ಅರ್ಥಧಾರಿಗಳಿಗೆ ಪ್ರಸಂಗಪದಗಳ ಉತ್ತೇಜನ
ಹೊನ್ನಾವರ: ಕರ್ನಾಟಕ ಕ್ರಾಂತಿರಂಗ ಘಟಕ ಮತ್ತು ಹಳದೀಪುರ ಯಕ್ಷರಂಗ ಮಾಸ ಪತ್ರಿಕೆ ಜಂಟಿ ಆಶ್ರಯದಲ್ಲಿಪಟ್ಟಣದ ಫಾರೆಸ್ಟ್ ಕಾಲೊನಿಯ ಕರ್ನಾಟಕ ಕ್ರಾಂತಿರಂಗದ ಕಾರ್ಯಾಲಯದಲ್ಲಿಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ರುಕ್ಮಾಂಗದ ಮೋಹಿನಿ ಇಪ್ಪತ್ತನೆಯ ತಾಳಮದ್ದಳೆ ಕಾರ್ಯಕ್ರಮ ನಡೆಯಿತು.
Vijaya Karnataka 18 Feb 2020, 5:00 am
ಹೊನ್ನಾವರ: ಕರ್ನಾಟಕ ಕ್ರಾಂತಿರಂಗ ಘಟಕ ಮತ್ತು ಹಳದೀಪುರ ಯಕ್ಷರಂಗ ಮಾಸ ಪತ್ರಿಕೆ ಜಂಟಿ ಆಶ್ರಯದಲ್ಲಿಪಟ್ಟಣದ ಫಾರೆಸ್ಟ್ ಕಾಲೊನಿಯ ಕರ್ನಾಟಕ ಕ್ರಾಂತಿರಂಗದ ಕಾರ್ಯಾಲಯದಲ್ಲಿಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ರುಕ್ಮಾಂಗದ ಮೋಹಿನಿ ಇಪ್ಪತ್ತನೆಯ ತಾಳಮದ್ದಳೆ ಕಾರ್ಯಕ್ರಮ ನಡೆಯಿತು.
ಭಾಗವತರಾದ ಇಡಗುಂಜಿ ಗಣೇಶ ಯಾಜಿ, ಮತ್ತು ಮೇಲಿನಗಂಟಿಗೆ ಸುಬ್ರಹ್ಮಣ್ಯ ಭಟ್ ಸುಶ್ರಾವ್ಯವಾಗಿ ಪ್ರಸಂಗದ ಪದಗಳನ್ನು ಹಾಡಿ ಅರ್ಥಧಾರಿಗಳಿಗೆ ಉತ್ತೇಜನ ನೀಡಿದರು.
ಕಡತೋಕಾದ ಶ್ರೀಪಾದ ಭಟ್ಟ ಮತ್ತು ಬೆಂಗಳೂರಿನ ಗುರುಮೂರ್ತಿ ಭಟ್ಟ, ಇವರ ಶೃತಿ, ಲಯ ಮತ್ತು ನಾದಬದ್ಧವಾದ ಮದ್ದಳೆಗಾರಿಕೆ ನಾದ ಬಿಂದು ಕಲೆಗಳಿಂದಲೇ ಹೊಸ ಹೊಸ ಹುಟ್ಟುಗಳು ಸಾಧ್ಯವಾಗುತ್ತವೆ ಎಂಬುದನ್ನು ನೆರೆದ ಪ್ರೇಕ್ಷಕ ಮಹನೀಯರಿಗೆ ಮನವರಿಕೆ ಮಾಡಿಕೊಡುತ್ತಿದ್ದವು.
ಮೋಹಿನಿಯ ಪ್ರವೇಶದಿಂದ ಪ್ರಸಂಗ ಪ್ರಾರಂಭವಾಯಿತು. ರುಕ್ಮಾಂಗದನ ನಿಷ್ಠೆಯನ್ನು ಪರೀಕ್ಷಿಸಲು ಬ್ರಹ್ಮನಿಂದ ಸೃಷ್ಟಿಯಾಗಿ ಬಂದ ಮೋಹಿನಿಯ ಹುಟ್ಟಿನ ಉದ್ದೇಶ ಮತ್ತು ಕರ್ತವ್ಯ ಮರೆಸುವ ಭೂಮಿಯಲ್ಲಿಯ ವ್ಯವಸ್ಥೆಯನ್ನು ಮೋಹಿನಿಯಾಗಿ ಡಾ. ಎಸ್.ಡಿ.ಹೆಗಡೆ ತಿಳಿಸಿದರು. ರುಕ್ಮಾಂಗದನ ಪಾತ್ರಧಾರಿ ರಂಗಯ್ಯ ಹೆಬ್ಬಾರ ಇವರು ಏಕಾದಶಿ ವ್ರತದ ಆಚರಣೆಯ ಆದಿಭೌತಿಕ, ಆಧ್ಯಾತ್ಮಿಕ ಮತ್ತು ಆದಿದೈವಿಕಗಳ ಮಹತ್ವ ತಿಳಿಸಿದರು. ಮೋಹಿನಿ ಮತ್ತು ರುಕ್ಮಾಂಗದರ ನಡುವೆ ನಡೆದ ಸಂವಾದದಲ್ಲಿಭಗೀರಥ, ಮಾಂಧಾತ, ಸಗರ ಮುಂತಾದ ಪುರಾಣ ಪುರುಷರ ವಿಚಾರಗಳು ಮನೋಜ್ಞವಾಗಿ ಮೂಡಿಬಂದವು.
ವಿಶೇಷತೆ, ಮನೋಜ್ಞ ವಿವರಣೆ
ವ್ರತಾಚರಣೆಗಿಂತಲೂ ನುಡಿದಂತೆ ನಡೆಯುವುದು ಅತಿ ಅಗತ್ಯ ಎಂಬುದನ್ನು ಪ್ರೇಕ್ಷಕರಿಗೆ ಮನದಟ್ಟಾಗುವಂತೆ ವಿಶ್ಲೇಷಿಸಿ, ಮಗನ ಶಿರ ಕತ್ತರಿಸಲು ಸಿದ್ಧನಾದ ರುಕ್ಮಾಂಗದನ ಸಂದಿಗ್ಧ ಪರಿಸ್ಥಿತಿಯ ಆವರಣ ಸಹಜವಾಗಿ ನಿರ್ಮಾಣವಾದ ಬಗೆ ವಿಶೇಷತೆಯಿಂದ ಕೂಡಿತ್ತು. ಸಂಧ್ಯಾವಳಿಯ ಗಾಣಗೇರಿ ಪಾತ್ರಧಾರಿ ಜನಾರ್ದನ ಶೆಟ್ಟಿ ಇವರು ಪತಿವ್ರತಾ ಧರ್ಮದ ಮಹತ್ವ, ದಾಂಪತ್ಯ ಜೀವನದ ಹೊಂದಾಣಿಕೆ ಮತ್ತು ಸಾಮರಸ್ಯವಿಲ್ಲದ ದಾಂಪತ್ಯದಲ್ಲಿಉಂಟಾಗಬಹುದಾದ ಅನಾಹುತ ದುರಂತಗಳನ್ನು ಮನೋಜ್ಞವಾಗಿ ತಿಳಿಸಿದರು.
ಧರ್ಮಾಂಗದನ ಅರ್ಥಧಾರಿ ಗಣೇಶ ಹೆಗಡೆ ಪ್ರಾಣಕ್ಕಿಂತ ಮಾನ ಮುಖ್ಯವಾದದ್ದು. ಅದರಲ್ಲೂವಚನ ಪಾಲನೆ ಅತಿಮುಖ್ಯ ಎಂದರಲ್ಲದೆ ವಚನ ಭ್ರಷ್ಟರ ಸುತನಾಗಿ ಬದುಕಿರುವುದು ಸರಿಯಲ್ಲಎಂಬುದನ್ನು ಸಮರ್ಥವಾಗಿ ವಿವರಿಸಿದರು.
ಪರಮಾತ್ಮ ಅಂದರೆ ವಿಷ್ಣುವಿನ ಅರ್ಥಧಾರಿ ಶ್ರೀಪಾದ ಭಟ್ಟ ಹಡಿನಬಾಳ ಮೂರು ವಿಧದ ಮನುಷ್ಯರ ರೀತಿಗಳನ್ನು ತಿಳಿಸಿ ನುಡಿದಂತೆ ನಡೆದ ರುಕ್ಮಾಂಗದನ ಸಾಹಸ ಮತ್ತು ನಿಷ್ಠೆಯನ್ನು ಯಥೋಚಿತವಾಗಿ ತಿಳಿಸಿದರು. ಇಷ್ಟಕ್ಕೆಲ್ಲಕಾರಣಳಾದ ಮೋಹಿನಿ ಭೂಮಿಗೆ ಬಂದ ಉದ್ದೇಶವನ್ನು ಹೇಳಿ, ಈ ಕಾರ್ತೀಕ ಶುದ್ಧ ಏಕಾದಶಿ ಮೋಹಿನಿ ಏಕಾದಶಿ ಎಂದು ಪ್ರಸಿದ್ಧವಾಗಲಿ ಎಂದು ಹರಸಿದಲ್ಲಿಗೆ ಪ್ರಸಂಗ ಮುಕ್ತಾಯವಾಯಿತು.
ಸನ್ಮಾನ
ಈ ಸಂದರ್ಭದಲ್ಲಿಯಕ್ಷಗಾನ ಕಲೆಯ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸುತ್ತಿರುವ ಕೃಷಿಕ ಮಾರುಕೇರಿಯ ರಂಗಯ್ಯ ಹೆಬ್ಬಾರ ಮತ್ತು ಮಡದಿ ಸರಸ್ವತಿ ಹೆಬ್ಬಾರ ಇವರನ್ನು ಸನ್ಮಾನಿಸಲಾಯಿತು. ರಾಮಚಂದ್ರ ಭಟ್ಟ, ಮುರ್ಡೇಶ್ವರ ಡಾ.ಐ.ಅರ್.ಭಟ್ಟ, ಕೆರೆಕೋಣದ ಗಪ್ಪು ಭಟ್, ಎಸ್.ಎಮ್.ಭಟ್ಟ, ಪ್ರೊ.ಎಸ್.ಎನ್.ಹೆಗಡೆ ಮತ್ತು ಎನ್.ಎಸ್.ಹೆಗಡೆ ಪಾಲ್ಗೊಂಡಿದ್ದರು.
ಗಣೇಶ ಎನ್.ಹೆಗಡೆ, ಸನ್ಮಾನ ಪತ್ರ ವಾಚಿಸಿದರು. ಡಾ. ಎಸ್.ಡಿ.ಹೆಗಡೆ, ಡಾ.ಐ.ಆರ್.ಭಟ್ಟ, ಸುಬ್ರಹ್ಮಣ್ಯ ಭಟ್ಟ ಅಭಿನಂದನೆ ಸಲ್ಲಿಸಿದರು. ಗಣೇಶ ಹೆಗಡೆ ಸ್ವಾಗತಿಸಿದರು. ಡಾ. ಎಸ್.ಡಿ.ಹೆಗಡೆ ವಂದಿಸಿದರು.
ಶ್ರದ್ಧ್ದಾಂಜಲಿ
ವಿಡಂಬಾರಿ ಕಾವ್ಯನಾಮದ ಪ್ರಸಿದ್ಧ ಚುಟುಕು ಸಾಹಿತಿ ವಿ..ಗ. ಭಂಡಾರಿಯವರಿಗೆ ಮತ್ತು ಭಟ್ಕಳದ ಲಯನ್ ಮಂಜುನಾಥ ದೇವಾಡಿಗ ಇವರಿಗೆ ಒಂದು ನಿಮಿಷ ಮೌನಾಚರಣೆ ನಡೆಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಭಾಗವತರಾದ ಇಡಗುಂಜಿ ಗಣೇಶ ಯಾಜಿ, ಮತ್ತು ಮೇಲಿನಗಂಟಿಗೆ ಸುಬ್ರಹ್ಮಣ್ಯ ಭಟ್ ಸುಶ್ರಾವ್ಯವಾಗಿ ಪ್ರಸಂಗದ ಪದಗಳನ್ನು ಹಾಡಿ ಅರ್ಥಧಾರಿಗಳಿಗೆ ಉತ್ತೇಜನ ನೀಡಿದರು.
ಕಡತೋಕಾದ ಶ್ರೀಪಾದ ಭಟ್ಟ ಮತ್ತು ಬೆಂಗಳೂರಿನ ಗುರುಮೂರ್ತಿ ಭಟ್ಟ, ಇವರ ಶೃತಿ, ಲಯ ಮತ್ತು ನಾದಬದ್ಧವಾದ ಮದ್ದಳೆಗಾರಿಕೆ ನಾದ ಬಿಂದು ಕಲೆಗಳಿಂದಲೇ ಹೊಸ ಹೊಸ ಹುಟ್ಟುಗಳು ಸಾಧ್ಯವಾಗುತ್ತವೆ ಎಂಬುದನ್ನು ನೆರೆದ ಪ್ರೇಕ್ಷಕ ಮಹನೀಯರಿಗೆ ಮನವರಿಕೆ ಮಾಡಿಕೊಡುತ್ತಿದ್ದವು.
ಮೋಹಿನಿಯ ಪ್ರವೇಶದಿಂದ ಪ್ರಸಂಗ ಪ್ರಾರಂಭವಾಯಿತು. ರುಕ್ಮಾಂಗದನ ನಿಷ್ಠೆಯನ್ನು ಪರೀಕ್ಷಿಸಲು ಬ್ರಹ್ಮನಿಂದ ಸೃಷ್ಟಿಯಾಗಿ ಬಂದ ಮೋಹಿನಿಯ ಹುಟ್ಟಿನ ಉದ್ದೇಶ ಮತ್ತು ಕರ್ತವ್ಯ ಮರೆಸುವ ಭೂಮಿಯಲ್ಲಿಯ ವ್ಯವಸ್ಥೆಯನ್ನು ಮೋಹಿನಿಯಾಗಿ ಡಾ. ಎಸ್.ಡಿ.ಹೆಗಡೆ ತಿಳಿಸಿದರು. ರುಕ್ಮಾಂಗದನ ಪಾತ್ರಧಾರಿ ರಂಗಯ್ಯ ಹೆಬ್ಬಾರ ಇವರು ಏಕಾದಶಿ ವ್ರತದ ಆಚರಣೆಯ ಆದಿಭೌತಿಕ, ಆಧ್ಯಾತ್ಮಿಕ ಮತ್ತು ಆದಿದೈವಿಕಗಳ ಮಹತ್ವ ತಿಳಿಸಿದರು. ಮೋಹಿನಿ ಮತ್ತು ರುಕ್ಮಾಂಗದರ ನಡುವೆ ನಡೆದ ಸಂವಾದದಲ್ಲಿಭಗೀರಥ, ಮಾಂಧಾತ, ಸಗರ ಮುಂತಾದ ಪುರಾಣ ಪುರುಷರ ವಿಚಾರಗಳು ಮನೋಜ್ಞವಾಗಿ ಮೂಡಿಬಂದವು.
ವಿಶೇಷತೆ, ಮನೋಜ್ಞ ವಿವರಣೆ
ವ್ರತಾಚರಣೆಗಿಂತಲೂ ನುಡಿದಂತೆ ನಡೆಯುವುದು ಅತಿ ಅಗತ್ಯ ಎಂಬುದನ್ನು ಪ್ರೇಕ್ಷಕರಿಗೆ ಮನದಟ್ಟಾಗುವಂತೆ ವಿಶ್ಲೇಷಿಸಿ, ಮಗನ ಶಿರ ಕತ್ತರಿಸಲು ಸಿದ್ಧನಾದ ರುಕ್ಮಾಂಗದನ ಸಂದಿಗ್ಧ ಪರಿಸ್ಥಿತಿಯ ಆವರಣ ಸಹಜವಾಗಿ ನಿರ್ಮಾಣವಾದ ಬಗೆ ವಿಶೇಷತೆಯಿಂದ ಕೂಡಿತ್ತು. ಸಂಧ್ಯಾವಳಿಯ ಗಾಣಗೇರಿ ಪಾತ್ರಧಾರಿ ಜನಾರ್ದನ ಶೆಟ್ಟಿ ಇವರು ಪತಿವ್ರತಾ ಧರ್ಮದ ಮಹತ್ವ, ದಾಂಪತ್ಯ ಜೀವನದ ಹೊಂದಾಣಿಕೆ ಮತ್ತು ಸಾಮರಸ್ಯವಿಲ್ಲದ ದಾಂಪತ್ಯದಲ್ಲಿಉಂಟಾಗಬಹುದಾದ ಅನಾಹುತ ದುರಂತಗಳನ್ನು ಮನೋಜ್ಞವಾಗಿ ತಿಳಿಸಿದರು.
ಧರ್ಮಾಂಗದನ ಅರ್ಥಧಾರಿ ಗಣೇಶ ಹೆಗಡೆ ಪ್ರಾಣಕ್ಕಿಂತ ಮಾನ ಮುಖ್ಯವಾದದ್ದು. ಅದರಲ್ಲೂವಚನ ಪಾಲನೆ ಅತಿಮುಖ್ಯ ಎಂದರಲ್ಲದೆ ವಚನ ಭ್ರಷ್ಟರ ಸುತನಾಗಿ ಬದುಕಿರುವುದು ಸರಿಯಲ್ಲಎಂಬುದನ್ನು ಸಮರ್ಥವಾಗಿ ವಿವರಿಸಿದರು.
ಪರಮಾತ್ಮ ಅಂದರೆ ವಿಷ್ಣುವಿನ ಅರ್ಥಧಾರಿ ಶ್ರೀಪಾದ ಭಟ್ಟ ಹಡಿನಬಾಳ ಮೂರು ವಿಧದ ಮನುಷ್ಯರ ರೀತಿಗಳನ್ನು ತಿಳಿಸಿ ನುಡಿದಂತೆ ನಡೆದ ರುಕ್ಮಾಂಗದನ ಸಾಹಸ ಮತ್ತು ನಿಷ್ಠೆಯನ್ನು ಯಥೋಚಿತವಾಗಿ ತಿಳಿಸಿದರು. ಇಷ್ಟಕ್ಕೆಲ್ಲಕಾರಣಳಾದ ಮೋಹಿನಿ ಭೂಮಿಗೆ ಬಂದ ಉದ್ದೇಶವನ್ನು ಹೇಳಿ, ಈ ಕಾರ್ತೀಕ ಶುದ್ಧ ಏಕಾದಶಿ ಮೋಹಿನಿ ಏಕಾದಶಿ ಎಂದು ಪ್ರಸಿದ್ಧವಾಗಲಿ ಎಂದು ಹರಸಿದಲ್ಲಿಗೆ ಪ್ರಸಂಗ ಮುಕ್ತಾಯವಾಯಿತು.
ಸನ್ಮಾನ
ಈ ಸಂದರ್ಭದಲ್ಲಿಯಕ್ಷಗಾನ ಕಲೆಯ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸುತ್ತಿರುವ ಕೃಷಿಕ ಮಾರುಕೇರಿಯ ರಂಗಯ್ಯ ಹೆಬ್ಬಾರ ಮತ್ತು ಮಡದಿ ಸರಸ್ವತಿ ಹೆಬ್ಬಾರ ಇವರನ್ನು ಸನ್ಮಾನಿಸಲಾಯಿತು. ರಾಮಚಂದ್ರ ಭಟ್ಟ, ಮುರ್ಡೇಶ್ವರ ಡಾ.ಐ.ಅರ್.ಭಟ್ಟ, ಕೆರೆಕೋಣದ ಗಪ್ಪು ಭಟ್, ಎಸ್.ಎಮ್.ಭಟ್ಟ, ಪ್ರೊ.ಎಸ್.ಎನ್.ಹೆಗಡೆ ಮತ್ತು ಎನ್.ಎಸ್.ಹೆಗಡೆ ಪಾಲ್ಗೊಂಡಿದ್ದರು.
ಗಣೇಶ ಎನ್.ಹೆಗಡೆ, ಸನ್ಮಾನ ಪತ್ರ ವಾಚಿಸಿದರು. ಡಾ. ಎಸ್.ಡಿ.ಹೆಗಡೆ, ಡಾ.ಐ.ಆರ್.ಭಟ್ಟ, ಸುಬ್ರಹ್ಮಣ್ಯ ಭಟ್ಟ ಅಭಿನಂದನೆ ಸಲ್ಲಿಸಿದರು. ಗಣೇಶ ಹೆಗಡೆ ಸ್ವಾಗತಿಸಿದರು. ಡಾ. ಎಸ್.ಡಿ.ಹೆಗಡೆ ವಂದಿಸಿದರು.
ಶ್ರದ್ಧ್ದಾಂಜಲಿ
ವಿಡಂಬಾರಿ ಕಾವ್ಯನಾಮದ ಪ್ರಸಿದ್ಧ ಚುಟುಕು ಸಾಹಿತಿ ವಿ..ಗ. ಭಂಡಾರಿಯವರಿಗೆ ಮತ್ತು ಭಟ್ಕಳದ ಲಯನ್ ಮಂಜುನಾಥ ದೇವಾಡಿಗ ಇವರಿಗೆ ಒಂದು ನಿಮಿಷ ಮೌನಾಚರಣೆ ನಡೆಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು.