ಆ್ಯಪ್ನಗರ

3 ಕರಡಿಗಳಿಂದ ದಿಢೀರ್‌ ದಾಳಿ

ದಾಂಡೇಲಿ : ಕುಳಗಿಯ ಟಿ.ಎಸ್‌. ಬಾಲಮಣಿ ಎಂಬುವವರು ವಾಯುವಿಹಾರಕ್ಕೆ ತೆರಳಿದ್ದಾಗ ಮೂರು ಕರಡಿಗಳು ದಾಳಿ ನಡೆಸಿದ್ದು, ಬಾಲಮಣಿಯವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Vijaya Karnataka 3 Jul 2020, 5:00 am
ದಾಂಡೇಲಿ : ಕುಳಗಿಯ ಟಿ.ಎಸ್‌. ಬಾಲಮಣಿ ಎಂಬುವವರು ವಾಯುವಿಹಾರಕ್ಕೆ ತೆರಳಿದ್ದಾಗ ಮೂರು ಕರಡಿಗಳು ದಾಳಿ ನಡೆಸಿದ್ದು, ಬಾಲಮಣಿಯವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Vijaya Karnataka Web rapid attack by 3 bears
3 ಕರಡಿಗಳಿಂದ ದಿಢೀರ್‌ ದಾಳಿ


ದಾಂಡೇಲಿಯಿಂದ 12 ಕಿ.ಮಿ. ದೂರದಲ್ಲಿರುವ ಕುಳಗಿ ನಿವಾಸಿ ಟಿ.ಎಸ್‌. ಬಾಲಮಣಿಯವರು ಎಂದಿನಂತೆ ಬೆಳಗ್ಗೆ ವಾಯುವಿಹಾರಕ್ಕೆಂದು ಹೊರಟಿದ್ದರು. ಮನೆಯಿಂದ ಎರಡು ಕಿ.ಮೀ ದೂರದಲ್ಲಿನಡೆಯುತ್ತಿರುವಾಗ ರಸ್ತೆಯ ಪೊದೆಯೊಂದರಿಂದ ಒಮ್ಮೆಲೆ ಹೊರ ಬಂದ ಮೂರು ಕರಡಿಗಳು ಬಾಲಮಣಿಯವರ ಮೇಲೆರಗಿದವು. ಹಠಾತ್‌ ದಾಳಿಯಿಂದ ವಿಚಲಿತರಾದ ಬಾಲಮಣಿಯವರು ಏನು ಮಾಡಬೇಕೆಂದು ತೋಚದೇ ಮನುಷ್ಯರ ಜತೆ ಗುದ್ದಾಡುವಂತೆ ಕರಡಿಗಳ ಜತೆ ಗುದ್ದಾಡಿದರು. ಮೂರು ಕರಡಿಗಳ ದಾಳಿಯಿಂದ ತಪ್ಪಿಸಿಕೊಂಡು ಹೊರ ಬರಲಾಗದ ಅವರು ರಸ್ತೆಯ ಮೇಲೆ ಬಿದ್ದು ಬಿಟ್ಟರು. ಅಷ್ಟರಲ್ಲಿ ಒಂದು ಕರಡಿ ಅವರ ಬಲ ತೊಡೆ ಭಾಗದಲ್ಲಿಕಚ್ಚಿಬಿಟ್ಟಿತ್ತು. ಆ ಕರಡಿಯ ಮುಖದ ಮೇಲೆ ಮುಷ್ಟಿಯಿಂದ ಹೊಡೆದಾಗ ಕರಡಿ ತನ್ನ ಹಿಡಿತ ಬಿಟ್ಟಿತ್ತು. ಜೋರಾಗಿ ಕೂಗಲಾರಂಭಿಸಿದರಾದರೂ ರಸ್ತೆಯಲ್ಲಿಬೇರಾರ‍ಯರ ಸುಳಿವಿರಲಿಲ್ಲ. ಹಾಗೂ ಹೀಗೂ ಸೆಣೆಸಾಡಿದ ಬಾಲಮಣಿ ತಮ್ಮ ಕಾಲಿನ ಒದೆತ ಹಾಗೂ ಮುಷ್ಟಿಯ ಪ್ರಹಾರದಿಂದಲೇ ಕರಡಿಗಳನ್ನು ದೂರ ತಳ್ಳಿ ಮನೆ ಕಡೆ ಓಡಿದ್ದಾರೆ. ಆಗಲೂ ಆ ಕರಡಿಗಳು ಅವರ ಬೆನ್ನು ಹತ್ತಿ ಓಡಿಸಿಕೊಂಡು ಬಂದವು. ಮನೆಯೊಳಗಡೆ ಬಂದು ಸೇರಿ ಬಾಲಮಣಿ ಬಚಾವ್‌ ಆಗಿದ್ದಾರೆ.

ಬಲ ತೊಡೆಯ ಭಾಗ, ಎರಡೂ ಕಾಲಿನ ಮಂಡಿ, ಮೊಣ ಕೈ, ಎದೆ ಹಾಗೂ ದೇಹದ ಇತರೆ ಭಾಗ ಕರಡಿಗಳು ಪರಚಿದ ಗಾಯಗಳಾಗಿದ್ದು, ತಕ್ಷಣ ಬಾಲಮಣಿಯವರು ದಾಂಡೇಲಿಗೆ ಬಂದು ಖಾಸಗಿ ವೈದ್ಯರಿಂದ ಚಿಕಿತ್ಸೆ ಪಡೆದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ