ಆ್ಯಪ್ನಗರ

ಸಂಚಾರಕ್ಕೆ ತೊಂದರೆ: ಕ್ರಮ ಕೈಗೊಳ್ಳಲು ನಗರಸಭೆಗೆ ಆಗ್ರಹ

ದಾಂಡೇಲಿ : ನಗರದ ರಸ್ತೆಯಲ್ಲಿ ಬೀದಿನಾಯಿ, ಹಂದಿ, ದನಕರುಗಳು ಬೇಷರತ್ತಾಗಿ ಓಡಾಡಿಕೊಂಡಿರುವುದರಿಂದ ಸ್ಥಳೀಯ ಪಾದಚಾರಿಗಳಿಗೆ ಹಾಗೂ ವಾಹನ ಸಂಚಾರಕ್ಕೆ ತುಂಬ ತೊಂದರೆಯಾಗುತ್ತಿದೆ ಎಂದು ನಗರದ ಅಟಲ್‌ ಬಿಹಾರಿ ವಾಜಪೇಯಿ ಅಭಿಮಾನಿ ಸಂಘ ದೂರಿದೆ.

Vijaya Karnataka 10 Jun 2019, 5:00 am
ದಾಂಡೇಲಿ : ನಗರದ ರಸ್ತೆಯಲ್ಲಿ ಬೀದಿನಾಯಿ, ಹಂದಿ, ದನಕರುಗಳು ಬೇಷರತ್ತಾಗಿ ಓಡಾಡಿಕೊಂಡಿರುವುದರಿಂದ ಸ್ಥಳೀಯ ಪಾದಚಾರಿಗಳಿಗೆ ಹಾಗೂ ವಾಹನ ಸಂಚಾರಕ್ಕೆ ತುಂಬ ತೊಂದರೆಯಾಗುತ್ತಿದೆ ಎಂದು ನಗರದ ಅಟಲ್‌ ಬಿಹಾರಿ ವಾಜಪೇಯಿ ಅಭಿಮಾನಿ ಸಂಘ ದೂರಿದೆ.
Vijaya Karnataka Web KWR-9-DND1


ನಗರದ ಮುಖ್ಯ ರಸ್ತೆಯಾದ ಜೆ.ಎನ್‌.ರಸ್ತೆ, ಲಿಂಕ್‌ ರಸ್ತೆಗಳು, ಮರುಕಟ್ಟೆ ಭಾಗದಲ್ಲಿ ಹಂದಿಗಳ ಹಾವಳಿಯಿಂದ ಸ್ಥಳೀಯರು ಹಾಗೂ ವಾಹನ ಸವಾರರು ಬೇಸತ್ತು ಹೋಗಿದ್ದಾರೆ. ಹಂದಿಗಳು ರಸ್ತೆ ಮಧ್ಯೆ ಬರುವುದರಿಂದ ಪ್ರತಿನಿತ್ಯ ರಸ್ತೆ ಅಪಘಾತವಾಗಿ ಆಸ್ಪತ್ರೆ ಸೇರುತ್ತಿದ್ದಾರೆ. ವಾಹನ ಸವಾರರು ವಾಹನ ಚಲಾಯಿಸುವಾಗ ರಸ್ತೆಯ ಮೇಲೆ ಬರುವ ಹಂದಿ, ನಾಯಿ, ದನಗಳಿಂದ ಅಪಘಾತಕ್ಕೀಡಾಗಿ ಗಾಯಗೊಂಡವರಿದ್ದಾರೆ. ಜೀವ ಕಳೆದುಕೊಂಡ ಉದಾಹರಣೆಗಳೂ ಇವೆ. ಪ್ರತಿದಿನ ಆಗುವ ಅನಾಹುತಗಳನ್ನು ಗಮನಿಸುತ್ತಿರುವ ಸ್ಥಳೀಯರು ನಗರಸಭೆಗೆ ಹಾಗೂ ನಗರಸಭೆಯ ಅಧಿಕಾರಿಗಳಿಗೆ ಹಿಡಿಶಾಪ ಹಾಕುವುದನ್ನು ಬಿಟ್ಟರೆ ಮತ್ತೇನೂ ಮಾಡುವ ಹಾಗಿಲ್ಲ.

ನಗರದಲ್ಲಿ ಆಗುತ್ತಿರುವ ಅನಾಹುತಗಳನ್ನು ತಪ್ಪಿಸಲು ಅಧಿಕಾರಿಗಳು ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ. ಈ ಕುರಿತು ಹಲವಾರು ಬಾರಿ ಸ್ಥಳೀಯ ಅಧಿಕಾರಿಗಳ, ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಆದರೆ ಇಲ್ಲಿಯವರೆಗೆ ಯಾರೂ ಸಮಸ್ಯೆಯನ್ನು ಬಗೆಹರಿಸಲು ಮುಂದೆ ಬಂದಿಲ್ಲ ಎಂದು ಸಂಘವು ದೂರಿದೆ.

ನಗರದ ಜನತೆಗೆ ಬಿದಿ ನಾಯಿ, ಹಂದಿಗಳಿಂದ ಆಗುತ್ತಿರುವ ತೊಂದರೆಯನ್ನು ಮುಂದಿನ ಹದಿನೈದು ದಿನಗಳಲ್ಲಿ ಬಗೆಹರಿಸದಿದ್ದರೆ ಸ್ಥಳೀಯ ವಿವಿಧ ಸಂಘ ಸಂಸ್ಥೆಗಳ, ಸಾರ್ವಜನಿಕರ ಸಹಕಾರದೊಂದಿಗೆ ರಸ್ತೆ ತಡೆದು ಪ್ರತಿಭಟನೆ ಮಾಡುವುದಾಗಿ ಅಟಲ್‌ ಬಿಹಾರಿ ವಾಜಪೇಯಿ ಅಭಿಮಾನಿ ಸಂಘದ ಪದಾಧಿಕಾರಿಗಳು ಲಿಖಿತ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ