ಆ್ಯಪ್ನಗರ

ಪ್ರಗತಿ ಪಥದಲ್ಲಿಸಹ್ಯಾದ್ರಿ ಸೇವಾ ಸಹಕಾರಿ ಸಂಘ

ಯಲ್ಲಾಪುರ : ತಾಲೂಕಿನ ಕಳಚೆಯಲ್ಲಿಕೇಂದ್ರ ಕಚೇರಿ ಹೊಂದಿರುವ ಸಹ್ಯಾದ್ರಿ ಸೇವಾ ಸಹಕಾರಿ ಸಂಘವು 55ನೇ ವರ್ಷಕ್ಕೆ ಪದಾರ್ಪಣೆ ಮಾಡಿದೆ. ಸಂಘವು ವರ್ಷದಿಂದ ವರ್ಷಕ್ಕೆ ಅಭಿವೃದ್ಧಿ ಹೊಂದುತ್ತಿದ್ದು, ಸಾಕಷ್ಟು ಸಂಪನ್ಮೂಲವನ್ನು ಹೊಂದಿ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಿದೆ. ಸಂಘಕ್ಕೆ ಈ ಆರ್ಥಿಕ ವರ್ಷದಲ್ಲಿ47,68,190 ರೂ. ನಿವ್ವಳ ಲಾಭವಾಗಿದ್ದು, ಆರ್ಥಿಕ ಬೆಳವಣಿಗೆ ಪ್ರಗತಿದಾಯಕವಾಗಿದೆ ಎಂದು ಸಂಘದ ಅಧ್ಯಕ್ಷ ಉಮೇಶ ಭಾಗ್ವತ್‌ ಹೇಳಿದರು.

Vijaya Karnataka 14 Sep 2019, 5:00 am
ಯಲ್ಲಾಪುರ : ತಾಲೂಕಿನ ಕಳಚೆಯಲ್ಲಿಕೇಂದ್ರ ಕಚೇರಿ ಹೊಂದಿರುವ ಸಹ್ಯಾದ್ರಿ ಸೇವಾ ಸಹಕಾರಿ ಸಂಘವು 55ನೇ ವರ್ಷಕ್ಕೆ ಪದಾರ್ಪಣೆ ಮಾಡಿದೆ. ಸಂಘವು ವರ್ಷದಿಂದ ವರ್ಷಕ್ಕೆ ಅಭಿವೃದ್ಧಿ ಹೊಂದುತ್ತಿದ್ದು, ಸಾಕಷ್ಟು ಸಂಪನ್ಮೂಲವನ್ನು ಹೊಂದಿ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಿದೆ. ಸಂಘಕ್ಕೆ ಈ ಆರ್ಥಿಕ ವರ್ಷದಲ್ಲಿ47,68,190 ರೂ. ನಿವ್ವಳ ಲಾಭವಾಗಿದ್ದು, ಆರ್ಥಿಕ ಬೆಳವಣಿಗೆ ಪ್ರಗತಿದಾಯಕವಾಗಿದೆ ಎಂದು ಸಂಘದ ಅಧ್ಯಕ್ಷ ಉಮೇಶ ಭಾಗ್ವತ್‌ ಹೇಳಿದರು.
Vijaya Karnataka Web progress pathiadishadhari seva co operative society
ಪ್ರಗತಿ ಪಥದಲ್ಲಿಸಹ್ಯಾದ್ರಿ ಸೇವಾ ಸಹಕಾರಿ ಸಂಘ


ಅವರು ಪಟ್ಟಣದಲ್ಲಿಶುಕ್ರವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿ, ಸಂಘವು ಕಳಚೆ, ಹೆಬ್ಬಾರಕುಂಬ್ರಿ ಹಾಗೂ ಯಲ್ಲಾಪುರದಲ್ಲಿಶಾಖೆ ಹೊಂದಿದೆ. ಮುಂದಿನ ದಿನಗಳಲ್ಲಿಪಟ್ಟಣದಲ್ಲಿಸಂಘಕ್ಕೆ ಸ್ವಂತ ಕಟ್ಟಡ ನಿರ್ಮಿಸಲು ಆಲೋಚಿಸಲಾಗಿದೆ. ಗ್ರಾಹಕರು, ರೈತರಿಗೆ ಅನುಕೂಲವಾಗುವ ವಿವಿಧ ವ್ಯವಹಾರಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ. ಸಂಘದಲ್ಲಿಆರಂಭಿಸಿದ ಇ-ಸ್ಟಾಂಪ್‌ ಪೇಪರ್‌ ಮಾರಾಟ ವಿಭಾಗವು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಇ-ಸ್ಟಾಂಪ್‌ ಮಾರಾಟವನ್ನು ಅಡೆ,ತಡೆ ಇಲ್ಲದೇ ಉತ್ತಮವಾಗಿ ಹಾಗೂ ಹೆಚ್ಚು ಮಾರಾಟ ಮಾಡಿದ ನಮ್ಮ ಸಂಘಕ್ಕೆ ರಾಜ್ಯ ಸಹಕಾರಿ ಮಹಾ ಮಂಡಳ ನೀಡುವ ಪ್ರಶಸ್ತಿಯು ದೊರೆತಿದೆ. ಸೆ.19ರಂದು ಬೆಂಗಳೂರಿನಲ್ಲಿನಡೆಯುವ ಮಹಾಮಂಡಳದ ಸಭೆಯಲ್ಲಿಈ ಪ್ರಶಸ್ತಿ ನೀಡಲಾಗುತ್ತಿದೆ ಎಂದರು.

ಸೆ.24ರಂದು ಸಹ್ಯಾದ್ರಿ ಸೇವಾ ಸಹಕಾರಿ ಸಂಘದ ಮಹಾಸಭೆ ನಡೆಯಲಿದೆ. ಸಂಘದ ಈ ಬೆಳವಣಿಗೆಗೆ ಗ್ರಾಹಕರು, ಸದಸ್ಯರು, ಸಿಬ್ಬಂದಿ ಹಾಗೂ ನಿರ್ದೇಶಕ ಮಂಡಳಿಯವರ ಸಹಕಾರ ಕಾರಣ ಎಂದರು.

ಉಪಾಧ್ಯಕ್ಷ ಜಿ.ಸಿ.ಭಟ್ಟ, ನಿರ್ದೇಶಕರಾದ ರಾಮಚಂದ್ರ ಭಟ್ಟ, ರಾಮಕೃಷ್ಣ ಹೆಗಡೆ, ಜನಾರ್ದನ ಹೆಬ್ಬಾರ್‌, ಸೀತಾ ಹೆಗಡೆ, ಮುಖ್ಯ ಕಾರ್ಯ ನಿರ್ವಾಹಕ ಡಿ.ಎಂ.ಹೆಗಡೆ ಮುಂತಾದವರು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ