ಆ್ಯಪ್ನಗರ

ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ರಾಜೀವ್‌ ಗಾಂಧಿ ಸ್ಮರಣೆ

ಶಿರಸಿ : ಭಾರತದ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರನ್ನು ಇಲ್ಲಿಯ ಜಿಲ್ಲಾ ಕಾಂಗ್ರೆಸ್‌ನಲ್ಲಿ ಸ್ಮರಿಸಲಾಯಿತು. ಮೊಬೈಲ್‌ ಕ್ರಾಂತಿಗೆ ಅಡಿಗಲ್ಲಿಟ್ಟಿದ್ದ ಅವರ ಕೊಡುಗೆಗಳನ್ನು ನೆನಪಿಸಲಾಯಿತು.

Vijaya Karnataka 23 May 2019, 5:00 am
ಶಿರಸಿ : ಭಾರತದ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರನ್ನು ಇಲ್ಲಿಯ ಜಿಲ್ಲಾ ಕಾಂಗ್ರೆಸ್‌ನಲ್ಲಿ ಸ್ಮರಿಸಲಾಯಿತು. ಮೊಬೈಲ್‌ ಕ್ರಾಂತಿಗೆ ಅಡಿಗಲ್ಲಿಟ್ಟಿದ್ದ ಅವರ ಕೊಡುಗೆಗಳನ್ನು ನೆನಪಿಸಲಾಯಿತು.
Vijaya Karnataka Web SRS-22SRS5


ಪಕ್ಷ ದ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ ರಾಜೀವ ಗಾಂಧಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ರಾಜೀವ್‌ ಗಾಂಧಿಯವರು ಅಭಿವೃದ್ಧಿ ಪರ ಚಿಂತನೆ ಹೊಂದಿದವರು. ಮಾನವೀಯತೆಯ ಮುಖವುಳ್ಳ ಅವರನ್ನು ಇಂದು ಕೆಲವು ಕುಹಕಿಗಳು ನಿಂದನಾತ್ಮಕ ಬರಹಗಳ ಮೂಲಕ ಚಾರಿತ್ರ್ಯ ಹರಣ ಮಾಡುತ್ತಿದ್ದಾರೆ. ಅವರು ನೀಡಿರುವ ಕೊಡುಗೆಗಳನ್ನು ಮರೆತು ಮಾತಾಡುತ್ತಿದ್ದಾರೆ. ಅಂಗೈಯಲ್ಲಿ ಜಗತ್ತು ಇರುವ ಈ ಸಂದರ್ಭದಲ್ಲಿ ಅದಕ್ಕೆ ಕಾರಣವೇ ರಾಜೀವ್‌. ದೂರವಾಣಿ ಮತ್ತು ಮೊಬೈಲ್‌ ತಂತ್ರಜ್ಞಾನ ಕ್ಷೇತ್ರದಲ್ಲಿ ಜಗತ್ತೇ ಭಾರತದತ್ತ ತಿರುಗಿ ನೋಡುವ ಸಾಧನೆ ಮಾಡಿರುವ ರಾಜೀವ್‌ರನ್ನು ದೇಶ ಎಂದೂ ಮರೆಯಲಾಗದು ಎಂದರು.

ಕಾಂಗ್ರೆಸ್‌ ಪಕ್ಷ ಕ್ಕೆ ನವ ಚೈತನ್ಯ ನೀಡಿದ, ಯುವಕರ ಕಣ್ಮಣಿಯಾಗಿದ್ದ, ಅಭಿವೃದ್ಧಿ ಪರ ಯೋಜನೆಗಳನ್ನು ಜಾರಿ ಮಾಡಿದ, ಸಂಘಟನೆಯ ಮೂಲಕ ಕಾರ್ಯಕರ್ತರನ್ನು ಹುರಿದುಂಬಿಸಿ ದೇಶದ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್‌ನ್ನು ಅಧಿಕಾರ ಗದ್ದುಗೆ ಏರುವಂತೆ ಮಾಡಿದ ಮಹಾನ್‌ ವ್ಯಕ್ತಿತ್ವ ರಾಜೀವ್‌ ಗಾಂಧಿಯದ್ದು. ಪಕ್ಷ ದ ಕಾರ್ಯಕರ್ತರು, ಮುಖಂಡರು, ಪದಾಧಿಕಾರಿಗಳು ಅವರನ್ನು ಸ್ಮರಿಸುವ ಮೂಲಕ ದಿವ್ಯ ಚೇತನಕ್ಕೆ ನಮನ ಸಲ್ಲಿಸುತ್ತಿದ್ದಾರೆ. ಸಂಘಟನೆಯಲ್ಲಿ ಕೂಡ ಎಲ್ಲರೂ ಒಮ್ಮನಸ್ಸಿನಿಂದ ಪಾಲ್ಗೊಂಡು ಪಕ್ಷ ವನ್ನು ಜನಸಾಮಾನ್ಯರ ಬಳಿಗೆ ತಲುಪಿಸುವ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಬೇಕು ಎಂದರು.

ಎಸ್‌ ಕೆ.ಭಾಗವತ್‌, ಅಬ್ಬಾಸ್‌ ತೋನ್ಸೆ, ಜಗದೀಶ ಗೌಡ, ಎಚ್‌ ಯು ಪಠಾಣ್‌, ಮಾಧವ ರೇವಣಕರ್‌, ಎನ್‌ ವಿ ನಾಯ್ಕ, ಮಹೇಶ ನಾಯ್ಕ, ವಿ.ಎಂ.ಹೆಗಡೆ, ಉಮೇಶ ನಾಯ್ಕ, ನಿಸಾರ್‌ ಆನವಟ್ಟಿ ಮುಂತಾದವರು ಉಪಸ್ಥಿತರಿದ್ದರು. ಸತೀಶ್‌ ನಾಯ್ಕ ನಿರೂಪಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ