ಆ್ಯಪ್ನಗರ

ರಂಗಾಪುರ ಕೆರೆ ಏರಿ ಒಡೆದು ಬೆಳೆಗೆ ಧಕ್ಕೆ

ಶಿರಸಿ: ಬದನಗೋಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಂಗಾಪುರ ಕೆರೆ ಏರಿ ಒಡೆದು ಕೆರೆಯ ನೀರು ಕೃಷಿ ಭೂಮಿಯಲ್ಲಿ ಹರಿಯುತ್ತಿದೆ. ಕಳೆದ ವಾರ ಈ ಘಟನೆ ನಡೆದಿದ್ದು ಈವರೆಗೂ ನೀರು ಹರಿದು ಹೋಗುವುದನ್ನು ನಿಲ್ಲಿಸುವ ಕಾರ್ಯ ಆಗಿಲ್ಲ ಎಂದು ಸ್ಥಳೀಯರು ಆಕ್ಷೇಪಿಸಿದ್ದಾರೆ.

Vijaya Karnataka 20 Aug 2019, 5:00 am
ಶಿರಸಿ: ಬದನಗೋಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಂಗಾಪುರ ಕೆರೆ ಏರಿ ಒಡೆದು ಕೆರೆಯ ನೀರು ಕೃಷಿ ಭೂಮಿಯಲ್ಲಿ ಹರಿಯುತ್ತಿದೆ. ಕಳೆದ ವಾರ ಈ ಘಟನೆ ನಡೆದಿದ್ದು ಈವರೆಗೂ ನೀರು ಹರಿದು ಹೋಗುವುದನ್ನು ನಿಲ್ಲಿಸುವ ಕಾರ್ಯ ಆಗಿಲ್ಲ ಎಂದು ಸ್ಥಳೀಯರು ಆಕ್ಷೇಪಿಸಿದ್ದಾರೆ.
Vijaya Karnataka Web SRS-19SRS7A


ಸಣ್ಣ ನೀರಾವರಿ ಇಲಾಖೆಗೆ ಸೇರಿದ ಸುಮಾರು 17ಎಕರೆ ವ್ಯಾಪ್ತಿಯಲ್ಲಿರುವ ಕೆರೆ ಅತಿಯಾದ ಮಳೆಯಿಂದ ತುಂಬಿತ್ತು. ಈ ಸಂದರ್ಭದಲ್ಲಿ ನೀರಿನ ಒತ್ತಡದಿಂದ ಕೆರೆಯ ಏರಿ ಒಡೆದು ನೀರು ಹತ್ತಾರು ಏಕರೆ ಕೃಷಿ ಭೂಮಿಯ ಮೇಲೆ ಹರಿದು ಹೋಗಿದೆ. ಇದರಿಂದ ಬಿತ್ತನೆ, ನಾಟಿ ಮಾಡಿದ ಭತ್ತ, ಶುಂಠಿ ಬೆಳೆಗೆ ಹಾನಿಯಾಗಿದೆ. ಹಾಗೇ ಅಡಕೆ ತೋಟಕ್ಕೂ ನೀರು ನುಗ್ಗಿದೆ ಎಂದು ಸ್ಥಳೀಯ ರೈತರು ದೂರುತ್ತಾರೆ.

ಸ್ಥಳಕ್ಕೆ ಜಿಲ್ಲಾ ಪಂಚಾಯಿತಿ ಸದಸ್ಯ ಬಸವರಾಜ ದೊಡ್ಮನಿ, ಪ್ರಮುಖರಾದ ಸಿ.ಎಫ್‌.ನಾಯ್ಕ ಮುಂತಾದವರು ಭೇಟಿ ನೀಡಿದ್ದರು. ಕೆರೆಯ ನೀರು ರೈತರ ಹೊಲಗಳಿಗೆ ನುಗ್ಗಿ ಲಕ್ಷಾಂತರ ರೂಪಾಯಿ ಹಾನಿಯಾಗಿದೆ. ಬೆಳೆ, ಭೂಮಿಯ ಫಲವತ್ತತೆ ಕೊಚ್ಚಿ ಹೋಗಿದೆ. ಕಳೆದ ಹಲವು ದಿನಗಳ ಹಿಂದೆಯೇ ಈ ಘಟನೆ ನಡೆದಿದ್ದು ಕೆರೆಯ ಏರಿಯನ್ನು ದುರಸ್ತಿ ಮಾಡುವ ಕಾರ್ಯ ತಕ್ಷ ಣದಲ್ಲಿ ಕೈಗೊಳ್ಳಬೇಕು. ಈ ಮೂಲಕ ಕೆರೆಯ ನೀರನ್ನು ಹಿಡಿದಿಡುವ ಕಾರ್ಯ ಮಾಡಬೇಕು ಎಂದು ಬಸವರಾಜ ದೊಡ್ಮನಿ ಹಾಗೂ ಸ್ಥಳೀಯ ರೈತರು ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ