ಯಲ್ಲಾಪುರ : ಕಳೆದ ಹದಿನೈದು ದಿನಗಳಿಂದ ಮಳೆ ಸ್ವಲ್ಪ ಪ್ರಮಾಣದಲ್ಲಿಕಡಿಮೆಯಾಗಿತ್ತು. ಆದರೆ ಬುಧವಾರ ಮತ್ತು ಗುರುವಾರ ಮತ್ತೆ ತಾಲೂಕಿನಲ್ಲಿಮೋಡ ಮುಸುಕಿದ ವಾತಾವರಣ ಇದ್ದು, ಮಧ್ಯಾಹ್ನ ಒಂದು ತಾಸು ಕಾಲ ಜೋರಾದ ಮಳೆ ಸುರಿಯಿತು. ಮಳೆಯ ಜೊತೆ ಗುಡುಗಿನ ಅಬ್ಬರವೂ ಇತ್ತು. ತಾಲೂಕಿನ ಹಲವು ಭಾಗಗಳಲ್ಲಿಗದ್ದೆಯಲ್ಲಿನಾಟಿ ಮಾಡಿದ ಭತ್ತದ ಪೈರು ತೆನೆ ಒಡೆಯುವ ಹಂತದಲ್ಲಿದ್ದು, ಈ ಸಂದರ್ಭದಲ್ಲಿಜೋರಾಗಿ ಮಳೆ ಸುರಿದರೆ ಬೆಳೆ ನಷ್ಟವಾಗುವ ಆತಂಕ ರೈತರದ್ದಾಗಿದೆ. ತಾಲೂಕಿನ ಮಲವಳ್ಳಿ ಸೇರಿದಂತೆ ಹಲವೆಡೆ ಅಡಕೆ ಕೊಯ್ಲುಪ್ರಾರಂಭವಾಗಿದ್ದು, ಅಡಕೆ ಸಂಸ್ಕರಣ ಹಾಗೂ ಅಡಕೆ ಒಣಗಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಅಡಕೆ ಬೆಳೆಗಾರರು ಹೈರಾಣಾಗುವಂತಾಗಿದೆ.
ಯಲ್ಲಾಪುರ ತಾಲೂಕಿನಲ್ಲಿಮತ್ತೆ ಮಳೆ
ಯಲ್ಲಾಪುರ : ಕಳೆದ ಹದಿನೈದು ದಿನಗಳಿಂದ ಮಳೆ ಸ್ವಲ್ಪ ಪ್ರಮಾಣದಲ್ಲಿಕಡಿಮೆಯಾಗಿತ್ತು. ಆದರೆ ಬುಧವಾರ ಮತ್ತು ಗುರುವಾರ ಮತ್ತೆ ತಾಲೂಕಿನಲ್ಲಿಮೋಡ ಮುಸುಕಿದ ವಾತಾವರಣ ಇದ್ದು, ಮಧ್ಯಾಹ್ನ ಒಂದು ತಾಸು ಕಾಲ ಜೋರಾದ ಮಳೆ ಸುರಿಯಿತು. ಮಳೆಯ ಜೊತೆ ಗುಡುಗಿನ ಅಬ್ಬರವೂ ಇತ್ತು. ತಾಲೂಕಿನ ಹಲವು ಭಾಗಗಳಲ್ಲಿಗದ್ದೆಯಲ್ಲಿನಾಟಿ ಮಾಡಿದ ಭತ್ತದ ಪೈರು ತೆನೆ ಒಡೆಯುವ ಹಂತದಲ್ಲಿದ್ದು, ಈ ಸಂದರ್ಭದಲ್ಲಿಜೋರಾಗಿ ಮಳೆ ಸುರಿದರೆ ಬೆಳೆ ನಷ್ಟವಾಗುವ ಆತಂಕ ರೈತರದ್ದಾಗಿದೆ. ತಾಲೂಕಿನ ಮಲವಳ್ಳಿ ಸೇರಿದಂತೆ ಹಲವೆಡೆ ಅಡಕೆ ಕೊಯ್ಲುಪ್ರಾರಂಭವಾಗಿದ್ದು, ಅಡಕೆ ಸಂಸ್ಕರಣ ಹಾಗೂ ಅಡಕೆ ಒಣಗಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಅಡಕೆ ಬೆಳೆಗಾರರು ಹೈರಾಣಾಗುವಂತಾಗಿದೆ.
Vijaya Karnataka 11 Oct 2019, 5:00 am