ಆ್ಯಪ್ನಗರ

ಡಾ.ಅಂಬೇಡ್ಕರ್‌ ಜೀವನ ಕಥನ ಓದಿ

ಹಳಿಯಾಳ : ಡಾ.ಬಾಬಾಸಾಹೇಬ ಅಂಬೇಡ್ಕರ ಅವರ ಆದರ್ಶಗಳನ್ನು ಪಾಲನೆ ಮಾಡುವುದು ಇಂದಿನ ಆದ್ಯತೆಯಾಗಿದೆ. ಆದ್ದರಿಂದ ಇಂದಿನ ಯುವ ಜನಾಂಗ ಅವರ ಜೀವನ ಕಥೆಗಳನ್ನು ಓದಬೇಕಾಗಿದ್ದು ಮುಖ್ಯವಾಗಿದೆ. ಅವರು ಅನುಭವಿಸಿದ ನೋವು ಮತ್ತು ಹೋರಾಟ ನಮಗೆ ಮಾದರಿಯಾಗಿವೆ ಎಂದು ಪುರಸಭಾ ಸದಸ್ಯೆ ಸುವರ್ಣಾ ಮಾದರ ಹೇಳಿದರು.

Vijaya Karnataka 20 Apr 2019, 5:00 am
ಹಳಿಯಾಳ : ಡಾ.ಬಾಬಾಸಾಹೇಬ ಅಂಬೇಡ್ಕರ ಅವರ ಆದರ್ಶಗಳನ್ನು ಪಾಲನೆ ಮಾಡುವುದು ಇಂದಿನ ಆದ್ಯತೆಯಾಗಿದೆ. ಆದ್ದರಿಂದ ಇಂದಿನ ಯುವ ಜನಾಂಗ ಅವರ ಜೀವನ ಕಥೆಗಳನ್ನು ಓದಬೇಕಾಗಿದ್ದು ಮುಖ್ಯವಾಗಿದೆ. ಅವರು ಅನುಭವಿಸಿದ ನೋವು ಮತ್ತು ಹೋರಾಟ ನಮಗೆ ಮಾದರಿಯಾಗಿವೆ ಎಂದು ಪುರಸಭಾ ಸದಸ್ಯೆ ಸುವರ್ಣಾ ಮಾದರ ಹೇಳಿದರು.
Vijaya Karnataka Web KWR-19 HLY 1


ಇಲ್ಲಿಯ ಇಂದಿರಾನಗರದಲ್ಲಿ ಆಯೋಜಿಸಿದ್ದ ಡಾ.ಅಂಬೇಡ್ಕರ ಅವರ 128ನೇ ಜಯಂತಿಯ ಅಂಗವಾಗಿ ಅಂಬೇಡ್ಕರ ಅವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

ಆರ್ಥಿಕ ತಜ್ಞರಾಗಿ, ಸಾಮಾಜಿಕ ಹೋರಾಟಗಾರರಾಗಿ, ದೀನ ದಲಿತ ಉದ್ಧಾರಕರಾಗಿ, ಜಗತ್ತಿನ ಮಾದರಿ ಪುರುಷನಾಗಿ, ಸಂವಿಧಾನ ಶಿಲ್ಪಿಯಾಗಿ ಜೀವನ ಸಾಗಿಸಿದ ಮಹಾನ್‌ ಚೇತನ್‌ ಡಾ. ಬಾಬಾಸಾಹೇಬ ಅಂಬೇಡ್ಕರ. ಅವರು ಅಂದು ನೀಡಿದ ವಿಚಾರಗಳು ಇಂದಿಗೂ ಕಾರ್ಯಾಚರಣೆಯಲ್ಲಿದ್ದು, ಅವುಗಳ ಕುರಿತು ಜನರು ಗಮನ ಹರಿಸಬೇಕಾಗಿದೆ ಎಂದರು.

ಚಿಂತಕ ಉಮೇಶ ಬೋಳಶೆಟ್ಟಿ ಮಾತನಾಡಿ, ಬುದ್ದ ಬಸವ ಮತ್ತು ಅಂಬೇಡ್ಕರ ಒಂದೇ ಸಾಲಿನಲ್ಲಿ ನಿಲ್ಲುವ ಮೇರು ವ್ಯಕ್ತಿಗಳಾಗಿದ್ದಾರೆ. ಮೂವರ ಚಿಂತನೆಗಳು ಒಂದೇ ಆಗಿದ್ದು ಇವುಗಳ ಕುರಿತು ಅಧ್ಯಯನ ಮಾಡಬೇಕಾಗಿದೆ ಎಂದರು.

ಎಚ್‌.ಎಲ್‌.ಹನುಮಂತಯ್ಯ, ಹನುಮಂತ ಮಂಡಳ, ಸುರೇಶ ವಗ್ರಾಯಿ, ಸುಂದರ ಮಾದರ, ಎಸಯ್ಯಾ ತಮಗುಂಟ, ಜಕ್ರಯ್ಯಾ ಮಾದರ, ಕುಲಾಯಪ್ಪ ಮಾದರ, ಪೌವಲಯ್ಯ ಮಂಡಳ ಮತ್ತೀತರರು ಹಾಜರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ