ಆ್ಯಪ್ನಗರ

ಹಿಂದೂ ಧರ್ಮದಲ್ಲಿ ಯೋಗ್ಯತೆಗೆ ಆದ್ಯತೆ

ಶಿರಸಿ : ಶ್ರೀರಾಮ, ಶ್ರೀಕೃಷ್ಣರನ್ನು ಯಾವ ಜಾತಿಯಲ್ಲಿ ಹುಟ್ಟಿದವರು ಎಂದು ಹಿಂದೂಗಳು ನೋಡಿಲ್ಲ. ರಾಮಾಯಣ ಬರೆದವರು ಯಾರು ಅಂತ ನೋಡಿಲ್ಲ. ಅರ್ಹತೆ, ಯೋಗ್ಯತೆ ಇದ್ದಲ್ಲಿ ಪೂಜಿಸಿದ್ದೇವೆ. ಅದೇ ನಮ್ಮ ಸಂಸ್ಕೃತಿ, ನಮ್ಮ ನಡುವಳಿಕೆ. ಅದೇ ನಮ್ಮ ಧರ್ಮವಾಗಿದೆ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ ಹೆಗಡೆ ಹೇಳಿದರು.

Vijaya Karnataka 12 Feb 2019, 5:00 am
ಶಿರಸಿ : ಶ್ರೀರಾಮ, ಶ್ರೀಕೃಷ್ಣರನ್ನು ಯಾವ ಜಾತಿಯಲ್ಲಿ ಹುಟ್ಟಿದವರು ಎಂದು ಹಿಂದೂಗಳು ನೋಡಿಲ್ಲ. ರಾಮಾಯಣ ಬರೆದವರು ಯಾರು ಅಂತ ನೋಡಿಲ್ಲ. ಅರ್ಹತೆ, ಯೋಗ್ಯತೆ ಇದ್ದಲ್ಲಿ ಪೂಜಿಸಿದ್ದೇವೆ. ಅದೇ ನಮ್ಮ ಸಂಸ್ಕೃತಿ, ನಮ್ಮ ನಡುವಳಿಕೆ. ಅದೇ ನಮ್ಮ ಧರ್ಮವಾಗಿದೆ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ ಹೆಗಡೆ ಹೇಳಿದರು.
Vijaya Karnataka Web priority is required in hinduism
ಹಿಂದೂ ಧರ್ಮದಲ್ಲಿ ಯೋಗ್ಯತೆಗೆ ಆದ್ಯತೆ


ನಗರ ಹೊರವಲಯದ ಒಕ್ಕ್ಕಲಕೊಪ್ಪ ಗ್ರಾಮದಲ್ಲಿ ನಿರ್ಮಿಸಿದ ನೂತನ ದೇವಾಲಯದಲ್ಲಿ ಶ್ರೀ ಜಗದೀಶ್ವರ ಹಾಗೂ ನಾಗದೇವತಾ ಪ್ರತಿಷ್ಠಾಪನಾ ಮಹೋತ್ಸವದ ಸಭೆಯಲ್ಲಿ ಪಾಲ್ಗೊಂಡು ಅವರು ಸೋಮವಾರ ಮಾತನಾಡಿದರು.

ಹಿಂದೂ ಧರ್ಮ ಎಂದರೆ ಒಗಟಲ್ಲ. ನಡತೆ, ಸಂಸ್ಕೃತಿ ಮೂಲಕ ಧರ್ಮ ಆಚರಣೆ ಮಾಡುವವರೇ ಹಿಂದುಗಳು. ವ. ಪಂಚಮಹಾಭೂತಗಳಲ್ಲಿ ದೇವತೆ ಕಂಡವರು. ಹಿಂದೂ ಧರ್ಮಾನುಯಾಯಿಗಳು ಶಿಲೆಯನ್ನೂ. ಮಣ್ಣನ್ನೂ, ಪ್ರಾಣಿಗಳನ್ನೂ ಪೂಜಿಸುತ್ತಾರೆ ಎಂದರು.

ಸಮಷ್ಟಿಯ ಆಚರಣೆ

ಧರ್ಮವನ್ನು ಕನ್ನಡಕ ಹಾಕಿಕೊಂಡು ನೋಡುವ ಮಹಾನುಭಾವರು ಇದೆಲ್ಲದರ ಹಿನ್ನೆಲೆ ಅರಿಯಬೇಕು. ಜಗತ್ತಿನ ಭೂಪಟದಲ್ಲಿ ಹಿಂದೂ ಧರ್ಮಕ್ಕೆ, ಪರಂಪರೆ ಸಂಸ್ಕೃತಿಗೆ ಅದರದ್ದೇ ಆದ ಮಹತ್ವವಿದೆ. ಪ್ರಪಂಚ ಕಣ್ಣು ಬಿಡುವ ಮೊದಲೇ ಹಿಂದೂ ಧರ್ಮವಿತ್ತು. ಹಿಂದೂ ಧರ್ಮ ಎಂದರೆ ಜೀವನದ ತಿ. ಸಮಷ್ಟಿಯ ಆಚರಣೆಯಾಗಿದೆ. ನಮ್ಮಲ್ಲಿ33 ಕೋಟ ದೇವರುಗಳಿದ್ದಾರೆ. ಇಷ್ಟು ದೇವತೆಗಳು ಇರುವಲ್ಲೂ ಒಂದು ಅಪರೂಪದ ಕಲ್ಪನೆ ಇದೆ. ಹಿಂದೂಗಳು ಪ್ರಕೃತಿ ಹೇಳಿದ್ದನ್ನು ಪೂಜಿಸುತ್ತಾರೆ. ಅಣುವಿನ ಅಣುವಿನಲ್ಲೂ, ಆಕಾಶದಲ್ಲೂ ಭಗವಂತನನ್ನು ನೋಡುತ್ತೇವೆ. ಪಂಚಭೂತದಿಂದ ನಮ್ಮ ಧರ್ಮ ಆಗಿದೆ ಎಂದು ಸಚಿವ ಹೆಗಡೆ ಹೇಳಿದರು.

ದೇಶದ ರಾಜಮನೆತನಗಳು ಹಿಂದೂ ಸಂಸ್ಕೃತಿ ಬೆಳೆಸಿಲ್ಲ. ಮಠ ಮಂದಿರಗಳು ಬೆಳೆಸಿವೆ. ಸಂಸ್ಕೃತ ಲೋಕ ಕೇವಲ ದೇವರ ಪೂಜೆಮಾಡುವ ಮಂತ್ರ ಮಾತ್ರವಲ್ಲ. ಅದರಲ್ಲೂ ಅಗಾಧ ವಿಜ್ಞಾನ, ಧರ್ಮವಿದೆ ಎಂದರು.

ಸಂಘಟೆಗೆ ಮೂಲ...

ವಕ್ತಾರರಾಗಿ ಪಾಲ್ಗೊಂಡ ಸತ್ಯಜಿತ್‌ ಸುರತ್ಕಲ್‌, ಮಠ ಮಂದಿರಗಳು ಧರ್ಮದ ಕೇಂದ್ರಗಳು. ಸಮಾಜದ ಸಂಘಟನೆಗೆ ಇಂಥ ದೇಗುಲಗಳು ಕಾರಣ. ಭಾರತ ಜಗದ್ಗುರುವಾಗಲು ಬೇಕಿದೆ ಇಂಥ ಮಂದಿರಗಳು. ಮಕ್ಕಳಿಗೂ ನೈತಿಕ ಮೌಲ್ಯ ಬಿತ್ತುವ ಕಾರ್ಯ ಆಗಬೇಕು ಎಂದು ಹೇಳಿದರು.

ಕುಮಟಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ, ರಾಷ್ಟ್ರೀಯ ಕಬ್ಬಡ್ಡಿ ಆಟಗಾರ ರಿಷಾಂಕ ಗೌಡ, ಜಿಪಂ ಸದಸ್ಯೆ ಪ್ರಭಾವತಿ ಗೌಡ, ಕರೆಒಕ್ಕಲಿಗರ ಸಂಘದ ಅಧ್ಯಕ್ಷ ನಾರಾಯಣ ಗೌಡ ಪಾಲ್ಗೊಂಡರು. ತಾಪಂ ಉಪಾಧ್ಯಕ್ಷ ಚಂದ್ರು ಎಸಳೆ, ಸ್ಥಳೀಯ ಪ್ರಮುಖರಾದ ಕೃಷ್ಣ ಎಸಳೆ, ಕೆರಿಯಾ ಗೌಡ, ಮಂಜುನಾಥ ಗೌಡ, ಮಹಾಲಕ್ಷ್ಮೀ ಗೌಡ, ಬಸವರಾಜ್‌ ಉಪ್ಪಿನ್‌ ಮತ್ತಿತರರು ಉಪಸ್ಥಿತರಿದ್ದರು.

ಪತ್ನಿಯೊಂದಿಗೆ ಸಚಿವ ಹೆಗಡೆ ಭಾಗಿ

ಒಕ್ಕಲಕೊಪ್ಪ ಗ್ರಾಮಸ್ಥರು ಸಮಾರಂಭದಲ್ಲಿ ಭಕ್ತಿ ಸಡಗರದಿಂದ ಪಾಲ್ಗೊಂಡರು. ನೂತನ ದೇವಸ್ಥಾನದ ಮಾರ್ಗ ಭಗವಾದ್ವಜ ಹಾಗೂ ಪತಾಕೆಗಳಿಂದ ಆಕರ್ಷಿಸಿತು. ಅತಿಥಿಗಳನ್ನು ಡೊಳ್ಳಿನ ಕುಣಿತ, ಪೂರ್ಣಕುಂಭ ಸ್ವಾಗತದ ಮೂಲಕ ಬರಮಾಡಿಕೊಳ್ಳಲಾಯಿತು. ಸ್ವತಃ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಪತ್ನಿ ರೂಪಾ ಸಹಿತವಾಗಿ ನೂತನ ದೇವಾಲಯದ ಪುನಃಪ್ರತಿಷ್ಠಾಪನಾ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ