ಭೈರುಂಬೆಯಲ್ಲಿ ಪ್ರಾಣಾಯಾಮ ಕಾರ್ಯಕ್ರಮ
ಶಿರಸಿ : ಭೈರುಂಬೆಯ ಶ್ರೀ ಶಾರದಾಂಬಾ ಶಿಕ್ಷ ಣ ಸಂಸ್ಥೆಯಲ್ಲಿ ಯೋಗಾಚಾರ್ಯ ಬಿ.ಶಂಕರನಾರಾಯಣ ಶಾಸ್ತ್ರಿ ಪ್ರಾಣಾಯಾಮ ಕಾರ್ಯಕ್ರಮ ನಡೆಸಿಕೊಟ್ಟರು. ಮನುಷ್ಯನಿಗೆ ದೇಹ ಮತ್ತು ಮನಸ್ಸಿನ ಆರೋಗ್ಯ ಅತಿ ಮುಖ್ಯವಾದ ಅಂಶವಾಗಿದ್ದು, ಅದನ್ನು ಕಾಪಾಡಿಕೊಳ್ಳಲು ಸುಲಭವಾದ ಪ್ರಾಣಾಯಾಮ ವಿದ್ಯಾರ್ಥಿಗಳಿಗೆ ತಿಳಿಸಿದರು. ಜೀರ್ಣಾಂಗಗಳ ನಿರ್ಮಲೀಕರಣಕ್ಕಾಗಿ ಜಲಚಿಕಿತ್ಸೆ, ಶ್ವಾಸಕೋಶಗಳ ನಿರ್ಮಲೀಕರಣಕ್ಕಾಗಿ ನಿಶ್ವಾಸನ ಚಿಕಿತ್ಸೆಗಳಾದ ಭಸ್ತಿಕಾ, ಮುಖದೌತಿಗಳ ಮಾಹಿತಿ ನೀಡಿದರು. ಮಿದುಳಿಗೆ ಜಾಗೃತಿಯನ್ನುಂಟು ಮಾಡಿ, ಏಕಾಗ್ರತೆಯನ್ನು ಸಾಧಿಸಲು ಅನುಲೋಮ ಹಾಗೂ ವಿಲೋಮ ಪ್ರಾಣಾಯಾಮ, ಭ್ರಮರಿ ಪ್ರಾಣಾಯಾಮಗಳನ್ನು ಹೇಳಿಕೊಟ್ಟರು. ಜತೆಗೆ ಮನಸ್ಸನ್ನು ಶಾಂತವಾಗಿರಿಸಿಕೊಳ್ಳಲು ಸಹಾಯಕವಾಗುವ ಚಕ್ರೀಯ ಧ್ಯಾನವನ್ನು ಮಕ್ಕಳಿಗೆ ಕಲಿಸಿದರು. ಸೂಕ್ತ ವಿಷಯ ಹಾಗೂ ಪ್ರಾಯೋಗಿಕ ಜ್ಞಾನದೊಂದಿಗೆ ವಿದ್ಯಾರ್ಥಿಗಳ ಅಭ್ಯಾಸಕ್ಕೆ ಪೂರಕ ಆಸನಗಳನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಪ್ರೌಢಶಾಲೆಯ ಶಿಕ್ಷ ಕರು, ಹತ್ತನೆಯ ತರಗತಿಯ ವಿದ್ಯಾರ್ಥಿಗಳು ಪಾಲ್ಗೊಂಡರು.
Vijaya Karnataka 13 Jul 2019, 5:00 am
ಶಿರಸಿ : ಭೈರುಂಬೆಯ ಶ್ರೀ ಶಾರದಾಂಬಾ ಶಿಕ್ಷ ಣ ಸಂಸ್ಥೆಯಲ್ಲಿ ಯೋಗಾಚಾರ್ಯ ಬಿ.ಶಂಕರನಾರಾಯಣ ಶಾಸ್ತ್ರಿ ಪ್ರಾಣಾಯಾಮ ಕಾರ್ಯಕ್ರಮ ನಡೆಸಿಕೊಟ್ಟರು. ಮನುಷ್ಯನಿಗೆ ದೇಹ ಮತ್ತು ಮನಸ್ಸಿನ ಆರೋಗ್ಯ ಅತಿ ಮುಖ್ಯವಾದ ಅಂಶವಾಗಿದ್ದು, ಅದನ್ನು ಕಾಪಾಡಿಕೊಳ್ಳಲು ಸುಲಭವಾದ ಪ್ರಾಣಾಯಾಮ ವಿದ್ಯಾರ್ಥಿಗಳಿಗೆ ತಿಳಿಸಿದರು. ಜೀರ್ಣಾಂಗಗಳ ನಿರ್ಮಲೀಕರಣಕ್ಕಾಗಿ ಜಲಚಿಕಿತ್ಸೆ, ಶ್ವಾಸಕೋಶಗಳ ನಿರ್ಮಲೀಕರಣಕ್ಕಾಗಿ ನಿಶ್ವಾಸನ ಚಿಕಿತ್ಸೆಗಳಾದ ಭಸ್ತಿಕಾ, ಮುಖದೌತಿಗಳ ಮಾಹಿತಿ ನೀಡಿದರು. ಮಿದುಳಿಗೆ ಜಾಗೃತಿಯನ್ನುಂಟು ಮಾಡಿ, ಏಕಾಗ್ರತೆಯನ್ನು ಸಾಧಿಸಲು ಅನುಲೋಮ ಹಾಗೂ ವಿಲೋಮ ಪ್ರಾಣಾಯಾಮ, ಭ್ರಮರಿ ಪ್ರಾಣಾಯಾಮಗಳನ್ನು ಹೇಳಿಕೊಟ್ಟರು. ಜತೆಗೆ ಮನಸ್ಸನ್ನು ಶಾಂತವಾಗಿರಿಸಿಕೊಳ್ಳಲು ಸಹಾಯಕವಾಗುವ ಚಕ್ರೀಯ ಧ್ಯಾನವನ್ನು ಮಕ್ಕಳಿಗೆ ಕಲಿಸಿದರು. ಸೂಕ್ತ ವಿಷಯ ಹಾಗೂ ಪ್ರಾಯೋಗಿಕ ಜ್ಞಾನದೊಂದಿಗೆ ವಿದ್ಯಾರ್ಥಿಗಳ ಅಭ್ಯಾಸಕ್ಕೆ ಪೂರಕ ಆಸನಗಳನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಪ್ರೌಢಶಾಲೆಯ ಶಿಕ್ಷ ಕರು, ಹತ್ತನೆಯ ತರಗತಿಯ ವಿದ್ಯಾರ್ಥಿಗಳು ಪಾಲ್ಗೊಂಡರು.