ಆ್ಯಪ್ನಗರ

ಶನಿ ದೋಷ ನಿವಾರಣೆಗೆ ನೀಲ ಉಂಗುರಕ್ಕೆ ಮೊರೆ

ಕಾರವಾರ : ಆರು ವರ್ಷಗಳಲ್ಲಿ ಸತತ ಮೂರು ಚುನಾವಣೆಗಳ ಸೋಲಿನಿಂದ ಕಂಗೆಟ್ಟಿರುವ ಮಾಜಿ ಸಚಿವ, ಜೆಡಿಎಸ್‌ ಮುಖಂಡ ಆನಂದ ಅಸ್ನೋಟಿಕರ್‌ಗೆ ಶನಿ ದೋಷ ತಾಗಿದೆಯಂತೆ. ದೋಷ ಪರಿಹಾರಕ್ಕಾಗಿ ಅವರೀಗ ಬರೋಬ್ಬರಿ 50 ಲಕ್ಷ ರೂ. ಮೌಲ್ಯದ ನೀಲ ಹರಳಿನ ಉಂಗುರಕ್ಕೆ ಮೊರೆ ಹೋಗಿದ್ದಾರೆ.

Vijaya Karnataka 28 May 2019, 5:00 am
ಕಾರವಾರ : ಆರು ವರ್ಷಗಳಲ್ಲಿ ಸತತ ಮೂರು ಚುನಾವಣೆಗಳ ಸೋಲಿನಿಂದ ಕಂಗೆಟ್ಟಿರುವ ಮಾಜಿ ಸಚಿವ, ಜೆಡಿಎಸ್‌ ಮುಖಂಡ ಆನಂದ ಅಸ್ನೋಟಿಕರ್‌ಗೆ ಶನಿ ದೋಷ ತಾಗಿದೆಯಂತೆ. ದೋಷ ಪರಿಹಾರಕ್ಕಾಗಿ ಅವರೀಗ ಬರೋಬ್ಬರಿ 50 ಲಕ್ಷ ರೂ. ಮೌಲ್ಯದ ನೀಲ ಹರಳಿನ ಉಂಗುರಕ್ಕೆ ಮೊರೆ ಹೋಗಿದ್ದಾರೆ.
Vijaya Karnataka Web KWR-27 GURUDATT 3
ನೀಲ ಹರಳಿನ ಉಂಗುರ ಧರಿಸಿರುವ ಆನಂದ ಅಸ್ನೋಟಿಕರ್‌


''2013 ಮತ್ತು 18ರ ವಿಧಾನಸಭಾ ಚುನಾವಣೆ ಹಾಗೂ ಪ್ರಸಕ್ತ ಲೋಕಸಭೆ ಚುನಾವಣೆ ಸೋಲಿನ ಬಳಿಕ ಜ್ಯೋತಿಷಿಗಳ ಬಳಿ ಕೇಳಲಾಗಿ ಜಾತಕದಲ್ಲಿ ಶನಿ ದೋಷ ಇರುವುದಾಗಿ ತಿಳಿಸಿದ್ದಾರೆ. ಶನಿ ದೋಷ ನಿವಾರಣೆಗೆ ಅವರ ಸಲಹೆಯಂತೆ ನೀಲ ಹರಳಿನ ಉಂಗುರ ಧರಿಸಿದ್ದೇನೆ'' ಎಂದು ಆನಂದ ಅಸ್ನೋಟಿಕರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

50 ಲಕ್ಷ ರೂ. ಮೌಲ್ಯದ್ದು

ಆನಂದ ಅಸ್ನೋಟಿಕರ್‌ ಧರಿಸಿರುವ ಉಂಗುರ 50 ಲಕ್ಷ ರೂ. ಮೌಲ್ಯದ್ದಾಗಿದೆ. ಉಂಗುರವನ್ನು ಕಾಶ್ಮೀರದಿಂದ ವಿಶೇಷವಾಗಿ ಮಾಡಿಸಿ ತರಲಾಗಿದೆ. ''ಮೊದಲು ಆನಂದ ಅವರು ನವರತ್ನ ಹರಳಿನ ಉಂಗುರವೊಂದನ್ನು ಧರಿಸುತ್ತಿದ್ದೆ. ಅದನ್ನು ತೆಗೆದು ಹಾಕಿ ನೀಲ ಮಣಿ ಉಂಗುರ ಧರಿಸಲು ಜ್ಯೋತಿಷಿಗಳು ಹೇಳಿದ್ದರು. ಹಾಗಾಗಿ ನವರತ್ನ ಉಂಗುರ ತೆಗೆದು ಹಾಕಿದ್ದೇನೆ. ನೀಲ ಹರಳಿನ ಉಂಗುರಕ್ಕೆ ಹಾಲಿನ ಅಭಿಷೇಕ ಮಾಡಿ ಧರಿಸಿದ್ದೇನೆ'' ಎಂದು ಆನಂದ ಹೇಳಿದರು.

ಆರ್‌ವಿಡಿಯಿಂದ ನಿರೀಕ್ಷೆ ಇತ್ತು

ಲೋಕಸಭಾ ಚುನಾವಣೆಯ ಸೋಲಿನ ಬಗ್ಗೆ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವ ಆರ್‌. ವಿ. ದೇಶಪಾಂಡೆ ಮನಃಸ್ಪೂರ್ವಕವಾಗಿ ಪೂರ್ಣ ಪ್ರಮಾಣದಲ್ಲಿ ಪ್ರಚಾರ ಮಾಡಲಿಲ್ಲ. ಹಾಗಂತ ಅವರು ನನ್ನ ವಿರುದ್ಧವಾಗೇನೂ ಕೆಲಸ ಮಾಡಿಲ್ಲ. ಆದರೆ ದೇಶಪಾಂಡೆ ಜಿಲ್ಲಾ ಉಸ್ತುವಾರಿ ಸಚಿವರ ಸ್ಥಾನದಲ್ಲಿ ನಿಂತು ಇನ್ನಷ್ಟು ಹೆಚ್ಚು ಪ್ರಚಾರ ಮಾಡಬಹುದಿತ್ತು. ರಾಜ್ಯದ ಎಲ್ಲ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಪಕ್ಷ ಚುನಾವಣೆ ಪ್ರಚಾರದಲ್ಲಿ ಜೆಡಿಎಸ್‌ಗೆ ಸರಿಯಾದ ಸಹಕಾರ ನೀಡಲಿಲ್ಲ. ಕಾಂಗ್ರೆಸ್‌ ಪೂರ್ಣ ಸಹಕಾರ ನೀಡಿದ್ದರೆ ಜೆಡಿಎಸ್‌ಗೆ 4-5 ಸೀಟ್‌ ಗೆಲ್ಲುವ ಅವಕಾಶವಿತ್ತು ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ