ಆ್ಯಪ್ನಗರ

ಶಾಲೆ ಪ್ರಾರಂಭೋತ್ಸವಕ್ಕೆ ಸಕಲ ಸಿದ್ಧತೆ

ಭಟ್ಕಳ : ಬುಧವಾರ ತಾಲೂಕಿನ ಎಲ್ಲ ಶಾಲೆಗಳು ಆರಂಭವಾಗಲಿದ್ದು, ಪ್ರಾರಂಭೋತ್ಸವದ ಮುನ್ನಾ ದಿನವಾದ ಮಂಗಳವಾರ ಶಿಕ್ಷ ಕರು ಹಾಗೂ ವಿದ್ಯಾರ್ಥಿಗಳು ಶಾಲೆ ಸ್ವಚ್ಛತಾ ಕಾರ್ಯಕ್ರಮ ನಡೆಸಿದರು.

Vijaya Karnataka 29 May 2019, 5:00 am
ಭಟ್ಕಳ : ಬುಧವಾರ ತಾಲೂಕಿನ ಎಲ್ಲ ಶಾಲೆಗಳು ಆರಂಭವಾಗಲಿದ್ದು, ಪ್ರಾರಂಭೋತ್ಸವದ ಮುನ್ನಾ ದಿನವಾದ ಮಂಗಳವಾರ ಶಿಕ್ಷ ಕರು ಹಾಗೂ ವಿದ್ಯಾರ್ಥಿಗಳು ಶಾಲೆ ಸ್ವಚ್ಛತಾ ಕಾರ್ಯಕ್ರಮ ನಡೆಸಿದರು.
Vijaya Karnataka Web KWR-28BKL2


ಚುನಾವಣೆಯ ಕಾರಣ ಪುರಸಭೆ ವ್ಯಾಪ್ತಿ ಹೊರತುಪಡಿಸಿ ಗ್ರಾಮೀಣ ಭಾಗದ ಎಲ್ಲ ಶಾಲೆಗಳು ಬುಧವಾರ ಆರಂಭವಾಗಲಿದೆ. ತಾಲೂಕಿನೆಲ್ಲೆಡೆ ಕಂಡು ಬಂದಿರುವ ನೀರಿನ ಕೊರತೆ ಶಾಲಾ ಪ್ರಾರಂಭೋತ್ಸವದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಕಂಡು ಬಂದಿದೆ. ಶೌಚಾಲಯಕ್ಕೂ ನೀರು ಸಿಗದ ಕಾರಣ ಶಾಲೆಯನ್ನು ಆರಂಭಿಸುವುದೋ ಬೇಡವೋ ಎನ್ನುವ ಸಂದಿಗ್ಧತೆಯಲ್ಲಿ ಕೆಲವು ಶಿಕ್ಷ ಕರು ಕಾಲ ಕಳೆಯುತ್ತಿದ್ದಾರೆ. ಮಂಗಳವಾರ ಶಾಲಾ ಸ್ವಚ್ಛತೆಗೆ ನೀರನ್ನು ಪಡೆಯಲು ಶಿಕ್ಷ ಕರು ಹಾಗೂ ಸಿಬ್ಬಂದಿ ಹರಸಾಹಸ ಪಟ್ಟರು. ನೀರು ಪೂರೈಕೆ ಸಾಧ್ಯವಾಗದ ಕಾರಣ ಕೆಲವಡೆ ಬಿಸಿಯೂಟ ಸ್ಥಗಿತ ಮಾಡಲಾಗುವುದು ಎಂಬ ಮಾಹಿತಿ ಲಭಿಸಿದೆ. ಈ ಕುರಿತು ಮಾತನಾಡಿರುವ ಕ್ಷೇತ್ರ ಶಿಕ್ಷ ಣಾಧಿಕಾರಿ ಎಮ್‌.ಆರ್‌.ಮುಂಜಿ, ನೀರಿನ ಬಗ್ಗೆ ಈಗಾಗಲೇ ತಹಸೀಲ್ದಾರರಿಗೆ ಮನವಿ ಮಾಡಿಕೊಂಡಿದ್ದೇವೆ. ನೀರಿನ ಸಮಸ್ಯೆ ಬಗೆ ಹರಿಯುವ ವಿಶ್ವಾಸ ಇದ್ದು, ಬುಧವಾರ ಶಾಲಾ ಪ್ರಾರಂಭೋತ್ಸವಕ್ಕೆ ಎಲ್ಲ ಸಿದ್ಧತೆಯನ್ನು ಮಾಡಿಕೊಂಡಿದ್ದೇವೆ ಎಂದು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ