ಆ್ಯಪ್ನಗರ

ರಸ್ತೆ ಗುಂಡಿಗೆ ಬೇಲಿ: ಅಪಾಯ ತಪ್ಪಿಸುವ

ಸಿದ್ದಾಪುರ : ಶಿರಸಿ-ಸಿದ್ದಾಪುರ ಮುಖ್ಯ ರಸ್ತೆಯು ಸಂಪೂರ್ಣ ಹಾಳಾಗಿದ್ದು ರಸ್ತೆ ಮಧ್ಯದಲ್ಲಿರುವ ಆಳದ ಹೊಂಡಗಳು ವಾಹನಸವಾರರಿಗೆ ಅಪಾಯಕಾರಿಯಾಗಿವೆ. ನಾಣಿಕಟ್ಟಾ ಸಮೀಪದ ತ್ಯಾಗಲಿಯಲ್ಲಿ ಎರಡು ಅಡಿ ಆಳದ ಮೂರ್ನಾಲ್ಕು ಹೊಂಡಗಳಿದ್ದು ಸ್ಥಳೀಯರು ಈ ಹೊಂಡಗಳಿಂದ ಆಗುವ ಅಪಾಯ ತಪ್ಪಿಸಲು ಬೇಲಿ ನಿರ್ಮಿಸಿದ್ದಾರೆ. ಆದರೆ ರಾತ್ರಿಯ ಸಮಯದಲ್ಲಿ ಈ ಬೇಲಿಯೂ ವಾಹನ ಸವಾರರಿಗೆ ಅಪಾಯಕಾರಿಯಾಗಿಯೇ ಇದೆ. ಮಳೆಗಾಲ ಪ್ರಾರಂಭವಾಗಿ ಹದಿನೈದು ದಿನವಾಗುತ್ತ ಬಂದಿದ್ದು ಲೋಕೋಪಯೋಗಿ ಇಲಾಖೆ ರಸ್ತೆ ಹೊಂಡ ಮುಚ್ಚುವ ಬಗ್ಗೆಯಾಗಲಿ ಗಟಾರ ಸ್ವಚ್ಛಗೊಳಿಸುವ ಬಗ್ಗೆಯಾಗಲಿ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಕೂಡಲೇ ಇಂತಹ ಹೊಂಡಗಳನ್ನು ಮುಚ್ಚುವ ಮೂಲಕ ವಾಹನ ಸವಾರರ ಪ್ರಾಣ ಉಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ

Vijaya Karnataka 10 Jul 2019, 5:00 am
ಸಿದ್ದಾಪುರ : ಶಿರಸಿ-ಸಿದ್ದಾಪುರ ಮುಖ್ಯ ರಸ್ತೆಯು ಸಂಪೂರ್ಣ ಹಾಳಾಗಿದ್ದು ರಸ್ತೆ ಮಧ್ಯದಲ್ಲಿರುವ ಆಳದ ಹೊಂಡಗಳು ವಾಹನಸವಾರರಿಗೆ ಅಪಾಯಕಾರಿಯಾಗಿವೆ. ನಾಣಿಕಟ್ಟಾ ಸಮೀಪದ ತ್ಯಾಗಲಿಯಲ್ಲಿ ಎರಡು ಅಡಿ ಆಳದ ಮೂರ್ನಾಲ್ಕು ಹೊಂಡಗಳಿದ್ದು ಸ್ಥಳೀಯರು ಈ ಹೊಂಡಗಳಿಂದ ಆಗುವ ಅಪಾಯ ತಪ್ಪಿಸಲು ಬೇಲಿ ನಿರ್ಮಿಸಿದ್ದಾರೆ. ಆದರೆ ರಾತ್ರಿಯ ಸಮಯದಲ್ಲಿ ಈ ಬೇಲಿಯೂ ವಾಹನ ಸವಾರರಿಗೆ ಅಪಾಯಕಾರಿಯಾಗಿಯೇ ಇದೆ. ಮಳೆಗಾಲ ಪ್ರಾರಂಭವಾಗಿ ಹದಿನೈದು ದಿನವಾಗುತ್ತ ಬಂದಿದ್ದು ಲೋಕೋಪಯೋಗಿ ಇಲಾಖೆ ರಸ್ತೆ ಹೊಂಡ ಮುಚ್ಚುವ ಬಗ್ಗೆಯಾಗಲಿ ಗಟಾರ ಸ್ವಚ್ಛಗೊಳಿಸುವ ಬಗ್ಗೆಯಾಗಲಿ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಕೂಡಲೇ ಇಂತಹ ಹೊಂಡಗಳನ್ನು ಮುಚ್ಚುವ ಮೂಲಕ ವಾಹನ ಸವಾರರ ಪ್ರಾಣ ಉಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ
Vijaya Karnataka Web KWR-8SDPR2



ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ