ಆ್ಯಪ್ನಗರ

ಪೊಲೀಸ್‌ ಠಾಣೆಯಲ್ಲಿ ರಕ್ಷಾ ಬಂಧನ

ಶಿರಸಿ : ಅಣ್ಣತಂಗಿಯರ ಅನುಬಂಧದ ರಕ್ಷಾಬಂಧನ ಹಬ್ಬವನ್ನು ತಾಲೂಕಿನಾದ್ಯಂತ ಸಂಭ್ರಮ, ಸಡಗರದಿಂದ ಆಚರಿಸಲಾಯಿತು. ಬಿಜೆಪಿ ಮಹಿಳಾ ಪ್ರಮುಖರು ನಗರದ ಪೊಲೀಸ್‌ ಠಾಣೆಗಳಿಗೆ ತೆರಳಿ ಪೊಲೀಸ್‌ ಅಧಿಕಾರಿ, ಸಿಬ್ಬಂದಿಗೆ ರಾಖಿ ಹಂಚಿದರು.

Vijaya Karnataka 5 Aug 2020, 5:00 am
ಶಿರಸಿ : ಅಣ್ಣತಂಗಿಯರ ಅನುಬಂಧದ ರಕ್ಷಾಬಂಧನ ಹಬ್ಬವನ್ನು ತಾಲೂಕಿನಾದ್ಯಂತ ಸಂಭ್ರಮ, ಸಡಗರದಿಂದ ಆಚರಿಸಲಾಯಿತು. ಬಿಜೆಪಿ ಮಹಿಳಾ ಪ್ರಮುಖರು ನಗರದ ಪೊಲೀಸ್‌ ಠಾಣೆಗಳಿಗೆ ತೆರಳಿ ಪೊಲೀಸ್‌ ಅಧಿಕಾರಿ, ಸಿಬ್ಬಂದಿಗೆ ರಾಖಿ ಹಂಚಿದರು.
Vijaya Karnataka Web 08113SRS4_26
ಶಿರಸಿಯ ಗ್ರಾಮೀಣ ಪೊಲೀಸ್‌ ಠಾಣೆ ಹೊರಭಾಗದಲ್ಲಿಬಿಜೆಪಿ ಮಹಿಳಾ ಪ್ರಮುಖರು ಸಿಬ್ಬಂದಿಗೆ ರಾಖಿ ನೀಡಿ ರಕ್ಷಾಬಂಧನ ಆಚರಿಸಿದರು.


ಸಾಮಾಜಿಕ ಅಂತರ ಕಾಪಾಡುವ ಉದ್ದೇಶದಿಂದ ಠಾಣೆಯ ಹೊರಭಾಗದಲ್ಲಿಸಿಬ್ಬಂದಿಗೆ ರಾಖಿ ಹಂಚಿ ಸಿಹಿ ವಿತರಿಸಲಾಯಿತು. ಮಹಿಳಾ ಮೋರ್ಚಾ ಅಧ್ಯಕ್ಷೆ ಕವಿತಾ ಭಟ್ಟ, ಜಿಪಂ ಸದಸ್ಯೆ ಉಷಾ ಹೆಗಡೆ, ವೀಣಾ ಭಟ್ಟ ಮುಂತಾದವರು ಇದ್ದರು.

ಮನೆಮನೆಗಳಲ್ಲಿರಕ್ಷಾಬಂಧನ : ಕೊರೊನಾ ಹಿನ್ನೆಲೆಯಲ್ಲಿರಕ್ಷಾಬಂಧನ ಹಬ್ಬವನ್ನು ಮನೆಮನೆಗಳಲ್ಲಿಯೇ ಸೀಮಿತವಾಗಿ ಆಚರಿಸಲಾಯಿತು. ಸಹೋದರಿಯರು ತಮ್ಮ ಸಹೋದರರಿಗೆ ರಾಖಿ ಕಟ್ಟಿದರು. ಮನೆಯಲ್ಲಿಸಿಹಿ ಹಂಚಿ ಸಂಭ್ರಮಿಸಿದರು. ಸಹೋದರರು ದೂರದ ಊರಿನಲ್ಲಿದ್ದರೆ ಅವರಿಗೆ ದೂರವಾಣಿ ಕರೆ ಮಾಡಿ ಶುಭಾಶಯ ಕೋರಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ