ಆ್ಯಪ್ನಗರ

ಕಂದಾಯ ನಿರೀಕ್ಷಕ ಎಸಿಬಿ ಬಲೆಗೆ

ಜೋಯಿಡಾ (ಉತ್ತರ ಕನ್ನಡ) : ಜಮೀನು ವಾಟನಿ ಮಾಡಿ ಕೊಡಲು ಮಹಿಳೆಯಿಂದ ಲಂಚ ಪಡೆಯುತ್ತಿದ್ದ ರಾಮನಗರ ಕಂದಾಯ ನಿರೀಕ್ಷ ಕ ಎ.ವಿ.ಪಾಟೀಲ್‌ ಬುಧವಾರ ಎಸಿಬಿ ಬಲೆಗೆ ಬಿದ್ದಿದ್ದಾರೆ.

Vijaya Karnataka 30 May 2019, 5:00 am
ಜೋಯಿಡಾ (ಉತ್ತರ ಕನ್ನಡ) : ಜಮೀನು ವಾಟನಿ ಮಾಡಿ ಕೊಡಲು ಮಹಿಳೆಯಿಂದ ಲಂಚ ಪಡೆಯುತ್ತಿದ್ದ ರಾಮನಗರ ಕಂದಾಯ ನಿರೀಕ್ಷ ಕ ಎ.ವಿ.ಪಾಟೀಲ್‌ ಬುಧವಾರ ಎಸಿಬಿ ಬಲೆಗೆ ಬಿದ್ದಿದ್ದಾರೆ.
Vijaya Karnataka Web revenue inspector acb trap
ಕಂದಾಯ ನಿರೀಕ್ಷಕ ಎಸಿಬಿ ಬಲೆಗೆ


ರಾಮನಗರದ ಶೈಲಾ ಭೀಮಾ ಸೋಲೆಕರ ಎಂಬ ಮಹಿಳೆ ತನ್ನ ಗಂಡನ ಹೆಸರಿಗೆ ಇರುವ ಜಮೀನಿನ ವಾಟನಿ ಮಾಡಿಸಲು ಕಳೆದ ಅನೇಕ ದಿನಗಳಿಂದ ಕಂದಾಯ ನಿರೀಕ್ಷ ಕ ಕಚೇರಿಗೆ ಅಲೆದಾಡುತ್ತಿದ್ದರು. ಪತಿ ಪಾಶ್ರ್ವವಾಯು ಪೀಡಿತರಾಗಿದ್ದರಿಂದ ಮನೆಯ ಎಲ್ಲ ಜವಾಬ್ದಾರಿ ಇವರ ಮೇಲೆಯೇ ಇತ್ತು.

ಮಂಗಳವಾರವೂ ಶೈಲಾ ನಾಡಕಚೇರಿಗೆ ಬಂದು ವಿಭಾಗ ಪತ್ರ ಮಾಡಿಕೊಡುವಂತೆ ವಿನಂತಿಸಿದ್ದಾರೆ. ಆಗ ಕಂದಾಯ ನಿರೀಕ್ಷ ಕ ಪಾಟೀಲ್‌ 2 ಸಾವಿರ ರೂ. ಲಂಚ ಕೇಳಿದ್ದಾರೆ. ನಂತರ ಈ ಮಹಿಳೆ ಕಾಳಿ ಬ್ರಿಗೇಡ್‌ ಸಂಚಾಲಕ ರವಿ ರೆಡಕರ ಹಾಗೂ ವಕೀಲರಾದ ಸುನಿಲ ದೇಸಾಯಿ, ಹರೀಶ್‌ ಭಟ್‌, ನಾರಾಯಣ ಹೆಬ್ಬಾರ ಇವರನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದಾರೆ. ಆಗ ಕಾಳಿ ಬ್ರೀಗೆಡ್‌ನ ಮುಖ್ಯಸ್ಥರು ಎಸಿಬಿಗೆ ಮಾಹಿತಿ ನೀಡಿದ್ದಾರೆ. ರಾಮನಗರಕ್ಕೆ ಬುಧವಾರ ಬಂದ ಎಸಿಬಿ ತಂಡದವರು ದಾಳಿ ನಡೆಸಿದ್ದಾರೆ.

ಕಾರವಾರ ಎಸಿಬಿ ಡಿವೈಎಸ್ಪಿ ಎಸ್‌.ವಿ. ಗಿರೀಶ, ಪಿಐ ಸದಾಶಿವ ಕಟ್ಟಿಮನಿ, ಸಿಬ್ಬಂದಿಗಳಾದ ರಾಜೇಶ್‌, ಪ್ರಭು, ಶ್ರೀಕೃಷ್ಣ ಬಾಳೆಗದ್ದೆ, ಪ್ರಸಾದ ನಾಯ್ಕ, ಉಷಾ ಗೌಡ, ಮಂಜುನಾಥ ಮಡಿವಾಳ ಮುಂತಾದವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ