ಆ್ಯಪ್ನಗರ

ಬಂಡುಗಳು ಒಡೆದು ಕಗ್ಗಬತ್ತ ಕೃಷಿಗೆ ಅಪಾಯ

ಕುಮಟಾ : ಆಧುನಿಕ ಕೃಷಿ ಪದ್ದತಿಯ ಮೂಲಕ ರೈತರು ಹೆಚ್ಚಿನ ಇಳುವರಿ ಪಡೆಯಲು ಅನುಕೂಲವಾಗುವಂತೆ ಅಧಿಕಾರಿಗಳು ರೈತರಿಗೆ ಸಕಾಲದಲ್ಲಿಸೂಕ್ತ ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸಬೇಕು ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.

Vijaya Karnataka 3 Nov 2019, 5:00 am
ಕುಮಟಾ : ಆಧುನಿಕ ಕೃಷಿ ಪದ್ದತಿಯ ಮೂಲಕ ರೈತರು ಹೆಚ್ಚಿನ ಇಳುವರಿ ಪಡೆಯಲು ಅನುಕೂಲವಾಗುವಂತೆ ಅಧಿಕಾರಿಗಳು ರೈತರಿಗೆ ಸಕಾಲದಲ್ಲಿಸೂಕ್ತ ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸಬೇಕು ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.
Vijaya Karnataka Web risk to farmland
ಬಂಡುಗಳು ಒಡೆದು ಕಗ್ಗಬತ್ತ ಕೃಷಿಗೆ ಅಪಾಯ


ತಾಲೂಕಿನ ಬೆಟ್ಕುಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವಾರದಲ್ಲಿಎಂಎಸ್‌ ಸ್ವಾಮಿನಾಥನ್‌ ರಿಸರ್ಚ್ ಫೌಂಡೇಶನ ಚೆನೈ, ಕೃಷಿ ವಿಶ್ವವಿದ್ಯಾಲಯ ಧಾರವಾಡ, ಕೃಷಿ ವಿಸ್ತರಣಾ ಕೇಂದ್ರ ಕುಮಟಾ, ಕೃಷಿ ಇಲಾಖೆ, ಕರ್ನಾಟಕ ಸರಕಾರ ಹಾಗೂ ಬೆಟ್ಕುಳಿ ಮತ್ತು ಮಾಣಿಕಟ್ಟಾ ಕಗ್ಗಬತ್ತ ಬೆಳೆಗಾರರ ಒಕ್ಕೂಟ ಇವರ ಸಂಯುಕ್ತ ಆಶ್ರಯದಲ್ಲಿನಡೆದ ಕಗ್ಗಬತ್ತದ ಕ್ಷೇತ್ರೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಉಪ್ಪು ನೀರು ನುಗ್ಗದಂತೆ ನಿರ್ಮಿಸಿದ ಬಂಡುಗಳು ಒಡೆದು ಕಗ್ಗಬತ್ತ ಕೃಷಿಗೆ ಅಪಾಯ ಎದುರಾಗಿದೆ. ಕಗ್ಗಬತ್ತದ ಅವಶ್ಯಕತೆ, ಬೇಡಿಕೆಗಳ ಮಾಹಿತಿಯನ್ನು ರೈತರ ಜೊತೆ ಸಂವಾದದ ಮೂಲಕ ಜಾಗೃತಿ ಮೂಡಿಸಬೇಕಾಗಿದೆ. ರೈತರಿಗೆ ಕಗ್ಗಬತ್ತದ ಉಚಿತ ಬೀಜ ವಿತರಿಸಿ, ಸೂಕ್ತ ಮಾಹಿತಿ ನೀಡಿ ಅಳಿವಿನ ಅಂಚಿನಲ್ಲಿರುವ ಕಗ್ಗಬತ್ತ ಕೃಷಿಗೆ ಉತ್ತೇಜನ ನೀಡಬೇಕಾಗಿದೆ ಎಂದರು.

ಜಿಪಂ ಸದಸ್ಯ ಪ್ರದೀಪ ನಾಯಕ ಮಾತನಾಡಿ, ಸೂಕ್ತ ಕೃಷಿ ಚಟುವಟಿಕೆಗಳ ಮೂಲಕ ಕಗ್ಗ ಬೆಳೆಸಿದರೆ ಅದನ್ನು ಉಳಿಸಿಕೊಳ್ಳಬಹುದು ಎಂದರು.

ಚೆನೈ ಎಂಎಸ್‌ ಸ್ವಾಮಿನಾಥನ್‌ ರಿಸರ್ಚ್ ಫೌಂಡೇಶನನ ಡಾ. ಜಿ.ಎನ್‌. ಹರಿಹರನ್‌ ಮಾತನಾಡಿ, ಕೇರಳದ ಪಕ್ಕಾಲಿಯಲ್ಲಿಕಗ್ಗ ಮಾದರಿಯ ಬತ್ತ ಕಾಣಸಿಗುತ್ತದೆ. ಬಿಟ್ಟರೆ ಇಲ್ಲಿಯ ಕಗ್ಗಬತ್ತ ಅತ್ಯಂತ ವಿಶಿಷ್ಟತೆಯನ್ನು ಹೊಂದಿದೆ. ಇಂತಹ ಬತ್ತದ ತಳಿಯನ್ನು ವೃದ್ಧಿಸಲು ರೈತರು ಮುಂದಾಗಬೇಕು ಎಂದರು. ಕೃಷಿ ಡಿಪೊ್ಲಮಾ ಕಾಲೇಜಿನ ಪ್ರಾಚಾರ್ಯ ಜಿ.ವಿ. ನಾಯ್ಕ ಮಾತನಾಡಿ, ಉಪ್ಪು ನೀರಿನಲ್ಲಿಬೆಳೆಯುವ ಬತ್ತದ ಕೃಷಿ ಅಳಿವಿನ ಅಂಚಿನಲ್ಲಿದೆ. ಇದನ್ನು ಉಳಿಸಿಕೊಳ್ಳದಿದ್ದರೆ ಇಂತಹ ಪ್ರದೇಶದಲ್ಲಿಯಾವ ತಳಿಯೂ ಬೆಳೆಸಲು ಸಾಧ್ಯವಿಲ್ಲಎಂದರು.

ಬರ್ಗಿ ಗ್ರಾಪಂ ಅಧ್ಯಕ್ಷ ರಾಮಾ ಪಟಗಾರ ಅಧ್ಯಕ್ಷತೆ ವಹಿಸಿದ್ದರು. ತಾಪಂ ಸದಸ್ಯ ಈಶ್ವರ ನಾಯ್ಕ, ಧಾರವಾಡ ಕೃಷಿ ವಿಶ್ವವಿದ್ಯಾಲಯದ ಸಹ ಸಂಶೋದನಾ ನಿರ್ದೇಶಕ ಎಂ.ಸಿ. ವಾಲಿ, ಮಾಣಿಕಟ್ಟಾ ಕಗ್ಗಬತ್ತದ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಸಿ.ಆರ್‌. ನಾಯ್ಕ, ಕೃಷಿ ಅಧಿಕಾರಿಗಳಾದ ಜಿ.ಆರ್‌. ಹೆಗಡೆ, ಅಕ್ರಮ, ಕೃಷಿಕ ರಾಮನಾಥ ನಾಯ್ಕ ಉಪಸ್ಥಿತರಿದ್ದರು. ಡಾ. ಎನ್‌.ಜಿ. ಹನುಮರಟ್ಟಿ ಸ್ವಾಗತಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ