ಆ್ಯಪ್ನಗರ

ಡಿ.28ರಿಂದ ರಾಮಕ್ಷತ್ರಿಯ ಮಹಾಸಮಾವೇಶ

ಶಿರಸಿ : ಹೊನ್ನಾವರ ತಾಲೂಕಿನ ಮಂಕಿಯಲ್ಲಿಡಿಸೆಂಬರ್‌ 28, 29ರಂದು ಹಮ್ಮಿಕೊಳ್ಳುತ್ತಿರುವ ರಾಮಕ್ಷತ್ರಿಯ ಮಹಾಸಮಾವೇಶದ ಅಂಗವಾಗಿ 13 ಕೋಟಿ ರಾಮತಾರಕ ಮಂತ್ರದ ಜಪ ಯಜ್ಞ ಕಾರ್ಯಕ್ರಮದ ಪೂರ್ವತಯಾರಿ ಸಮಾಲೋಚನಾ ಸಭೆ ನಗರದಲ್ಲಿನಡೆಯಿತು.

Vijaya Karnataka 24 Nov 2019, 5:00 am
ಶಿರಸಿ : ಹೊನ್ನಾವರ ತಾಲೂಕಿನ ಮಂಕಿಯಲ್ಲಿಡಿಸೆಂಬರ್‌ 28, 29ರಂದು ಹಮ್ಮಿಕೊಳ್ಳುತ್ತಿರುವ ರಾಮಕ್ಷತ್ರಿಯ ಮಹಾಸಮಾವೇಶದ ಅಂಗವಾಗಿ 13 ಕೋಟಿ ರಾಮತಾರಕ ಮಂತ್ರದ ಜಪ ಯಜ್ಞ ಕಾರ್ಯಕ್ರಮದ ಪೂರ್ವತಯಾರಿ ಸಮಾಲೋಚನಾ ಸಭೆ ನಗರದಲ್ಲಿನಡೆಯಿತು.
Vijaya Karnataka Web ramakashtri mahasamma from d 28
ಡಿ.28ರಿಂದ ರಾಮಕ್ಷತ್ರಿಯ ಮಹಾಸಮಾವೇಶ


ಸಮಾವೇಶದ ಸ್ವಾಗತ ಸಮಿತಿಯ ಸದಸ್ಯ ಎಂ.ಆರ್‌.ನಾಯ್ಕ ಮಾತನಾಡಿ, ನಮ್ಮ ಸಮುದಾಯದ ಗುರುಗಳಾದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳವರ ಮಾರ್ಗದರ್ಶನದಲ್ಲಿ13 ಕೋಟಿ ರಾಮತಾರಕ ಮಂತ್ರದ ಜಪ ಹಾಗೂ ಯಜ್ಞದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಜಪವನ್ನು ಡಿಸೆಂಬರ್‌ 15ರಿಂದ 22ರ ವರೆಗೆ ಮಾಡಬೇಕಾಗಿದೆ. ಎಲ್ಲರೂ ಬೃಹತ್‌ ಸಮಾವೇಶದಲ್ಲಿಪಾಲ್ಗೊಂಡು ಸಮಾಜದ ಸರ್ವತೋಮುಖ ಅಭಿವೃದ್ಧಿ ಮತ್ತು ಯಶಸ್ಸಿಗೆ ಪಾತ್ರರಾಗಬೇಕೆಂದು ವಿನಂತಿಸಿಕೊಂಡರು.

ಸಮಾವೇಶದ ಸ್ವಾಗತ ಸಮಿತಿಯ ಸದಸ್ಯರಾದ ಸೀತಾರಾಮ ನಾಯ್ಕ, ರಾಜೇಶ ಸಾಲೆಹಿತ್ಲ, ನಾಗರಾಜ ನಾಯ್ಕ, ಹಾಜರಿದ್ದು ಬೃಹತ್‌ ಸಮಾವೇಶದ ಬಗ್ಗೆ ವಸತಿ, ವ್ಯವಸ್ಥೆ ಮತ್ತು ಕಾರ್ಯಕ್ರಮದ ವಿವರ ತಿಳಿಸಿದರು ಎಲ್ಲೆಡೆಯಿಂದ ಒಟ್ಟು ಸುಮಾರು 40,000 ಸಮಾಜ ಬಾಂಧವರು ಸೇರಬಹುದೆಂದು ಹೇಳಿದರು.

ಸಮಾವೇಶ ಸಮಿತಿ ಉಪಾಧ್ಯಕ್ಷ ರಮೇಶ ದುಬಾಶಿ ಮಾತನಾಡಿ, ಶ್ರೀರಾಮತಾರಕ ಮಂತ್ರ ಪಠಣದಿಂದ ಕುಟುಂಬ ಹಾಗೂ ಸಮಾಜ ಅಭಿವೃದ್ಧಿಯಾಗಲಿದೆ, ನಾವೆಲ್ಲರೂ ಅತಿ ಹೆಚ್ಚಿನ ಸಂಖ್ಯೆಯಲ್ಲಿಸಮಾವೇಶಕ್ಕೆ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸೋಣ ಎಂದು ಹೇಳಿದರು.

ಸಭೆಯಲ್ಲಿಸ್ಥಳೀಯ ರಾಮಕ್ಷತ್ರೀಯ ಸೇವಾ ಸಂಘದ ಪದಾಧಿಕಾರಿಗಳಾದ ಮಂಜುನಾಥ ಶೇರುಗಾರ, ಗಜಾನನ ಟಿ. ಸಕಲಾತಿ, ಹಿರಿಯರಾದ ದಾಸಪ್ಪಾ ಆರ್‌, ಮುದ್ದೋಡಿ, ಪ್ರಮುಖರಾದ ಶೋಭಾ ಎಮ್‌. ಬೈಂದೂರ, ಕಿರಣ ಎಸ್‌. ಮದ್ದೋಡಿ ಹಾಗೂ ಮಹಿಳೆಯರು ಹಾಜರಿದ್ದರು. ವೀಣಾ ಎಸ್‌. ಮದ್ದೋಡಿ ನಿರೂಪಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ