ಆ್ಯಪ್ನಗರ

ಕಾಂಗ್ರೆಸ್‌ ಘಟಕಗಳಿಗೆ ಅಧ್ಯಕ್ಷರ ನೇಮಕ

ಶಿರಸಿ : ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿಕಾಂಗ್ರೆಸ್‌ ಪಕ್ಷವನ್ನು ಸಂಘಟಿಸುವ ಭಾಗವಾಗಿ ತಾಲೂಕಿನ ಬದನಗೋಡ ಹಾಗೂ ಅಂಡಗಿ ಕಾಂಗ್ರೆಸ್‌ ಘಟಕಗಳ ನೂತನ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ.

Vijaya Karnataka 22 Sep 2019, 5:00 am
ಶಿರಸಿ : ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿಕಾಂಗ್ರೆಸ್‌ ಪಕ್ಷವನ್ನು ಸಂಘಟಿಸುವ ಭಾಗವಾಗಿ ತಾಲೂಕಿನ ಬದನಗೋಡ ಹಾಗೂ ಅಂಡಗಿ ಕಾಂಗ್ರೆಸ್‌ ಘಟಕಗಳ ನೂತನ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ.
Vijaya Karnataka Web president appoints congressional units
ಕಾಂಗ್ರೆಸ್‌ ಘಟಕಗಳಿಗೆ ಅಧ್ಯಕ್ಷರ ನೇಮಕ


ಬದನಗೋಡಿನಲ್ಲಿನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿಸ್ಥಳೀಯ ಘಟಕದ ಅಧ್ಯಕ್ಷರನ್ನಾಗಿ ಗ್ರಾಪಂ ಮಾಜಿ ಅಧ್ಯಕ್ಷ ರಾಜೇಂದ್ರ ಪಿ.ಗೌಡ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಹಾಗೇ ಅಂಡಗಿಯಲ್ಲಿನಡೆದ ಸಭೆಯಲ್ಲಿಘಟಕದ ಅಧ್ಯಕ್ಷರನ್ನಾಗಿ ಸಿ.ಬಿ.ಗೌಡ ಅವರು ಆಯ್ಕೆಯಾದರು.

ಕಳೆದ ತಿಂಗಳ ಅವಧಿಯಲ್ಲಿಈ ಎರಡು ಘಟಕಗಳ ಅಧ್ಯಕ್ಷರು ಮಾಜಿ ಶಾಸಕ ಶಿವರಾಮ ಹೆಬ್ಬಾರ ಅವರನ್ನು ಬೆಂಬಲಿಸಿ ರಾಜೀನಾಮೆ ನೀಡಿದ್ದರು. ಈ ಹಿನ್ನೆಲೆಯಲ್ಲಿಪುನಃ ಘಟಕಗಳ ರಚನೆಗೆ ಕಾಂಗ್ರೆಸ್‌ ಮುಂದಾಗಿತ್ತು. ಎರಡು ಕಡೆಗಳಲ್ಲಿನಡೆದ ಪಕ್ಷದ ಸಭೆಯಲ್ಲಿನೂರಾರು ಸಂಖ್ಯೆಯಲ್ಲಿಕಾರ್ಯಕರ್ತರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಬನವಾಸಿ ಬ್ಲಾಕ್‌ ಅಧ್ಯಕ್ಷ ಸಿ.ಎಫ್‌.ನಾಯ್ಕ, ಜಿಪಂ ಸದಸ್ಯ ಬಸವರಾಜ ದೊಡ್ಮನಿ, ಗ್ರಾಪಂ ಅಧ್ಯಕ್ಷ ಬಸವರಾಜ ನಂದಿಕೇಶ್ವರಮಠ, ಡಿಸಿಸಿ ಸದಸ್ಯರಾದ ಎಸ್‌.ಟಿ.ಹೆಗಡೆ ಬಿಸಲಕೊಪ್ಪ ಮುಂತಾದವರು ಪಾಲ್ಗೊಂಡಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ