ಆ್ಯಪ್ನಗರ

ಅನುದಾನ ಬಿಡುಗಡೆ

ಕಾರವಾರ : ಜಿಲ್ಲೆಯ ವಿಪತ್ತು ನಿರ್ವಹಣೆಗಾಗಿ ರಾಜ್ಯ ಸರ್ಕಾರ 50 ಲಕ್ಷ ರೂ. ವಿಶೇಷ ಅನುದಾನ ಬಿಡುಗಡೆ ಮಾಡಿದ್ದು ಈ ಅನುದಾನದಲ್ಲಿ ಒಂದು ಡ್ರೋಣ್‌ ಕ್ಯಾಮೆರಾ, ವಿಕಿರಣ ಮಾಪನ ಯಂತ್ರ, ಮೋಟಾರ್‌ ಚಾಲಿತ ಇನ್‌ಫ್ಲೇಟ್‌ ಬೋಟ್‌ ಸೇರಿದಂತೆ ಜಿಲ್ಲೆಗೆ ವಿಪತ್ತು ನಿರ್ವಹಣೆಗೆ ಅಗತ್ಯವಿರುವ ರಕ್ಷ ಣಾ ಸಲಕರಣೆಗಳನ್ನು ಖರೀದಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಹರೀಶ್‌ಕುಮಾರ್‌ ಕೆ. ತಿಳಿಸಿದ್ದಾರೆ.

Vijaya Karnataka 18 Jul 2019, 5:00 am
ಕಾರವಾರ : ಜಿಲ್ಲೆಯ ವಿಪತ್ತು ನಿರ್ವಹಣೆಗಾಗಿ ರಾಜ್ಯ ಸರ್ಕಾರ 50 ಲಕ್ಷ ರೂ. ವಿಶೇಷ ಅನುದಾನ ಬಿಡುಗಡೆ ಮಾಡಿದ್ದು ಈ ಅನುದಾನದಲ್ಲಿ ಒಂದು ಡ್ರೋಣ್‌ ಕ್ಯಾಮೆರಾ, ವಿಕಿರಣ ಮಾಪನ ಯಂತ್ರ, ಮೋಟಾರ್‌ ಚಾಲಿತ ಇನ್‌ಫ್ಲೇಟ್‌ ಬೋಟ್‌ ಸೇರಿದಂತೆ ಜಿಲ್ಲೆಗೆ ವಿಪತ್ತು ನಿರ್ವಹಣೆಗೆ ಅಗತ್ಯವಿರುವ ರಕ್ಷ ಣಾ ಸಲಕರಣೆಗಳನ್ನು ಖರೀದಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಹರೀಶ್‌ಕುಮಾರ್‌ ಕೆ. ತಿಳಿಸಿದ್ದಾರೆ.
Vijaya Karnataka Web release of grants
ಅನುದಾನ ಬಿಡುಗಡೆ


ಸಚಿವ ಆರ್‌.ವಿ.ದೇಶಪಾಂಡೆಯವರ ವಿಶೇಷ ಮುತುವರ್ಜಿಯಿಂದ ಸರಕಾರ 50 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದ್ದು ವಿಪತ್ತು ನಿರ್ವಹಣೆಗೆ ಸಂಬಂಧಿಸಿದಂತೆ ವಿವಿಧ ರಕ್ಷ ಣಾ ಸಲಕರಣೆಗಳನ್ನು ಖರೀದಿಸಲು ಈಗಾಗಲೇ ಟೆಂಡರ್‌ ಕರೆಯಲಾಗಿದೆ ಎಂದು ಅವರು ಬುಧವಾರ ತಿಳಿಸಿದರು.

ವಿಪತ್ತು ನಿರ್ವಹಣೆ ಸಂದರ್ಭದಲ್ಲಿ ಡ್ರೋಣ್‌ ಕ್ಯಾಮೆರಾದ ಅಗತ್ಯದ ಬಗ್ಗೆ ಪೊಲೀಸ್‌ ಇಲಾಖೆಯಿಂದ ಬೇಡಿಕೆ ಇತ್ತು. ಅದಕ್ಕಾಗಿ 13 ಲಕ್ಷ ರೂ. ಮೊತ್ತದ ಗುಣಮಟ್ಟದ ಚಿತ್ರೀಕರಣ ಮಾಡುವ ಸುಸಜ್ಜಿತ ಕ್ಯಾಮೆರಾ ಖರೀದಿಸಲಾಗುತ್ತಿದೆ.ಅದನ್ನು ಪೊಲೀಸ್‌ ಇಲಾಖೆ ನಿರ್ವಹಣೆಗೆ ನೀಡಲಾಗುವುದು ಎಂದು ಅವರು ವಿವರಿಸಿದರು.

ನದಿ ಅಥವಾ ನೀರಿನ ಅವಘಡ ಸಂದರ್ಭದಲ್ಲಿ ಇನ್‌ಫ್ಲೇಟ್‌ ಬೋಟ್‌ (ಗಾಳಿ ತುಂಬಿದ ದೋಣಿ) ಅಗತ್ಯವಿತ್ತು. ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ಈ ದೋಣಿಯನ್ನು ಖರೀದಿಸಲಾಗುತ್ತಿದೆ. ಅಲ್ಲದೆ ಕೈಗಾ ಅಣುವಿದ್ಯುತ್‌ ಸ್ಥಾವರದ ಸುತ್ತಮುತ್ತಲ ಪ್ರದೇಶದಲ್ಲಿ ವಿಕಿರಣ ಸಂಬಂಧಿಸಿದಂತೆ ಕೆಲವು ವದಂತಿಗಳು ಆಗಾಗ ಕೇಳಿಬರುತ್ತವೆ. ಕೈಗಾ ನಿರ್ವಹಣೆಯಲ್ಲಿ ವಿಕಿರಣ ಸೋರಿಕೆಯಂತಹ ಯಾವುದೇ ಅವಘಡಗಳು ಸಾಧ್ಯವಿಲ್ಲ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ವಿಕಿರಣ ಪ್ರಮಾಣವನ್ನು ಪರೀಕ್ಷೆ ಮಾಡಲು ಅಥವಾ ವದಂತಿ ಸಂದರ್ಭದಲ್ಲಿ ಪರೀಕ್ಷೆ ಕೈಗೊಳ್ಳಲು ವಿಕಿರಣ ಮಾಪನ ಯಂತ್ರವನ್ನು ಖರೀದಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಉಳಿದಂತೆ ಲೈಫ್‌ಜಾಕೆಟ್‌ಗಳು, ತುರ್ತು ಚಿಕಿತ್ಸಾ ಕಿಟ್‌ಗಳು ಸೇರಿದಂತೆ ವಿವಿಧ ರಕ್ಷ ಣಾ ಸಲಕರಣಗಳನ್ನು ಖರೀದಿಸಲಾಗುತ್ತಿದ್ದು ಟೆಂಡರ್‌ ಪ್ರಕ್ರಿಯೆ ಮುಗಿದಿದೆ. ಆಗಸ್ಟ್‌ 15ರ ಹೊತ್ತಿಗೆ ಖರೀದಿ ಪ್ರಕ್ರಿಯೆ ಮುಗಿದು ವಿಪ್ಪತ್ತು ನಿರ್ವಹಣಾ ವಿಭಾಗದಲ್ಲಿ ಸೇರ್ಪಡೆಯಾಗಲಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ