ಆ್ಯಪ್ನಗರ

ದೇವಿಯ ಸನ್ನಿಧಾನದಲ್ಲಿ ಕೀರ್ತನೆ, ಭಜನೆ

ಶಿರಸಿ : ನಗರದ ಮಾರಿಕಾಂಬಾ ದೇವಸ್ಥಾನದಲ್ಲಿ ನಡೆಯುತ್ತಿರುವ ಶ್ರಾವಣ ಸಂಭ್ರಮ ಸಾಂಸ್ಕೃತಿಕ ಕಾರ್ಯಕ್ರಮ ಮೆರಗು ಹೆಚ್ಚಿಸಿದೆ. ಶ್ರಾವಣ ಮಾಸದ 6ನೇ ಕಾರ್ಯಕ್ರಮದಲ್ಲಿ ಭಜನೆ, ಸುಗಮ ಸಂಗೀತ ಹಾಗೂ ಕೀರ್ತನೆ ಕಾರ್ಯಕ್ರಮಗಳು ಗಮನಸೆಳೆದವು.

Vijaya Karnataka 15 Aug 2019, 5:00 am
ಶಿರಸಿ : ನಗರದ ಮಾರಿಕಾಂಬಾ ದೇವಸ್ಥಾನದಲ್ಲಿ ನಡೆಯುತ್ತಿರುವ ಶ್ರಾವಣ ಸಂಭ್ರಮ ಸಾಂಸ್ಕೃತಿಕ ಕಾರ್ಯಕ್ರಮ ಮೆರಗು ಹೆಚ್ಚಿಸಿದೆ. ಶ್ರಾವಣ ಮಾಸದ 6ನೇ ಕಾರ್ಯಕ್ರಮದಲ್ಲಿ ಭಜನೆ, ಸುಗಮ ಸಂಗೀತ ಹಾಗೂ ಕೀರ್ತನೆ ಕಾರ್ಯಕ್ರಮಗಳು ಗಮನಸೆಳೆದವು.
Vijaya Karnataka Web SRS-14SRS3A


ಆರಂಭದಲ್ಲಿ ಸ್ಪಂದನಾ ಮಹಿಳಾ ಮಂಡಳಿಯ ಸದಸ್ಯರಿಂದ ಭಜನೆ ನಡೆಯಿತು. ನಂತರ ಅಯ್ಯಪ್ಪನಗರದ ನಾದಸರಸ್ವತಿ ಕಲಾ ಸಂಗೀತ ಮತ್ತು ಸಾಂಸ್ಕೃತಿಕ ಸಂಘದಿಂದ ಸುಗಮ ಸಂಗೀತ ಕಾರ್ಯಕ್ರಮ ಸಾದರಗೊಂಡಿತು. ನಂತರದಲ್ಲಿ ಹರಿಕಥಾ ವಿದೂಷಿ ಸುಮಿತ್ರಾನಂದ ಬೆಂಗಳೂರು ಅವರು ಲಲಿತಾತ್ರಿಪುರ ಸುಂದರಿ ಅವತಾರ ಎಂಬ ಹರಿಕಥೆಯನ್ನು ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಧರ್ಮದರ್ಶಿ ಮಂಡಳಿಯ ಅಧ್ಯಕ್ಷ ವೆಂಕಟೇಶ ನಾಯ್ಕ, ಉಪಾಧ್ಯಕ್ಷ ಮನೋಹರ ಮಲ್ಮನೆ, ಧರ್ಮದರ್ಶಿಗಳಾದ ಲಕ್ಷ ್ಮಣ ಕಾನಡೆ, ಶಾಂತಾರಾಮ ಎನ್‌. ಹೆಗಡೆ ಭಂಡೀಮನೆ, ಶಶಿಕಲಾ ಚಂದ್ರಾಪಟ್ಟಣ ಪಾಲ್ಗೊಂಡು ಕಲಾವಿದರನ್ನು ಗೌರವಿಸಿದರು.

ನಾಳಿನ ಕಾರ್ಯಕ್ರಮ... ಮಾರಿಕಾಂಬಾ ದೇವಸ್ಥಾನದ ಶ್ರಾವಣ ಮಾಸದ ಏಳನೇ ದಿನದ ಕಾರ್ಯಕ್ರಮ ಆಗಸ್ಟ್‌ 16ರಂದು ನಡೆಯಲಿದೆ. ಸಂಜೆ 6ಕ್ಕೆ ಕೊಪ್ಪರಗಿ ಕೆಂಡಮಹಾಸತಿ ಭಕ್ತವೃಂದದಿಂದ ಶಂಕರಸ್ತೋತ್ರ ಮತ್ತು ಭಜನೆ ನಂತರ ಕಾರವಾರದ ಅಶೋಕ ಶೆಟ್ಟಿ ಅವರಿಂದ ಸುಗಮ ಸಂಗೀತ ಹಾಗೂ ದಾವಣಗೇರೆಯ ಮಾಧವಿ ಡಿ.ಕೆ ಅವರಿಂದ ಭರತನಾಟ್ಯ ಪ್ರದರ್ಶನ ಏರ್ಪಡಿಸಲಾಗಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ