ಆ್ಯಪ್ನಗರ

ಮಗುವಿನ ವರ್ತನೆ ಪರಿವರ್ತನೆಯೇ ಶಿಕ್ಷ ಣ

ಗೋಕರ್ಣ : ಮಗುವಿನ ವರ್ತನೆ ಪರಿವರ್ತನೆಯೇ ಶಿಕ್ಷ ಣ, ವರ್ತನೆ ಮಗುವಿನ ಸಹಜ ಸ್ವಭಾವ. ಅದು ಸರಿಯಾಗಿಯೂ ಇರಬಹುದು ಅಥವಾ ದೋಷಯುಕ್ತವಾಗಿಯೂ ಇರಬಹುದು. ದೋಷಯುಕ್ತವಾಗಿದ್ದರೆ ಪರಿವರ್ತನೆ ಅನಿವಾರ್ಯ. ಪರಿವರ್ತನೆಗೆ ಶಿಕ್ಷ ಕರ ಪ್ರಯತ್ನವೂ ಅಷ್ಟೇ ಅಗತ್ಯ ಎಂದು ಕಠಿಣಕೋಣ ಹೈಸ್ಕೂಲ್‌ ಮುಖ್ಯಾಧ್ಯಾಪಕ ರಾಜೇಂದ್ರ ನಾಯ್ಕ ಹೇಳಿದರು.

Vijaya Karnataka 21 Jan 2019, 5:00 am
ಗೋಕರ್ಣ : ಮಗುವಿನ ವರ್ತನೆ ಪರಿವರ್ತನೆಯೇ ಶಿಕ್ಷ ಣ, ವರ್ತನೆ ಮಗುವಿನ ಸಹಜ ಸ್ವಭಾವ. ಅದು ಸರಿಯಾಗಿಯೂ ಇರಬಹುದು ಅಥವಾ ದೋಷಯುಕ್ತವಾಗಿಯೂ ಇರಬಹುದು. ದೋಷಯುಕ್ತವಾಗಿದ್ದರೆ ಪರಿವರ್ತನೆ ಅನಿವಾರ್ಯ. ಪರಿವರ್ತನೆಗೆ ಶಿಕ್ಷ ಕರ ಪ್ರಯತ್ನವೂ ಅಷ್ಟೇ ಅಗತ್ಯ ಎಂದು ಕಠಿಣಕೋಣ ಹೈಸ್ಕೂಲ್‌ ಮುಖ್ಯಾಧ್ಯಾಪಕ ರಾಜೇಂದ್ರ ನಾಯ್ಕ ಹೇಳಿದರು.
Vijaya Karnataka Web KWR-19 GKN 1 A


ಹಿರೇಗುತ್ತಿಯ ಸೆಕೆಂಡರಿ ಹೈಸ್ಕೂಲ್‌ನಲ್ಲಿ ಕಾರವಾರ ಕ್ಷೇತ್ರ ಶಿಕ್ಷ ಣಾಧಿಕಾರಿಗಳ ತಂಡ ಭೇಟಿ ನೀಡಿದ ಸಂದರ್ಭದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು.

ಶಾಲೆಯ ಪ್ರಗತಿಗೆ ಎಸ್‌ಡಿಎಂಸಿ ಸಹಕಾರ ಅವಶ್ಯ ಎಂದು ಹೇಳಿ ಮುಖ್ಯ ಶಿಕ್ಷ ಕರ ಆಡಳಿತ ವೈಖರಿ ಶಿಕ್ಷ ಕರ ಕರ್ತವ್ಯಪರತೆಯನ್ನು ಪ್ರಶಂಸಿಸಿದರು.

ಅಸ್ನೋಟಿಯ ಶಿವಾಜಿ ವಿದ್ಯಾಮಂದಿರದ ಮುಖ್ಯಾಧ್ಯಾಪಕ ದಿನೇಶ.ವಿ.ಗಾಂವಕರ, ದೇವಳಮಕ್ಕಿ ಆದರ್ಶ ವಿದ್ಯಾಲಯದ ಮುಖ್ಯಾಧ್ಯಾಪಕ ಶೈಲೇಶರಾಣೆ, ಕಡವಾಡದ ಜನತಾ ವಿದ್ಯಾಲಯದ ಮುಖ್ಯಾಧ್ಯಾಪಕ ಸುಬ್ರಹ್ಮಣ್ಯ ಶೇರೆಗಾರ, ಅಂಗಡಿಯ ಸೆಕೆಂಡರಿ ಇಂಗ್ಲೀಷ್‌ ಸ್ಕೂಲಿನ ಉಮೇಶ.ಸಿ.ದೊಡ್ಡಮನಿ ಸಂದರ್ಶನ ತಂಡದಲ್ಲಿದ್ದರು.

ಶಿಕ್ಷ ಕರ ಪಾಠ ವೀಕ್ಷ ಣೆ, ಪರಿಹಾರ ಬೋಧನೆ, ಕ್ರಿಯಾ ಯೋಜನೆ, ದತ್ತಕ ಯೋಜನೆ ಮುಂತಾದ ದಾಖಲೆಗಳನ್ನು ಪರಿಶೀಲಿಸಿ ಸಲಹೆ ಸೂಚನೆ ನೀಡಿ 2019 ಶೈಕ್ಷ ಣಿಕ ವರ್ಷದಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಶೇ.100ರಷ್ಟು ಪಡೆಯಲು ಪ್ರಯತ್ನಿಸಬೇಕು ಮತ್ತು ಗುಣಮಟ್ಟದ ಶಿಕ್ಷ ಣ ನೀಡಲು ಚರ್ಚಿಸಿ ಕಾರ್ಯಕ್ರಮ ಅನುಷ್ಠಾನಗೊಳಿಸಬೇಕೆಂದು ತಿಳಿಸಿದರು.

ಮುಖ್ಯಾಧ್ಯಾಪಕ ರೋಹಿದಾಸ ಗಾಂವಕರ ಸಂದರ್ಶನ ತಂಡಕ್ಕೆ ಸ್ವಾಗತ ಕೋರಿದರು. ಶಿಕ್ಷ ಕರಾದ ವಿಶ್ವನಾಥ ಬೇವಿನಕಟ್ಟಿ, ಬಾಲಚಂದ್ರ ಹೆಗಡೇಕರ, ಎನ್‌.ರಾಮು.ಹಿರೇಗುತ್ತಿ, ಮಹಾದೇವ ಗೌಡ, ಜಾನಕಿ ಗೊಂಡ, ಇಂದಿರಾ ನಾಯಕ, ಶಿಲ್ಪಾ ನಾಯಕ, ಸೌಜನ್ಯ ಬಂಟ್‌, ಕವಿತಾ ಅಂಬಿಗ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ