ಗೋಕರ್ಣ: ಇಲ್ಲಿನ ಬಸ್ ನಿಲ್ದಾಣಕ್ಕೆ ಹೋಗುವ ಗಂಜಿಗದ್ದೆ ರಸ್ತೆಯು ಜೋರಾಗಿ ಸುರಿದ ಮಳೆಯಿಂದಾಗಿ ನೀರು ತುಂಬಿ ಪುಟ್ಟ ಕೆರೆಯಂತೆ ಗೋಚರಿಸುತ್ತಿದೆ.
ಬೆಳಗ್ಗಿನಿಂದ ಸಂಜೆಯವರೆಗೂ ಬೀಳುವ ಮಳೆಗೆ ರಸ್ತೆಯಲ್ಲಿ ಮೊಣಕಾಲಿನವರೆಗೆ ನೀರು ನಿಲ್ಲುತ್ತಿದೆ. ಹೀಗೆ ನೀರು ತುಂಬಿದಾಗ ರಸ್ತೆ ಮತ್ತು ಚರಂಡಿ ಕಣ್ಣಿಗೆ ಕಾಣದಾಗಿ ಎಷ್ಟೋ ಜನ ಹಾಗೂ ಜಾನುವಾರುಗಳು ಚರಂಡಿಗೆ ಬಿದ್ದ ಘಟನೆಗಳು ಸಾಕಷ್ಟು ವರದಿಯಾಗಿವೆ. ಈ ರಸ್ತೆಯಲ್ಲಿ ಜನರು ಸಂಚರಿಸಲು ಭಯಪಡುವಂತಾಗಿದೆ. ರಸ್ತೆಯ ಹತ್ತಿರದಲ್ಲೇ ಇರುವ ಕಾಲುವೆಗೆ ದನವೊಂದು ಬಿದ್ದು ಕಾಲುವೆಯಲ್ಲಿ ಕೊಚ್ಚಿಹೋಗಿ ಸಾವನ್ನಪ್ಪಿದ ಘಟನೆ ಇತ್ತೀಚೆಗೆ ನಡೆದಿದೆ. ಈ ಬಾರಿ ಮಳೆಗಾಲದ ಮುಂಚೆ ಚರಂಡಿ ಹೂಳೆತ್ತುವ ಕಾರ್ಯವೂ ನಡೆದಿಲ್ಲ.
ಗೋಕರ್ಣದ ಮುಖ್ಯ ರಸ್ತೆಯ ಸ್ಥಿತಿ ಹೀಗಾದರೂ ಸಂಬಂಧಿಸಿದ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಇತ್ತ ಗಮನ ಹರಿಸುತ್ತಿಲ್ಲ. ಶೀಘ್ರವಾಗಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೆಂದು ಜನರ ಅಭಿಪ್ರಾಯವಾಗಿದೆ.
ಬೆಳಗ್ಗಿನಿಂದ ಸಂಜೆಯವರೆಗೂ ಬೀಳುವ ಮಳೆಗೆ ರಸ್ತೆಯಲ್ಲಿ ಮೊಣಕಾಲಿನವರೆಗೆ ನೀರು ನಿಲ್ಲುತ್ತಿದೆ. ಹೀಗೆ ನೀರು ತುಂಬಿದಾಗ ರಸ್ತೆ ಮತ್ತು ಚರಂಡಿ ಕಣ್ಣಿಗೆ ಕಾಣದಾಗಿ ಎಷ್ಟೋ ಜನ ಹಾಗೂ ಜಾನುವಾರುಗಳು ಚರಂಡಿಗೆ ಬಿದ್ದ ಘಟನೆಗಳು ಸಾಕಷ್ಟು ವರದಿಯಾಗಿವೆ. ಈ ರಸ್ತೆಯಲ್ಲಿ ಜನರು ಸಂಚರಿಸಲು ಭಯಪಡುವಂತಾಗಿದೆ. ರಸ್ತೆಯ ಹತ್ತಿರದಲ್ಲೇ ಇರುವ ಕಾಲುವೆಗೆ ದನವೊಂದು ಬಿದ್ದು ಕಾಲುವೆಯಲ್ಲಿ ಕೊಚ್ಚಿಹೋಗಿ ಸಾವನ್ನಪ್ಪಿದ ಘಟನೆ ಇತ್ತೀಚೆಗೆ ನಡೆದಿದೆ. ಈ ಬಾರಿ ಮಳೆಗಾಲದ ಮುಂಚೆ ಚರಂಡಿ ಹೂಳೆತ್ತುವ ಕಾರ್ಯವೂ ನಡೆದಿಲ್ಲ.
ಗೋಕರ್ಣದ ಮುಖ್ಯ ರಸ್ತೆಯ ಸ್ಥಿತಿ ಹೀಗಾದರೂ ಸಂಬಂಧಿಸಿದ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಇತ್ತ ಗಮನ ಹರಿಸುತ್ತಿಲ್ಲ. ಶೀಘ್ರವಾಗಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೆಂದು ಜನರ ಅಭಿಪ್ರಾಯವಾಗಿದೆ.