ಸಿದ್ದಾಪುರ : ಶಿರಸಿ-ಸಿದ್ದಾಪುರ ಮುಖ್ಯ ರಸ್ತೆಯು ಸಂಪೂರ್ಣ ಹಾಳಾಗಿದ್ದು ರಸ್ತೆ ಮಧ್ಯದಲ್ಲಿರುವ ಆಳದ ಹೊಂಡಗಳು ವಾಹನಸವಾರರಿಗೆ ಅಪಾಯಕಾರಿಯಾಗಿವೆ. ನಾಣಿಕಟ್ಟಾ ಸಮೀಪದ ತ್ಯಾಗಲಿಯಲ್ಲಿ ಎರಡು ಅಡಿ ಆಳದ ಮೂರ್ನಾಲ್ಕು ಹೊಂಡಗಳಿದ್ದು ಸ್ಥಳೀಯರು ಈ ಹೊಂಡಗಳಿಂದ ಆಗುವ ಅಪಾಯ ತಪ್ಪಿಸಲು ಬೇಲಿ ನಿರ್ಮಿಸಿದ್ದಾರೆ. ಆದರೆ ರಾತ್ರಿಯ ಸಮಯದಲ್ಲಿ ಈ ಬೇಲಿಯೂ ವಾಹನ ಸವಾರರಿಗೆ ಅಪಾಯಕಾರಿಯಾಗಿಯೇ ಇದೆ. ಮಳೆಗಾಲ ಪ್ರಾರಂಭವಾಗಿ ಹದಿನೈದು ದಿನವಾಗುತ್ತ ಬಂದಿದ್ದು ಲೋಕೋಪಯೋಗಿ ಇಲಾಖೆ ರಸ್ತೆ ಹೊಂಡ ಮುಚ್ಚುವ ಬಗ್ಗೆಯಾಗಲಿ ಗಟಾರ ಸ್ವಚ್ಛಗೊಳಿಸುವ ಬಗ್ಗೆಯಾಗಲಿ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಕೂಡಲೇ ಇಂತಹ ಹೊಂಡಗಳನ್ನು ಮುಚ್ಚುವ ಮೂಲಕ ವಾಹನ ಸವಾರರ ಪ್ರಾಣ ಉಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ
ರಸ್ತೆ ಗುಂಡಿಗೆ ಬೇಲಿ: ಅಪಾಯ ತಪ್ಪಿಸುವ
ಸಿದ್ದಾಪುರ : ಶಿರಸಿ-ಸಿದ್ದಾಪುರ ಮುಖ್ಯ ರಸ್ತೆಯು ಸಂಪೂರ್ಣ ಹಾಳಾಗಿದ್ದು ರಸ್ತೆ ಮಧ್ಯದಲ್ಲಿರುವ ಆಳದ ಹೊಂಡಗಳು ವಾಹನಸವಾರರಿಗೆ ಅಪಾಯಕಾರಿಯಾಗಿವೆ. ನಾಣಿಕಟ್ಟಾ ಸಮೀಪದ ತ್ಯಾಗಲಿಯಲ್ಲಿ ಎರಡು ಅಡಿ ಆಳದ ಮೂರ್ನಾಲ್ಕು ಹೊಂಡಗಳಿದ್ದು ಸ್ಥಳೀಯರು ಈ ಹೊಂಡಗಳಿಂದ ಆಗುವ ಅಪಾಯ ತಪ್ಪಿಸಲು ಬೇಲಿ ನಿರ್ಮಿಸಿದ್ದಾರೆ. ಆದರೆ ರಾತ್ರಿಯ ಸಮಯದಲ್ಲಿ ಈ ಬೇಲಿಯೂ ವಾಹನ ಸವಾರರಿಗೆ ಅಪಾಯಕಾರಿಯಾಗಿಯೇ ಇದೆ. ಮಳೆಗಾಲ ಪ್ರಾರಂಭವಾಗಿ ಹದಿನೈದು ದಿನವಾಗುತ್ತ ಬಂದಿದ್ದು ಲೋಕೋಪಯೋಗಿ ಇಲಾಖೆ ರಸ್ತೆ ಹೊಂಡ ಮುಚ್ಚುವ ಬಗ್ಗೆಯಾಗಲಿ ಗಟಾರ ಸ್ವಚ್ಛಗೊಳಿಸುವ ಬಗ್ಗೆಯಾಗಲಿ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಕೂಡಲೇ ಇಂತಹ ಹೊಂಡಗಳನ್ನು ಮುಚ್ಚುವ ಮೂಲಕ ವಾಹನ ಸವಾರರ ಪ್ರಾಣ ಉಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ
Vijaya Karnataka 10 Jul 2019, 5:00 am