ಆ್ಯಪ್ನಗರ

ಬಾಲಕಿಯರ ಆಸಕ್ತಿ, ತ್ಯಾಜ್ಯಕ್ಕೆ ಮುಕ್ತಿ

ಯಲ್ಲಾಪುರ : ಪಟ್ಟಣದ ಹೋಲಿ ರೋಜರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಚರಂಡಿ ಸುಗಮಕಾರಕ ಯಂತ್ರ ಹಾಗೂ ಅಡಕೆ ನಾರು ಬಿಡಿಸುವ ಯಂತ್ರವನ್ನು ಸಂಶೋಧಿಸಿ ಜೀವನದ ಸವಾಲುಗಳಿಗೆ ತ್ಯಾಜ್ಯ ನಿರ್ವಹಣೆಯಲ್ಲಿ ವೈಜ್ಞಾನಿಕ ಪರಿಹಾರ ಕಂಡು ಹಿಡಿಯುವ ಮೂಲಕ ಗಮನ ಸೆಳೆದಿದ್ದಾರೆ.

Vijaya Karnataka 20 Jan 2019, 5:00 am
ಯಲ್ಲಾಪುರ : ಪಟ್ಟಣದ ಹೋಲಿ ರೋಜರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಚರಂಡಿ ಸುಗಮಕಾರಕ ಯಂತ್ರ ಹಾಗೂ ಅಡಕೆ ನಾರು ಬಿಡಿಸುವ ಯಂತ್ರವನ್ನು ಸಂಶೋಧಿಸಿ ಜೀವನದ ಸವಾಲುಗಳಿಗೆ ತ್ಯಾಜ್ಯ ನಿರ್ವಹಣೆಯಲ್ಲಿ ವೈಜ್ಞಾನಿಕ ಪರಿಹಾರ ಕಂಡು ಹಿಡಿಯುವ ಮೂಲಕ ಗಮನ ಸೆಳೆದಿದ್ದಾರೆ.
Vijaya Karnataka Web KWR-19 YLP 1


ಹೋಲಿ ರೋಜರಿ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಸೌಂದರ್ಯಾ ದೇಮಣ್ಣ ಮರಾಠಿ ಹಾಗೂ ಸಲೋನಿ ಪೆದ್ರು ವಾಜ್‌ ಅವರು ವಿಜ್ಞಾನ ಶಿಕ್ಷ ಕ ಎಂ.ರಾಜಶೇಖರ ಅವರ ಮಾರ್ಗದರ್ಶನದಲ್ಲಿ ಈ ಯಂತ್ರಗಳನ್ನು ತಯಾರಿಸಿದ್ದು, ಮಳೆಗಾಲದ ಸಮಯದಲ್ಲಿ ಒಡೆದು ಹೋಗುವ ಚರಂಡಿಯ ಬಗೆಗೆ ಕಾಳಜಿ ವಹಿಸುವುದು ಮತ್ತು ಮಲೆನಾಡಿನ ಪ್ರದೇಶದಲ್ಲಿ ಅಧಿಕವಾಗಿ ಲಭ್ಯವಾಗುವ ಅಡಕೆ ಸಿಪ್ಪೆಯು ಯಾವುದೇ ಉಪಯೋಗವಿಲ್ಲದೇ ಹಾಳಾಗುತ್ತಿದ್ದು ಇವುಗಳ ನಿರ್ವಹಣೆ ಈ ಯಂತ್ರಗಳ ತಯಾರಿಕೆಯ ಮೂಲ ಉದ್ದೇಶ.

ಬ್ಯಾಟರಿ ಚಾಲಿತ ಚರಂಡಿ ಸುಗಮಕಾರಕ ಯಂತ್ರ ಪ್ಲಾಸ್ಟಿಕ್‌ ಮತ್ತು ಗ್ಯಾರೇಜ್‌ ತ್ಯಾಜ್ಯವನ್ನು ತೇಲುವ ಸ್ಥಿತಿಯಲ್ಲಿ ಕನ್ವೇಯರ್‌ ಬೆಲ್ಟ್‌ ಸಹಾಯದಿಂದ ಬೇರ್ಪಡಿಸಿ ಅದನ್ನು ನೀರಿನ ಪ್ರವಾಹದಿಂದ ಬೇರ್ಪಡಿಸುತ್ತದೆ. ಅದನ್ನು ರೊಟಿಟರಿ ಯಂತ್ರದಲ್ಲಿ ಹಾಕಿ ತುಂಡು ಮಾಡಲಾಗುತ್ತದೆ. ಈ ತ್ಯಾಜ್ಯವನ್ನು ಪುನರ್ಬಳಕೆ ಮಾಡಲಾಗುತ್ತದೆ. ಪ್ರವಾಹಕ್ಕೆ ಅಡ್ಡಿಯುಂಟು ಮಾಡುವ ಮಣ್ಣನ್ನು ಇನ್ನೊಂದು ಸಾಧನದಿಂದ ಹರಡುವಂತೆ ಮಾಡಲಾಗುತ್ತದೆ.

ಕಸದಿಂದ ರಸ: ಅಡಕೆ ನಾರು ಬಿಡಿಸುವ ಯಂತ್ರದ ಮೂಲಕ ಒಣಗಿದ ಅಡಕೆ ಸಿಪ್ಪೆಯನ್ನು ನಾರುಗಳನ್ನಾಗಿ ಪರಿವರ್ತಿಸಬಹುದು. ಹೀಗೆ ನಾರುಗಳನ್ನಾಗಿ ಪರಿವರ್ತಿಸಿದ ನಂತರ ಅದರಿಂದ ವಿವಿಧ ಅಲಂಕಾರಿಕ ವಸ್ತುಗಳನ್ನು ತಯಾರಿಸಬಹುದೆಂಬ ಅಂಶವನ್ನು ವಿದ್ಯಾರ್ಥಿಗಳು ತೋರಿಸಿದ್ದಾರೆ. ಅಡಕೆ ಸಿಪ್ಪೆಯನ್ನು ಹೆಣೆದು ದಪ್ಪನೆಯ ನಾರು ಮಾಡಿ ಜೋಡಿಸಿ ನೆಲಹಾಸು ಮಾಡಬಹುದು. ಅದಕ್ಕೆ ಸೂಕ್ತ ಸಿಂಥೆಟಿಕ್‌ ಅಂಟಿನೊಂದಿಗೆ ಸೇರಿಸಿ ಯಂತ್ರದ ಮೂಲಕ ಒತ್ತಡ ಹಾಕಿ ಕಾಲುಹಾಸು ತಯಾರಿಸಿದ್ದಾರೆ. ಸಿಪ್ಪೆಯನ್ನು ಒಂದಕ್ಕೊಂದು ಜೋಡಿಸಿ, ಅದನ್ನು ಬಿಗಿಯಾಗಿ ಕಟ್ಟಿ ಪಾತ್ರೆ ತೊಳೆಯುವ ಬ್ರಶ್‌ ತಯಾರಿಸಿದ್ದು, ಇದರಿಂದ ಇನ್ನೂ ಹೆಚ್ಚು ಅಲಂಕಾರಿಕ ವಸ್ತು ತಯಾರಿಸಬಹುದು ಎನ್ನುತ್ತಾರೆ.

ಈ ಮಾದರಿಯ ಸಹಾಯದಿಂದ ಯೋಜನೆಯಂತೆ ತ್ಯಾಜ್ಯವನ್ನು ಅಲಂಕಾರಿಕ ವಸ್ತು ತಯಾರಿಕೆಯಲ್ಲಿ ಬಳಸಬಹುದು. ಸುಮ್ಮನೆ ಮಣ್ಣಾಗಿ ಹೋಗುವ ಬದಲು ಲಾಭದಾಯಕ ಉದ್ಯೋಗವನ್ನು ಸ್ಥಾಪಿಸಬಹುದು. ಮನೆಯಾಚೆ ಎಸೆಯುವ ಸಿಪ್ಪೆಯನ್ನು ಕಾಲು ಒರೆಸುವ ಮ್ಯಾಟ್‌ ಆಗಿ ಬಳಸಬಹುದು ಎಂಬುದನ್ನು ವಿದ್ಯಾರ್ಥಿಗಳು ತೋರಿಸಿಕೊಟ್ಟಿದ್ದಾರೆ. ಈ ಮಾದರಿಯನ್ನು ವಿದ್ಯಾರ್ಥಿಗಳು ಇತ್ತೀಚೆಗೆ ಗುಲ್ಬರ್ಗಾದಲ್ಲಿ ನಡೆದ 26 ನೇ ರಾಜ್ಯ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿಯೂ ಪ್ರದರ್ಶಿಸಿದ್ದು, ಅಲ್ಲಿ ಈ ಯಂತ್ರಗಳು ಜನರ ಗಮನ ಸೆಳೆದಿದ್ದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ