ಆ್ಯಪ್ನಗರ

ರಾಮಕ್ಷತ್ರೀಯ ವಧುವರರ ಅನ್ವೇಷಣಾ ಕಾರ್ಯಕ್ರಮ

ಹೊನ್ನಾವರ: ನಿರಂತರ ಸಂಪರ್ಕದ ಮೂಲಕ ಸಮಾಜದ ಸಂಘಟನೆಗೆ ಪ್ರತಿಯೊಬ್ಬರು ಕೈ ಜೋಡಿಸಿದಾಗ ಸಮಾಜದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಸ್ವರ್ಣವಲ್ಲಿರಾಮಕ್ಷತ್ರಿಯ ಸೀಮಾ ಪರಿಷತ್‌ನ ಅಧ್ಯಕ್ಷ ಎಸ್‌. ಕೆ. ನಾಯ್ಕ ಹೇಳಿದರು.

Vijaya Karnataka 22 Oct 2019, 5:00 am
ಹೊನ್ನಾವರ: ನಿರಂತರ ಸಂಪರ್ಕದ ಮೂಲಕ ಸಮಾಜದ ಸಂಘಟನೆಗೆ ಪ್ರತಿಯೊಬ್ಬರು ಕೈ ಜೋಡಿಸಿದಾಗ ಸಮಾಜದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಸ್ವರ್ಣವಲ್ಲಿರಾಮಕ್ಷತ್ರಿಯ ಸೀಮಾ ಪರಿಷತ್‌ನ ಅಧ್ಯಕ್ಷ ಎಸ್‌. ಕೆ. ನಾಯ್ಕ ಹೇಳಿದರು.
Vijaya Karnataka Web 21 HNR 1_24


ಪಟ್ಟಣದ ಶ್ರೀ ಲಕ್ಷಿತ್ರ್ಮೕ ನಾರಾಯಣ ಸಭಾಭವನದಲ್ಲಿಉತ್ತರ ಕನ್ನಡ ಜಿಲ್ಲಾರಾಮಕ್ಷತ್ರಿಯ ನೌಕರರ ಸಂಘ ಹಾಗೂ ಸ್ವರ್ಣವಲ್ಲಿರಾಮಕ್ಷತ್ರಿಯ ಸೀಮಾ ಪರಿಷತ್‌ ಜಂಟಿ ಆಶ್ರಯದಲ್ಲಿನಡೆದ ವಧು-ವರ ಅನ್ವೇಷಣೆ ಹಾಗೂ ಮಾಹಿತಿ ಸಂಗ್ರಹಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಲಕ್ಷಿತ್ರ್ಮೕ ನಾರಾಯಣ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಎಮ್‌. ಡಿ. ನಾಯ್ಕ ಮಾತನಾಡಿ, ಸಮಾಜಕ್ಕೆ ಉಪಯೋಗವಾಗುವ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದರು.

ತಾಪಂ ಕಾರ್ಯ ನಿರ್ವಹಣಾಧಿಕಾರಿ ಸುರೇಶ ನಾಯ್ಕ ಮಾತನಾಡಿ, ಸಮಾಜದ ಕ್ರಿಯಾಶೀಲ ಸಂಘಟನೆಗಳ ಮೂಲಕ ಉತ್ತಮ ಕಾರ್ಯಕ್ರಮಗಳು ನಡೆಯಿತ್ತಿವೆ ಎಂದರು. ಆನಂದ ನಾಯ್ಕ, ಆರ್‌.ಎಸ್‌.ನಾಯ್ಕ, ಎನ್‌.ಎಸ್‌.ನಾಯ್ಕ ಮಾತನಾಡಿದರು. ಉತ್ತರ ಕನ್ನಡ ಜಿಲ್ಲಾರಾಮಕ್ಷತ್ರಿಯ ನೌಕರರ ಸಂಘದ ಅಧ್ಯಕ್ಷ ಉದಯ ನಾಯ್ಕ ಅಧ್ಯಕ್ಷತೆ ವಹಿಸಿದ್ದರು.

ಅಂಜನಾ ನಾಯ್ಕ ಪ್ರಾರ್ಥಿಸಿದರು, ಕಾರ್ಯದರ್ಶಿ ರಾಘವೇಂದ್ರ ನಾಯ್ಕ ಸ್ವಾಗತಿಸಿದರು, ಸಂಘದ ಗೌರವ ಸದಸ್ಯ ಮೋಹನ ಎಸ್‌. ಸಾಳೇಹಿತ್ತಲ್‌ ಪ್ರಾಸ್ತಾವಿಕ ಮಾತನಾಡಿದರು. ಪ್ರೇಮಕಾಂತ ನಾಯ್ಕ ಮತ್ತು ವಿಷ್ಣು ನಾಯ್ಕ ಕಾರ್ಯಕ್ರಮ ನಿರೂಪಿಸಿದದರು. ವಿನಾಯಕ ನಾಯ್ಕ ವಂದಿಸಿದರು.

ವೆಂಕಟೇಶ ನಾಯ್ಕ, ಎಂ.ಟಿ. ಗಣಪತಿ, ಸತೀಶ ನಾಯ್ಕ, ಅಶೋಕ ನಾಯ್ಕ, ಅರುಣ ಸಾಳೇಹಿತ್ತಲ ಸಹಕರಿಸಿದರು. ನೂರಾರು ಸಂಖ್ಯೆಯಲ್ಲಿವಧು-ವರರ ಪಾಲಕರು ಪರಸ್ಪರ ವಿಚಾರ ವಿನಿಮಯ ಹಾಗೂ ಮಾಹಿತಿ ಸಂಗ್ರಹಣೆ ಮಾಡಿಕೊಂಡರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ