ಆ್ಯಪ್ನಗರ

ಪೌರತ್ವ ವಿರುದ್ಧ ಪ್ರತಿಭಟನೆ

ಭಟ್ಕಳ : ಕೇಂದ್ರ ಸರಕಾರ ಜಾರಿಗೆ ತಂದಿರುವ ಪೌರತ್ವ ಕಾಯ್ದೆ ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿ ಸೋಮವಾರ ಮಜ್ಲಿಸೇ ಇಸ್ಲಾವ ತಂಜೀಮ್‌ ನೇತೃತ್ವದಲ್ಲಿಭಟ್ಕಳದಲ್ಲಿಬೃಹತ್‌ ಪ್ರತಿಭಟನೆ ನಡೆಯಿತು.

Vijaya Karnataka 24 Dec 2019, 5:00 am
ಭಟ್ಕಳ : ಕೇಂದ್ರ ಸರಕಾರ ಜಾರಿಗೆ ತಂದಿರುವ ಪೌರತ್ವ ಕಾಯ್ದೆ ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿ ಸೋಮವಾರ ಮಜ್ಲಿಸೇ ಇಸ್ಲಾವ ತಂಜೀಮ್‌ ನೇತೃತ್ವದಲ್ಲಿಭಟ್ಕಳದಲ್ಲಿಬೃಹತ್‌ ಪ್ರತಿಭಟನೆ ನಡೆಯಿತು.
Vijaya Karnataka Web 23BKL 1_24
ಭಟ್ಕಳದಲ್ಲಿಪೌರತ್ವ ಕಾಯ್ದೆಯ ವಿರುದ್ಧ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಯಿತು.


ಇಲ್ಲಿಯ ಹಳೆಯ ಕುಬೇರ ಹೊಟೆಲ್‌ ಹಿಂಬದಿಯ ಆವರಣದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯು ಅಂಜುಮನ್‌ ಹೈಸ್ಕೂಲ್‌ ಮೈದಾನದಲ್ಲಿಅಂತ್ಯವಾಯಿತು. ಮೆರವಣಿಗೆಯುದ್ದಕ್ಕೂ ಪ್ರತಿಭಟನಾಕಾರರು ಪೌರತ್ವ ಕಾಯ್ದೆ ಹಾಗೂ ಎನ್‌ಆರ್‌ಸಿ ವಿರುದ್ಧ ಘೋಷಣೆ ಕೂಗಿದರು. ರಾಷ್ಟ್ರ ಧ್ವಜದೊಂದಿಗೆ ಸಂವಿಧಾನ ಶಿಲ್ಪಿ ಬಿ.ಆರ್‌.ಅಂಬೇಡ್ಕರ್‌ ಭಾವಚಿತ್ರವನ್ನು ಪ್ರದರ್ಶಿಸಲಾಯಿತು. ಅಲ್ಪಸಂಖ್ಯಾತ ಮುಸ್ಲೀಮ್‌ ಯುವಕರು ಹೆಚ್ಚಿನ ಸಂಖ್ಯೆಯಲ್ಲಿಪ್ರತಿಭಟನೆಯಲ್ಲಿಪಾಲ್ಗೊಂಡಿದ್ದರು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಲೇಖಕ ಶಿವಸುಂದರ್‌, ಧರ್ಮದ ಆಧಾರದ ಮೇಲೆ ಯಾವುದೇ ಕಾಯ್ದೆಯನ್ನು ರೂಪಿಸುವುದನ್ನು ಒಪ್ಪುವುದಿಲ್ಲ. ಕೇಂದ್ರ ಗೃಹ ಸಚಿವರು ದೇಶಕ್ಕೆ ಬೆಂಕಿ ಹಾಕುವ ಕೆಲಸವನ್ನು ಮಾಡುತ್ತಿದ್ದಾರೆ ಎಂದರು. ಸಿಪಿಐ (ಎಮ್‌)ನ ಡಾ.ಪ್ರಕಾಶ, ಧರ್ಮದ ಆಧಾರದಲ್ಲಿದೇಶ ವಿಭಜನೆ ಕಲ್ಪನೆಯನ್ನು ಬಿತ್ತಿದ್ದೇ ಸಾವರ್ಕರ್‌, ಸಂಘಪರಿವಾರದವರು. ಬ್ರೀಟಿಷರ ಏಜೆಂಟರುಗಳಾಗಿ ಈ ಕೆಲಸ ಮಾಡುತ್ತಿದ್ದರು ಎಂದು ಹೇಳಿದರು. ಯಮುನಾ ಗಾಂವಕರ್‌, ಸಂಘಪರಿವಾರದವರಿಗೆ ಬಹುತ್ವ ಭಾರತ ಬೇಡವಾಗಿದೆ ಎಂದು ಟೀಕಿಸಿದರು. ಭಟ್ಕಳ ತಂಜೀಮ್‌ ಅಧ್ಯಕ್ಷ ಎಸ್‌.ಎಮ್‌.ಫರ್ವೇಜ್‌, ಹಿರಿಯ ನ್ಯಾಯವಾದಿ ಮುಝಾಮಿಲ್‌ ಖಾಜಿಯಾ, ಪೌರತ್ವ ಕಾಯ್ದೆ ವಿರೋಧಿ ಹೋರಾಟದ ಸಂಚಾಲಕ ಇನಾಯಿತುಲ್ಲಾಶಾಬಂದ್ರಿ, ಭಟ್ಕಳ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸಂತೋಷ್‌, ಭಟ್ಕಳ ನಿಚ್ಚಲಮಕ್ಕಿ ಶ್ರೀ ವೆಂಕಟ್ರಮಣ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಎಮ್‌.ಆರ್‌.ನಾಯ್ಕ, ಮೌಲಾನಾ ಇಕ್ಬಾಲ್‌, ಅಬ್ದರ್ರಕೀಬ್‌ ಎಮ್‌.ಜೆ. ಮೊದಲಾದವರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು. ಮೌಲಾನಾ ಖಾಜಿ ಇಕ್ಬಾಲ್‌, ಸಿದ್ದಿಕ್‌ ಇಸ್ಮೆತ್ರೖಲ್‌ ವೇದಿಕೆಯಲ್ಲಿಉಪಸ್ಥಿತರಿದ್ದರು.

ಭಟ್ಕಳ ಸಹಾಯಕ ಆಯುಕ್ತ ಸಾಜೀದ್‌ ಮುಲ್ಲಾಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದರು. ಹನೀಫ್‌ ಶಬಾಬ್‌ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾಪೊಲೀಸ್‌ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ಹೆಚ್ಚುವರಿ ಜಿಲ್ಲಾಪೊಲೀಸ್‌ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ್‌, ಎಎಸ್‌ಪಿ ನಿಖಿಲ್‌ ಬಿ. ಮಾರ್ಗದರ್ಶನದಲ್ಲಿಪೊಲೀಸ್‌ ಬಂದೋಬಸ್‌್ತ ಏರ್ಪಡಿಸಲಾಗಿತ್ತು.

ಜನ ಸಂಚಾರ ವಿರಳ
ಪ್ರತಿಭಟನೆಯ ಹಿನ್ನೆಲೆಯಲ್ಲಿ ಪಟ್ಟಣ ವ್ಯಾಪ್ತಿಯಲ್ಲಿಜನ ಸಂಚಾರ ವಿರಳವಾಗಿತ್ತು. ಗ್ರಾಮೀಣ ಭಾಗದ ಜನರು ಪೇಟೆಗೆ ಬರಲು ಹಿಂದೇಟು ಹಾಕಿರುವುದು ಕಂಡು ಬಂತು. ಶಹರ ವ್ಯಾಪ್ತಿಯಲ್ಲಿಹೆಚ್ಚಿನ ಅಂಗಡಿಗಳ ಬಾಗಿಲು ಮುಚ್ಚಿದ್ದವು. ಅಂಜುಮನ್‌, ಶಮ್ಸ್‌, ಅಲಿಪಬ್ಲಿಕ್‌, ನೌನಿಹಾಲ್‌, ಮಾದರ್‌ ಹವ್ವಾ ಸೇರಿದಂತೆ ಅಲ್ಪಸಂಖ್ಯಾತ ಮುಸ್ಲೀವå ಸಮುದಾಯದ ಆಡಳಿತವನ್ನು ಹೊಂದಿರುವ ಎಲ್ಲಶಿಕ್ಷಣ ಸಂಸ್ಥೆಗಳ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ರಜೆ ಘೋಷಿಸಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ