ಆ್ಯಪ್ನಗರ

ಮುಂಡಗೋಡದಲ್ಲಿಮತ್ತೆ ಮಳೆ

ಮುಂಡಗೋಡ : ಕೆಲವು ದಿನಗಳಿಂದ ಬಿಡುವು ನೀಡಿದ್ದ ಮಳೆ ಶುಕ್ರವಾರದಿಂದ ಮತ್ತೆ ಆರಂಭವಾಗಿದ್ದು ಇದರಿಂದ ಗಣೇಶ ಚತುರ್ಥಿ ಹಬ್ಬ ಆಚರಿಸಲು ತೊಂದರೆ ಉಂಟಾಗುತ್ತದೆ ಎಂದು ತಾಲೂಕಿನ ಜನರು ಬೇಸರ ವ್ಯಕ್ತ ಪಡಿಸುತ್ತಿದ್ದಾರೆ.

Vijaya Karnataka 1 Sep 2019, 5:00 am
ಮುಂಡಗೋಡ : ಕೆಲವು ದಿನಗಳಿಂದ ಬಿಡುವು ನೀಡಿದ್ದ ಮಳೆ ಶುಕ್ರವಾರದಿಂದ ಮತ್ತೆ ಆರಂಭವಾಗಿದ್ದು ಇದರಿಂದ ಗಣೇಶ ಚತುರ್ಥಿ ಹಬ್ಬ ಆಚರಿಸಲು ತೊಂದರೆ ಉಂಟಾಗುತ್ತದೆ ಎಂದು ತಾಲೂಕಿನ ಜನರು ಬೇಸರ ವ್ಯಕ್ತ ಪಡಿಸುತ್ತಿದ್ದಾರೆ.
Vijaya Karnataka Web rain in mundagoda
ಮುಂಡಗೋಡದಲ್ಲಿಮತ್ತೆ ಮಳೆ


ಕೆಲವೇ ದಿನಗಳ ಹಿಂದೆ ಸುರಿದ ಮಹಾಮಳೆಗೆ ತಾಲೂಕಿನಲ್ಲಿಕೋಟ್ಯಂತರ ರೂ. ಹಾನಿ ಸಂಭವಿಸಿದೆ. ಹಿಂದೆಂದೂ ಕಾಣದಂತಹ ಮಳೆ ಸುರಿದಿದೆ. 8-10 ದಿನಗಳಿಂದ ಮಳೆ ಕಡಿಮೆಯಾಗಿ ಬಿಸಿಲಿನ ವಾತಾವರಣ ನಿರ್ಮಾಣವಾಗಿತ್ತು. ಮಳೆ ಕಡಿಮೆಯಾಯಿತು ಎಂದು ತಾಲೂಕಿನ ಜನರು ನಿಟ್ಟುಸಿರು ಬಿಟ್ಟಿದ್ದರು. ಇದೀಗ ಮತ್ತೆ ಮಳೆ ಆರಂಭವಾಗಿರುವುದು ಬೇಸರ ಮೂಡಿಸಿದೆ.

ಹಬ್ಬ ಆಚರಣೆಗೆ ಅಡಚಣೆ: ಶುಕ್ರವಾರ ರಾತ್ರಿ ಹಾಗೂ ಶನಿವಾರ ಬೆಳಗಿನ ಜಾವ ಉತ್ತಮ ಮಳೆ ಸುರಿಯಿತು. ಸೋಮವಾರ ಗಣೇಶ ಚತುರ್ಥಿ ಹಬ್ಬವಿದ್ದು, ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗುತ್ತದೆ. ಇದೇ ರೀತಿ ಮಳೆ ಸುರಿಯಲಾರಂಭಿಸಿದರೆ ಹಬ್ಬ ಆಚರಣೆಗೆ ಹಿನ್ನಡೆಯಾಗುತ್ತದೆ ಎಂಬ ಆತಂಕ ತಾಲೂಕಿನ ಜನರಲ್ಲಿಮೂಡಿದೆ.

ಗೋವಿನಜೋಳ ಹಿನ್ನಡೆ: ತಾಲೂಕಿನಲ್ಲಿ5000 ಹೆಕ್ಟೇರಗೂ ಅಧಿಕ ಪ್ರದೇಶದಲ್ಲಿಗೋವಿನಜೋಳ ಬೆಳೆ ಬೆಳೆಯಲಾಗಿದ್ದು, ನೂರಾರು ಹೆಕ್ಟೇರ್‌ ಪ್ರದೇಶದಲ್ಲಿಹತ್ತಿ ಬೆಳೆ ಬೆಳೆಯಲಾಗಿದೆ. ಇತ್ತೀಚೆಗೆ ಸುರಿದ ಮಹಾ ಮಳೆಗೆ ಈ ಎರಡೂ ಬೆಳೆಗಳ ಬೆಳವಣಿಗೆ ಹಿನ್ನಡೆಯಾಗಿದೆ. ಇದೀಗ ಮತ್ತೆ ಮಳೆ ಆರಂಭವಾಗಿರುವುದರಿಂದ ಈ ಬೆಳೆಗಳು ಹಾಳಾಗುತ್ತವೆ ಎಂಬ ಆತಂಕವೂ ರೈತರನ್ನು ಕಾಡುತ್ತಿದೆ. ನಿರಂತರ ಮಳೆಯಿಂದ ಬೇಸತ್ತಿದ್ದ ತಾಲೂಕಿನ ಜನರು ಕಳೆದ ಎಂಟುದಿನಗಳಿಂದ ಬಿಸಿಲಿನ ವಾತಾವರಣ ನಿರ್ಮಾಣವಾಗಿರುವುದನ್ನು ಕಂಡು ಸಂತಸ ವ್ಯಕ್ತ ಪಡಿಸುತ್ತಿದ್ದರು ಆದರೆ ಇದೀಗ ಮತ್ತೆ ಮಳೆ ಆರಂಭವಾಗಿರುವುದು ತಾಲೂಕಿನ ಜನರಿಗೆ ತೀವ್ರ ಬೇಸರವುಂಟು ಮಾಡಿದೆ.

ಮಳೆ ವಿವರ : ಆ.31ರಂದು 8 ಮಿ.ಮೀ. ಮಳೆಯಾಗಿದೆ. ಇಂದಿನವರೆಗೆ ಒಟ್ಟು 1315.4 ಮಿ.ಮೀ. ಮಳೆಯಾಗಿದೆ ಕಳೆದ ವರ್ಷ ಈ ಅವಧಿಗೆ 786.2 ಮಿ.ಮೀ. ಮಳೆಯಾಗಿತ್ತು. ಕಳೆದ ವರ್ಷಕ್ಕಿಂತ ಈ ಬಾರಿ 529 ಮಿ.ಮೀ. ಮಳೆ ಹೆಚ್ಚು ಸುರಿದಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ