ಆ್ಯಪ್ನಗರ

ನೆಗೆಟಿವ್‌ ವರದಿ ಬಂದವರ ಬಿಡುಗಡೆ

ಯಲ್ಲಾಪುರ : ಗಂಟಲು ದ್ರವ ಮಾದರಿಯ ಪರೀಕ್ಷೆಯಲ್ಲಿನೆಗೆಟಿವ್‌ ವರದಿ ಬಂದಿರುವ ತಾಲೂಕಿನ ವಿವಿಧೆಡೆ ಕ್ವಾರೈಂಟೈನ್‌ನಲ್ಲಿಇಡಲಾಗಿದ್ದ ಶಂಕಿತರನ್ನು ಬಿಡುಗಡೆ ಮಾಡಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ನರೇಂದ್ರ ಪವಾರ್‌ ತಿಳಿಸಿದ್ದಾರೆ.

Vijaya Karnataka 29 May 2020, 5:00 am
ಯಲ್ಲಾಪುರ : ಗಂಟಲು ದ್ರವ ಮಾದರಿಯ ಪರೀಕ್ಷೆಯಲ್ಲಿನೆಗೆಟಿವ್‌ ವರದಿ ಬಂದಿರುವ ತಾಲೂಕಿನ ವಿವಿಧೆಡೆ ಕ್ವಾರೈಂಟೈನ್‌ನಲ್ಲಿಇಡಲಾಗಿದ್ದ ಶಂಕಿತರನ್ನು ಬಿಡುಗಡೆ ಮಾಡಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ನರೇಂದ್ರ ಪವಾರ್‌ ತಿಳಿಸಿದ್ದಾರೆ.
Vijaya Karnataka Web release of negative reporters
ನೆಗೆಟಿವ್‌ ವರದಿ ಬಂದವರ ಬಿಡುಗಡೆ


ಈ ಕುರಿತು ಗುರುವಾರ ಪ್ರಕಟಣೆ ನೀಡಿರುವ ಅವರು, ಪಟ್ಟಣದ ಮೊರಾರ್ಜಿ ಹಾಸ್ಟೆಲ್‌ನಲ್ಲಿದ್ದ ಇದ್ದ 21 ಜನರ ಪೈಕಿ 15 ಜನರ ಗಂಟಲು ದ್ರವದ ಪರಿಕ್ಷಾ ವರದಿ ನೆಗೆಟಿವ್‌ ಬಂದಿದ್ದು ಅವರನ್ನು ಬಿಡುಗಡೆಗೊಳಿಸಲಾಗಿದೆ. ಪಟ್ಟಣದ ಬಿಸಿಎಂ ಹಾಸ್ಟೇಲಿನಲ್ಲಿದ್ದ ಎಲ್ಲಾ9 ಜನರ ಗಂಟಲು ದ್ರವ ಪರಿಕ್ಷಾ ವರದಿ ನೆಗೆಟಿವ್‌ ಬಂದಿದ್ದು ಅವರನ್ನು ಬಿಡುಗಡೆಗೊಳಿಸಲಾಗಿದೆ. ಕಿರವತ್ತಿಯ ಬಿಸಿಎಂ ಹಾಸ್ಟೆಲ್‌ ನಲ್ಲಿದ್ದ 15 ಜನರಲ್ಲಿ4 ಜನರ ಸ್ವಾಬ್‌ ವರದಿ ನೆಗೆಟಿವ್‌ ಬಂದಿರುವುದರಿಂದ ಅವರನ್ನು ಬಿಡುಗಡೆಗೊಳಿಸಲಾಗಿದೆ. ಅದೇ ರೀತಿ ಕಿರವತ್ತಿಯ ಎಸ್‌.ಟಿ.ಎಸ್‌.ಟಿ ಹಾಸ್ಟೇಲ್‌ ನಲ್ಲಿಇದ್ದ 14 ಜನರಲ್ಲಿ8 ಜನರ ವರದಿ ನೆಗೆಟಿವ್‌ ಬಂದಿದ್ದು ಅವರು ಬಿಡುಗಡೆಗೊಂಡಿದ್ದಾರೆ.

ಬಿಡುಗಡೆಯಾದವರು ಆರೋಗ್ಯದಿಂದಿದ್ದು, ಯಾವುದೇ ರೋಗ ಲಕ್ಷಣಗಳನ್ನು ಹೊಂದಿರುವುದಿಲ್ಲ. ಬಹುತೇಕ ಜನರು 14 ದಿನಗಳ ಕ್ವಾರೈಂಟೈೕನ್‌ ಅವಧಿ ಮುಗಿಸಿದ್ದಾರೆ. ಉಳಿದ ಕೆಲವರಿಗೆ ಕಡ್ಡಾಯವಾಗಿ ಹೋಂ ಕ್ವಾರೈಂಟೈನ್‌ ನಲ್ಲಿಇರುವಂತೆ ಸೂಚಿಸಲಾಗಿದೆ. ಯಲ್ಲಾಪುರ ತಾಲೂಕಿನಲ್ಲಿಒಟ್ಟು 214 ಜನರು ಹೋಂ ಕ್ವಾರೈಂಟೇನ್‌ ನಲ್ಲಿದ್ದು, ಇದುವರೆಗೆ ಒಟ್ಟು 398 ಜನರ ಗಂಟಲು ದ್ರವ ಪರಿಕ್ಷೆ ನಡೆಸಲಾಗಿದ್ದು, ಅದರಲ್ಲಿ9 ಪಾಸಿಟಿವ್‌ ಹಾಗೂ 247 ನೆಗೆಟಿವ್‌ ಬಂದಿರುತ್ತದೆ. ಇನ್ನೂ 142 ಜನರ ಸ್ವಾಬ್‌ ವರದಿ ಬರುವುದು ಬಾಕಿ ಇದೆ ಎಂದು ವಿವರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ