ಆ್ಯಪ್ನಗರ

ರೈತರ ಬೇಡಿಕೆ ಈಡೇರಿಕೆಗೆ ಮನವಿ

ಮುಂಡಗೋಡ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ಅನ್ನದಾತ ಹಸಿರು ರೈತ ಸಮಿತಿಯವರು ತಹಸೀಲ್ದಾರ್‌ ಮೂಲಕ ಸೋಮವಾರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

Vijaya Karnataka 16 Apr 2019, 5:00 am
ಮುಂಡಗೋಡ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ಅನ್ನದಾತ ಹಸಿರು ರೈತ ಸಮಿತಿಯವರು ತಹಸೀಲ್ದಾರ್‌ ಮೂಲಕ ಸೋಮವಾರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
Vijaya Karnataka Web request farmers to meet demand
ರೈತರ ಬೇಡಿಕೆ ಈಡೇರಿಕೆಗೆ ಮನವಿ


ರೈತರು ದೇಶದ ಬೆನ್ನೇಲುಬು ಎಂದು ಹೇಳಿದರೂ ರೈತರ ಅಭಿವೃದ್ಧಿಗಾಗಿ ತಾವು ಶ್ರಮಿಸುತ್ತಿಲ್ಲ. ಇದೀಗ ಮುಂಗಾರು ಹಂಗಾಮು ಆಗಮಿಸುತ್ತಿದ್ದು ರೈತರಿಗೆ ಉತ್ತಮವಾದ ಬಿತ್ತನೆ ಬೀಜ ಹಾಗೂ ಗೋಬ್ಬರ, ಔಷಧಿಗಳನ್ನು ಸರಿಯಾದ ಸಮಯಕ್ಕೆ ರಿಯಾಯತಿ ದರದಲ್ಲಿ ಪೊರೈಸಬೇಕು. ಅಕಾಲಿಕ ಮಳೆಯಿಂದ ಹಾನಿ ಅನುಭವಿಸಿರುವ ಹಿಂಗಾರು ಬೆಳೆ ಬೆಳೆದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು, ಅತಿಕ್ರಮಣದಾರರಿಗೆ ಹಕ್ಕು ಪತ್ರ ವಿತರಿಸ ಬೇಕು, ರೈತರಿಗೆ ಕೊಟ್ಟ ಮಾತನ್ನು ಕೆಂದ್ರ ಹಾಗೂ ರಾಜ್ಯ ಸರಕಾರ ಉಳಿಸಿಕೋಳ್ಳಬೇಕು ಎಂದು ಅವರು ನೀಡಿದ ಮನವಿಯಲ್ಲಿ ತಿಳಿಸಿದ್ದಾರೆ.

ಈ ವೇಳೆ ಸಮಿತಿಯ ರಾಜ್ಯಾಧ್ಯಕ್ಷ ಶರೀಪ ಮುಗಳಿಕಟ್ಟಿ, ವೈ.ವೈ.ಭಜಂತ್ರಿ, ಎಂ.ಡಿ.ನಧಾಪ್‌, ಬಾಲಕೃಷ್ಣ ಪೀಸೆ, ಗುಡ್ಡಪ್ಪ ವಾಸನ್‌, ಎಸ್‌.ಎಫ್‌.ದುಂಡಸಿ, ಬಸವಂತಪ್ಪ ಮಳಗಿ, ಶಂಬು ಹುಲಗೂರ, ಗಾಣಿಗೇರ. ಮುಂತಾದವರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ