ಆ್ಯಪ್ನಗರ

ಮತ್ತೆ ಮಳೆ ಆಟ, ಕೃಷಿಕರಿಗೆ ಪೇಚಾಟ

ಶಿರಸಿ : ಬೆಳಗ್ಗೆ ಮಧ್ಯಾಹ್ನದವರೆಗೆ ಸುಡು ಬಿಸಿಲು, ನಂತರ ಕವಿಯುವ ದಟ್ಟ ಮೋಡ, ಜತೆಯಲ್ಲಿಕೇಳಿಬರುವ ಗುಡುಗಿನ ಆರ್ಭಟ, ಆಗಾಗ ಅಪ್ಪಳಿಸುವ ಸಿಡಿಲಿನ ಸದ್ದು, ಬೆನ್ನ ಹಿಂದೆಯೇ ಬರುವ ಮಳೆರಾಯ... ಕೆಲಸಕಾರ್ಯಗಳಿಗೆ ಅಡ್ಡಿ, ಕೃಷಿಕರ ಪೇಚಾಟ..

Vijaya Karnataka 11 Oct 2019, 5:00 am
ಶಿರಸಿ : ಬೆಳಗ್ಗೆ ಮಧ್ಯಾಹ್ನದವರೆಗೆ ಸುಡು ಬಿಸಿಲು, ನಂತರ ಕವಿಯುವ ದಟ್ಟ ಮೋಡ, ಜತೆಯಲ್ಲಿಕೇಳಿಬರುವ ಗುಡುಗಿನ ಆರ್ಭಟ, ಆಗಾಗ ಅಪ್ಪಳಿಸುವ ಸಿಡಿಲಿನ ಸದ್ದು, ಬೆನ್ನ ಹಿಂದೆಯೇ ಬರುವ ಮಳೆರಾಯ... ಕೆಲಸಕಾರ್ಯಗಳಿಗೆ ಅಡ್ಡಿ, ಕೃಷಿಕರ ಪೇಚಾಟ..
Vijaya Karnataka Web rain game again farmers paycheck
ಮತ್ತೆ ಮಳೆ ಆಟ, ಕೃಷಿಕರಿಗೆ ಪೇಚಾಟ


ಇಂಥ ಸನ್ನಿವೇಶ ಈಗ ಜಿಲ್ಲೆಯ ವಿವಿಧೆಡೆಗಳಲ್ಲಿಮಾಮೂಲಿ ಎಂಬಂತಾಗಿದೆ. ಮುಂದುವರಿದ ಗುಡುಗು ಮಳೆಯ ಆಟದ ಬಗ್ಗೆ ಜನರು ಅಸಹಾಯಕರಾಗಿದ್ದಾರೆ.

ಅಕ್ಟೋಬರ್‌ ತಿಂಗಳ ಮೊದಲ ವಾರ ಕಳೆದ ನಂತರದಲ್ಲೂಹೀಗೆ ಮಳೆರಾಯ ದಿನವೂ ಆಗಮಿಸುತ್ತಾನೆ ಎಂಬುದು ಜನರಿಗೆ ನಿರೀಕ್ಷೆಯೇ ಇರಲಿಲ್ಲ. ಆದರೆ ಪ್ರಕೃತಿಯ ವಿದ್ಯಮಾನ ಎಲ್ಲವನ್ನೂ ತಲೆಕೆಳಗೆ ಮಾಡಿದಂತಾಗಿದೆ.

ಕಳೆದ ತಿಂಗಳು ಗಣೇಶ ಚೌತಿಯ ಸಂದರ್ಭದಲ್ಲಿಒಂದು ವಾರ ಮುಂಚೆಯೇ ಮಳೆಗಾಲ ಮುಗಿದು ಹೋಯಿತು ಎಂಬ ವಾತಾವರಣ ಕಂಡು ಬಂದಿತ್ತು. ಆದರೆ ಚೌತಿ ಮುಕ್ತಾಯದಲ್ಲಿಪುನಃ ಮಳೆ ಸುರಿದು ಇದೀಗ ನವರಾತ್ರಿ ಕಳೆದ ನಂತರದಲ್ಲೂಮತ್ತೆ ದಿನವೂ ಮೋಡ ಕವಿಯುತ್ತಿದೆ, ತಾಸುಗಟ್ಟಲೇ ಮಳೆ ಬೀಳುತ್ತಿದೆ.

ಕೃಷಿಕರ ಮಿಶ್ರ ಪ್ರತಿಕ್ರಿಯೆ..
ಹವಾಮಾನದ ಈಗಿನ ಸನ್ನಿವೇಶದ ಬಗ್ಗೆ ಕೃಷಿಕರ ವಲಯದಲ್ಲಿಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ, ತಡವಾಗಿ ಭತ್ತ ನಾಟಿ ಮಾಡಿದವರು ಈಗ ಮಳೆ ಬೇಕು ಎನ್ನುವವರಿದ್ದಾರೆ. ಇನ್ನಷ್ಟು ಮಂದಿ ಮಳೆ ಬಿದ್ದರೆ ತೊಂದರೆ ಏನೂ ಇಲ್ಲಎನ್ನುತ್ತಾರೆ. ಕಡು ಬಿಸಿಲು ಇಲ್ಲದಿದ್ದರೆ ಮಳೆ ಸಾಕು ಎನ್ನುವವರು ಇದ್ದಾರೆ.

ಇನ್ನೊಂದೆಡೆ ಅಡಕೆ ಬೆಳೆಗಾರರು ಈಗ ಸುರಿಯುತ್ತಿರುವ ಮಳೆಯ ಬಗ್ಗೆ ಏನು ಹೇಳಬೇಕೆಂದು ತೋಚದ ಸ್ಥಿತಿಯಲ್ಲಿದ್ದಂತೆ ಕಂಡು ಬರುತ್ತಿದೆ, ಈ ಬಾರಿ ಅತಿವೃಷ್ಟಿಯ ಪರಿಣಾಮವಾಗಿ ಹಲವೆಡೆ ಅಡಕೆ ಕೊಳೆ ರೋಗದಿಂದ ಕೃಷಿಕರು ಕಂಗಾಲಾಗುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈಗ ಇನ್ನಷ್ಟು ಕೊಳೆ ವ್ಯಾಪಿಸುವ ಆತಂಕವೇನೂ ತಪ್ಪಿದೆ. ಆದರೆ ಈಗಲೂ ಈ ಮಳೆಯಿಂದ ಏನಾಗುತ್ತದೋ ಏನೋ ಎಂಬ ಆತಂಕ ಕೃಷಿಕರಲ್ಲಿವ್ಯಕ್ತವಾಗುತ್ತಿದೆ.

ಉಂಬಳ ಜೋರು: ಈಗ ಪ್ರತಿದಿನವೂ ಎಂಬಂತೆ ಕಡ್ಡಾಯವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅನೇಕ ಹಳ್ಳಿಗಳಲ್ಲಿಉಂಬಳ ಕಾಟವೂ ಮತ್ತೆ ಜೋರಾಗಿದೆ. ಮನೆಯಿಂದ ಹೊರಬಿದ್ದರೆ ಉಂಬಳ ಎಲ್ಲಿಕಾಲಿಗೆ ಹತ್ತಿ ಕಚ್ಚಿತೋ ಏನೋ ಎಂದು ನೋಡಿಕೊಳ್ಳುವಂತಾಗಿದೆ.

ಕೆಲಸಕ್ಕೆ ಅಡ್ಡಿ.. ಈಗ ಕೃಷಿಕರು ಅಡಕೆ ತೋಟದಲ್ಲಿಸಸಿ ನೆಡುವುದು ಮುಂತಾದ ಕೆಲಸ ಕಾರ್ಯಗಳ ಅವಸರದಲ್ಲಿದ್ದಾರೆ ಈಗ ಸುರಿಯುತ್ತಿರುವ ಮಳೆಯು ಇಂಥ ಕೆಲಸಗಳಿಗೆ ಅಡ್ಡಿಯಾಗಿದೆ. ಅಲ್ಲದೆ ಕೃಷಿ ಕಾರ್ಮಿಕರು ಕೂಡ ಕೆಲಸ ಲಭ್ಯವಾಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ.

ಮಳೆ ಸಾಕು : ಈ ಬಾರಿ ಮಳೆ ಸಾಕಷ್ಟು ಹೊಯ್ದು ಬಿಟ್ಟಿದೆ, ಈಗ ಮತ್ತೆ ಬೇಡ, ಸಾಕೋ ಸಾಕು ಎನ್ನುವಂತಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ