ಆ್ಯಪ್ನಗರ

ತಪ್ಪಿತಸ್ಥರ ವಿರದ್ಧ ಕ್ರಮಕ್ಕೆ ಆಗ್ರಹ

ಶಿರಸಿ : ರಾಯಚೂರು ಮಾನ್ವಿ ತಾಲೂಕಿನ ಚೀಕಲಪರ್ವಿಯಲ್ಲಿ ಗ್ರಾಮ ಲೆಕ್ಕಿಗನ ಮೇಲೆ ಮರಳು ಲಾರಿ ಹಾಯಿಸಿ ಸಾಯಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ತಾಲೂಕು ಕಂದಾಯ ನೌಕರರ ಸಂಘ ಆಗ್ರಹಿಸಿದೆ.

Vijaya Karnataka 25 Dec 2018, 5:00 am
ಶಿರಸಿ : ರಾಯಚೂರು ಮಾನ್ವಿ ತಾಲೂಕಿನ ಚೀಕಲಪರ್ವಿಯಲ್ಲಿ ಗ್ರಾಮ ಲೆಕ್ಕಿಗನ ಮೇಲೆ ಮರಳು ಲಾರಿ ಹಾಯಿಸಿ ಸಾಯಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ತಾಲೂಕು ಕಂದಾಯ ನೌಕರರ ಸಂಘ ಆಗ್ರಹಿಸಿದೆ.
Vijaya Karnataka Web request the offense of the guilty
ತಪ್ಪಿತಸ್ಥರ ವಿರದ್ಧ ಕ್ರಮಕ್ಕೆ ಆಗ್ರಹ


ಸಂಘಟನೆ ಪದಾಧಿಕಾರಿಗಳು, ಸದಸ್ಯರು ಸೋಮವಾರ ಸಹಾಯಕ ಆಯುಕ್ತರ ಕಚೇರಿಗೆ ತೆರಳಿ ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ಅವರಿಗೆ ಮನವಿ ಕಳುಹಿಸಿದರು. ಕರ್ತವ್ಯನಿರತ ಗ್ರಾಮ ಲೆಕ್ಕಿಗ ಸಾಹೇಬ ಪಟೇಲ್‌ ಅಕ್ರಮವಾಗಿ ಮರಳು ಸಾಗಾಣಿಕೆ ತಡೆಗಟ್ಟಲು ಹೋದ ಸಂದರ್ಭದಲ್ಲಿ ಅವರ ಮೇಲೆ ಲಾರಿ ಹಾಯಿಸಿ ಪ್ರಾಣ ತೆಗೆದಿರುವುದು ಖಂಡನೀಯ. ಈ ಸಾವಿನ ಹಿಂದೆ ಸಾಕಷ್ಟು ಸಂಶಯಗಳಿವೆ. ಸೂಕ್ತ ತನಿಖೆ ನಡೆಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ.

ಕರ್ತವ್ಯ ನಿರ್ವಹಿಸುವಾಗ ಇಂತಹ ಘಟನೆಗಳು ನಡೆದಾಗ ಪೊಲೀಸ್‌ ಇಲಾಖೆಯಲ್ಲಿ ವಿಶೇಷವಾಗಿ ಹೆಚ್ಚಿನ ಪರಿಹಾರ ನೀಡುವ ವ್ಯವಸ್ಥೆಯಿದ್ದು ಅದೇ ಮಾದರಿಯಲ್ಲಿ ಈ ಮೃತ ಕುಟುಂಬದವರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಲಾಗಿದೆ.

ರಾಜ್ಯದಲ್ಲಿ ಇದೇ ಮಾದರಿಯಲ್ಲಿ ಅಕ್ರಮ ಮರಳು ದಂಧೆಕೊರರು ಕಂದಾಯ ನೌಕರರ ವಿರುದ್ಧ ದೌರ್ಜನ್ಯ ಎಸಗಿದ್ದಾರೆ. ಈ ಕೃತ್ಯಗಳಿಂದ ನೌಕರರು ನಿರ್ಭಿತಿಯಿಂದ ಕೆಲಸ ನಿರ್ವಹಿಸಲು ಕಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ವ್ಯಾಪ್ತಿಗೆ ಒಳಪಡದ ಅಕ್ರಮ ಮರಳು ಸಾಗಾಣಿಕೆ ನಿಷೇಧಿಸುವ ಬಗ್ಗೆ ನಿಯಮಗಳನ್ನು ರೂಪಿಸಿ ಕಂದಾಯ ಅಧಿಕಾರಿ ಹಾಗೂ ನೌಕರರನ್ನು ಈ ಕೆಲಸದಿಂದ ವಿಮುಕ್ತಿಗೊಳಿಸಲು ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಲಾಗಿದೆ.

ಶಿರಸ್ತೇದಾರ ಬಿ.ಎಲ್‌.ದಾಸರ, ಅಣ್ಣಪ್ಪ ಮಡಿವಾಳ, ಕಂದಯ ನಿರೀಕ್ಷ ಕ ಜಿ.ಎಲ್‌.ಶ್ಯಾಮಸುಂದರ, ಉಪತಹಸೀಲ್ದಾರ ಎಸ್‌.ಎಂ.ಹೆಗಡೆ, ಯು.ಎಂ.ಮಠ, ಜನಾರ್ಧನ ಶೆಟ್ಟಿ, ಸುರೇಖಾ, ಮಂಜುಳಾ ನಾಯ್ಕ, ವಿದ್ಯಾ ಮುಂತಾದವರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಕೈಗೆ ಕಪ್ಪು ಪಟ್ಟಿ ಧರಿಸಿ ಘಟನೆಯನ್ನು ಖಂಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ