ಆ್ಯಪ್ನಗರ

ನಾನಾ ಕಾಮಗಾರಿಗೆ ಗುದ್ದಲಿ ಪೂಜೆ

ಕುಮಟಾ : ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆಡಳಿತ ಕಚೇರಿ ಹಿಂಭಾಗದ ಗುಡ್ಡಕ್ಕೆ ತಡೆಗೋಡೆ, ಸಂಪರ್ಕ ರಸ್ತೆ ಹಾಗೂ ಇತರ ಕಾಮಗಾರಿಗೆ ಶಾಸಕ ದಿನಕರ ಶೆಟ್ಟಿ ಗುದ್ದಲಿ ಪೂಜೆ ನೆರವೇರಿಸಿದರು.

Vijaya Karnataka 13 Nov 2019, 5:00 am
ಕುಮಟಾ : ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆಡಳಿತ ಕಚೇರಿ ಹಿಂಭಾಗದ ಗುಡ್ಡಕ್ಕೆ ತಡೆಗೋಡೆ, ಸಂಪರ್ಕ ರಸ್ತೆ ಹಾಗೂ ಇತರ ಕಾಮಗಾರಿಗೆ ಶಾಸಕ ದಿನಕರ ಶೆಟ್ಟಿ ಗುದ್ದಲಿ ಪೂಜೆ ನೆರವೇರಿಸಿದರು.
Vijaya Karnataka Web pudding worship for nana work
ನಾನಾ ಕಾಮಗಾರಿಗೆ ಗುದ್ದಲಿ ಪೂಜೆ


ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆಡಳಿತ ಕಚೇರಿಯ ಹಿಂಭಾಗದ ನೀರಿನ ಟ್ಯಾಂಕ್‌ ಬಳಿಯ ಗುಡ್ಡ ಪ್ರಕೃತಿ ವಿಕೋಪದಿಂದ ಕುಸಿಯಲಾರಂಭಿಸಿದೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿಗುಡ್ಡ ಕುಸಿದು ಅಪಾಯ ಒಡ್ಡುವ ಸಂಭವ ಇರುವುದರಿಂದ ಸಮಿತಿಯ ನಿಧಿಯ 1 ಕೋಟಿ ರೂ. ಹಣದಲ್ಲಿಯ 50 ಲಕ್ಷ ರೂ.ಗಳನ್ನು ತಡೆಗೋಡೆಯ ನಿರ್ಮಾಣಕ್ಕೆ ಬಳಸಲಾಗುತ್ತಿದೆ. 200 ಮೀ. ತಡೆಗೋಡೆ ನಿರ್ಮಿಸಲು 300 ಲಕ್ಷ ರೂ. ವೆಚ್ಚ ತಗುಲಲಿದೆ. ಆದ್ದರಿಂದ ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಅಥವಾ ಸರಕಾರದ ಇನ್ನಿತರ ಯೋಜನೆಯ ಮೂಲಕ 3 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವಂತೆ ಎಪಿಎಂಸಿ ಅಧ್ಯಕ್ಷ ರಾಮನಾಥ ಶಾನಭಾಗ ಶಾಸಕ ದಿನಕರ ಶೆಟ್ಟಿ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಉಪಾಧ್ಯಕ್ಷ ಆರ್‌.ವಿ. ಹೆಗಡೆ, ಸದಸ್ಯರಾದ ಸುಬ್ಬಯ್ಯ ನಾಯ್ಕ, ಅರವಿಂದ ಪೈ, ರಾಜೇಶ ಬಾಳಗಿ, ಆರ್‌.ಎಚ್‌ ನಾಯ್ಕ, ಶಾಂತರಾಜ ನಾಯ್ಕ, ರಮೇಶ ಪ್ರಸಾದ, ಮಂಜುನಾಥ ಹಳ್ಳೇರ, ಶಿವು ಮುಕ್ರಿ ಮೊದಲಾದವರು ಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ