ತರಿಸಲು ಬಳಸಲಾಗಿದ್ದು, ಇನ್ನೊಂದು ಬಾಕಿ ಉಳಿದಿದೆ. ಬಿ.ಟೈಫ್ ಸಣ್ಣ ಸಿಲಿಂಡರ್ಗಳಲ್ಲಿ 6 ಬಳಕೆಯಾಗಿದ್ದು, 3 ಆ್ಯಂಬುಲೆನ್ಸ್ನಲ್ಲಿವೆ. ಉಳಿದ 5 ಸಿಲಿಂಡರ್ಗಳನ್ನು ಎನ್ಡಿಆರ್ಎಫ್ ಸಿಬ್ಬಂದಿಗೆ ನೀಡಲಾಗಿತ್ತು. ಇದರ ಜತೆ ಪ್ಲೋ ಮೀಟರ್-20, ಆಮ್ಲಜನಿಕ ಮಾಸ್ಕ್-50 ಕೂಡ ಕಳಿಸಲಾಗಿತ್ತು. ಇನ್ನು ಸಾವಿರಾರು ರೋಗಿಗಳು ಬರುವ ಕಿಮ್ಸ್ನಲ್ಲಿ ದಿನಕ್ಕೆ (24 ಗಂಟೆ ನಿರಂತರ) 1000 ಕ್ಯೂಬಿಕ್ ಮೀಟರ್ ಆಮ್ಲಜನಕ ಬಳಕೆ ಮಾಡಲಾಗುತ್ತದೆ ಎಂಬುವುದನ್ನು ಇಲ್ಲಿ ಸ್ಮರಿಸಬಹುದು.